<p><strong>ಲಖನೌ:</strong> ‘ಪಾಕಿಸ್ತಾನದಲ್ಲಿ ಏನಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ನಂಕಾನಾ ಸಾಹಿಬ್ (ಗುರು ನಾನಕ್ ಅವರ ಹುಟ್ಟಿದೂರು) ನಮ್ಮಿಂದ ಇನ್ನಷ್ಟು ವರ್ಷ ದೂರ ಇರಬೇಕು? ನಾವು ನಮ್ಮ ಹಕ್ಕುಗಳನ್ನು ವಾಪಸ್ ಪಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು.</p>.<p>ಇಲ್ಲಿನ ಯಹಿಯಗಂಜ್ ಗುರುದ್ವಾರದಲ್ಲಿ ನಡೆದ ಒಂಭತ್ತನೇ ಸಿಖ್ ಗುರು ಶ್ರೀ ತೇಜ್ ಬಹುದ್ದೂರ್ ಜಿ ಮಹರಾಜ್ ಅವರ ‘ಬಲಿದಾನ ದಿವಸ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇತಿಹಾಸವು ನಮಗೆ ಅವಕಾಶ ನೀಡುತ್ತಿದೆ. ಹಿಂದೂಗಳು ಹಾಗೂ ಸಿಖ್ಖರ ಮಧ್ಯೆ ಜಗಳ ತಂದು ಹಾಕಲು ಯತ್ನಿಸಿಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.</p>.<p>‘ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಈ ಅಭಿಯಾನದಲ್ಲಿ ನಾವೆಲ್ಲರೂ ಒಂದಾಗಬೇಕು. ಇತಿಹಾಸವನ್ನು ಬಹಳ ವಿಕೃತ ರೀತಿಯಲ್ಲಿ ಮರುಕಳಿಸಲು ಕೆಲವರು ಯತ್ನಿಸುತ್ತಿದ್ದಾರೆ. ಗುರು ಪರಂಪರೆಯನ್ನು ನೆನಪಿನಲ್ಲಿಟ್ಟುಕೊಂಡು ಈ ಅಭಿಯಾನಕ್ಕೆ ನಾವು ಸಿದ್ಧರಾಗಬೇಕು’ ಎಂದರು.</p>.<p>‘ಈ ದೇಶ, ಧರ್ಮಕ್ಕಾಗಿ ಸಿಖ್ ಸಮುದಾಯದವರು ಹುತಾತ್ಮರಾಗಿದ್ದಾರೆ. ಇದನ್ನು ನಾವು ಅನುಸರಿಸಬೇಕು. ನಮ್ಮ ಮುಂದಿನ ಪೀಳಿಗೆಯವರ ಭವ್ಯ ಭವಿಷ್ಯಕ್ಕಾಗಿ ಇದನ್ನೇ ನಾವು ನಮ್ಮ ಇತಿಹಾಸವನ್ನಾಗಿ ಮಾಡಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಪಾಕಿಸ್ತಾನದಲ್ಲಿ ಏನಾಗಿತ್ತು ಎಂದು ಎಲ್ಲರಿಗೂ ತಿಳಿದಿದೆ. ನಂಕಾನಾ ಸಾಹಿಬ್ (ಗುರು ನಾನಕ್ ಅವರ ಹುಟ್ಟಿದೂರು) ನಮ್ಮಿಂದ ಇನ್ನಷ್ಟು ವರ್ಷ ದೂರ ಇರಬೇಕು? ನಾವು ನಮ್ಮ ಹಕ್ಕುಗಳನ್ನು ವಾಪಸ್ ಪಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು.</p>.<p>ಇಲ್ಲಿನ ಯಹಿಯಗಂಜ್ ಗುರುದ್ವಾರದಲ್ಲಿ ನಡೆದ ಒಂಭತ್ತನೇ ಸಿಖ್ ಗುರು ಶ್ರೀ ತೇಜ್ ಬಹುದ್ದೂರ್ ಜಿ ಮಹರಾಜ್ ಅವರ ‘ಬಲಿದಾನ ದಿವಸ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇತಿಹಾಸವು ನಮಗೆ ಅವಕಾಶ ನೀಡುತ್ತಿದೆ. ಹಿಂದೂಗಳು ಹಾಗೂ ಸಿಖ್ಖರ ಮಧ್ಯೆ ಜಗಳ ತಂದು ಹಾಕಲು ಯತ್ನಿಸಿಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.</p>.<p>‘ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಈ ಅಭಿಯಾನದಲ್ಲಿ ನಾವೆಲ್ಲರೂ ಒಂದಾಗಬೇಕು. ಇತಿಹಾಸವನ್ನು ಬಹಳ ವಿಕೃತ ರೀತಿಯಲ್ಲಿ ಮರುಕಳಿಸಲು ಕೆಲವರು ಯತ್ನಿಸುತ್ತಿದ್ದಾರೆ. ಗುರು ಪರಂಪರೆಯನ್ನು ನೆನಪಿನಲ್ಲಿಟ್ಟುಕೊಂಡು ಈ ಅಭಿಯಾನಕ್ಕೆ ನಾವು ಸಿದ್ಧರಾಗಬೇಕು’ ಎಂದರು.</p>.<p>‘ಈ ದೇಶ, ಧರ್ಮಕ್ಕಾಗಿ ಸಿಖ್ ಸಮುದಾಯದವರು ಹುತಾತ್ಮರಾಗಿದ್ದಾರೆ. ಇದನ್ನು ನಾವು ಅನುಸರಿಸಬೇಕು. ನಮ್ಮ ಮುಂದಿನ ಪೀಳಿಗೆಯವರ ಭವ್ಯ ಭವಿಷ್ಯಕ್ಕಾಗಿ ಇದನ್ನೇ ನಾವು ನಮ್ಮ ಇತಿಹಾಸವನ್ನಾಗಿ ಮಾಡಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>