<p><strong>ನವದೆಹಲಿ</strong>: ಭಾರತದಲ್ಲಿಯ ವಾಟ್ಸ್ ಆ್ಯಪ್ ಬಳಕೆದಾರರು ಇನ್ನು ಮುಂದೆ ಐದಕ್ಕಿಂತ ಹೆಚ್ಚು ಸಂದೇಶಗಳನ್ನು (ಚಿತ್ರ, ವಿಡಿಯೊ ಮತ್ತು ಸಂದೇಶ) ಒಟ್ಟಿಗೆ ಕಳಿಸುವುದು ಸಾಧ್ಯವಿಲ್ಲ.</p>.<p>ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ವಾಟ್ಸ್ ಆ್ಯಪ್ ಈ ಹೊಸಮಾರ್ಗ ಕಂಡುಕೊಂಡಿದೆ.</p>.<p>ಒಂದು ಬಾರಿಗೆ ಒಟ್ಟಿಗೆ ಐದಕ್ಕಿಂತ ಹೆಚ್ಚು ಸಂದೇಶ ಕಳಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ವಾಟ್ಸ್ ಆ್ಯಪ್ ಶುಕ್ರವಾರ ಪ್ರಕಟಿಸಿದೆ. ಹೊಸ ನಿಯಮ ಎಂದಿನಿಂದ ಅನ್ವಯವಾಗಲಿದೆ ಎಂಬುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಜಾಗತಿಕಮಟ್ಟದಲ್ಲಿ ಈ ಮಿತಿಯನ್ನು 20ಕ್ಕೆ ನಿಗದಿಗೊಳಿಸಲಾಗಿದೆ.</p>.<p>ಇಲ್ಲಿಯವರೆಗೆ ವಾಟ್ಸ್ ಆ್ಯಪ್ ಬಳಕೆದಾರರಿಗೆ ಸಂದೇಶ ಹಂಚಿಕೊಳ್ಳಲು ಯಾವುದೇ ಮಿತಿ ಇರಲಿಲ್ಲ. ಬಳಕೆದಾರರು ಏಕಕಾಲಕ್ಕೆ ಬೇಕಾದಷ್ಟು ಸಂದೇಶ ಹಂಚಿಕೊಳ್ಳಬಹುದಾಗಿತ್ತು.</p>.<p><strong>’ಕ್ವಿಕ್ ಫಾರ್ವಡ್ ಬಟನ್’ನಿಷ್ಕ್ರಿಯ:</strong>ತ್ವರಿತವಾಗಿ ಸಂದೇಶ ಹಂಚಿಕೊಳ್ಳಲು ರೂಪಿಸಲಾಗಿರುವ ಮಿಡಿಯಾ ಸಂದೇಶದ ಪಕ್ಕ ಕಾಣಿಸಿಕೊಳ್ಳುವ ’ಕ್ವಿಕ್ ಫಾರ್ವಡ್ ಬಟನ್’ ತೆಗೆದು ಹಾಕುವುದಾಗಿ ಸಂಸ್ಥೆ ತನ್ನ ಅಧಿಕೃತ ಬ್ಲಾಗ್ಸ್ಪಾಟ್ನಲ್ಲಿ ಪ್ರಕಟಿಸಿದೆ.</p>.<p>ಅಮಾಯಕರ ಮೇಲೆ ಹೆಚ್ಚುತ್ತಿರುವ ಗುಂಪು ದಾಳಿಗಳಿಗೆ ಪ್ರಚೋದನೆ ನೀಡುವ ಸುಳ್ಳುಸುದ್ದಿಗಳ ಪ್ರಸರಣಕ್ಕೆ ವಾಟ್ಸ್ ಆ್ಯಪ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸಂಸ್ಥೆ ಹೇಳಿದೆ.</p>.<p>ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಗುರುವಾರ ಸಂಸ್ಥೆಗೆ ಎರಡನೇ ನೋಟಿಸ್ ನೀಡಿತ್ತು.</p>.<p>ವದಂತಿ ಹರಡುವ ವೇದಿಕೆಯಾಗಿ ವಾಟ್ಸ್ ಆ್ಯಪ್ ದುರ್ಬಳಕೆಯಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಸಂಸ್ಥೆ ಈ ಕ್ರಮ ಕೈಗೊಂಡಿದೆ.</p>.<p>ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಒಡೆತನದ ವಾಟ್ಸ್ ಆ್ಯಪ್ ಜಾಗತಿಕವಾಗಿ ನೂರು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಆ ಪೈಕಿ 20 ಕೋಟಿ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ.<br />**</p>.<p><strong>ಪ್ರಸರಣ ತಡೆಗೆ ಖಾಸಗಿತನ ಅಡ್ಡಿ!</strong><br />ನಿಷ್ಪ್ರಯೋಜಕ ಸಂದೇಶ ಪ್ರಸರಣ ತಡೆಯಲು ಸಾಧ್ಯ. ಆದರೆ, ಖಾಸಗಿ ಸಂದೇಶಗಳ ಪರಿಶೀಲನೆ ನಿರ್ಬಂಧವಿರುವುದು ತನ್ನ ಕೈಗಳನ್ನು ಕಟ್ಟಿ ಹಾಕಿದೆ ಎಂದು ವಾಟ್ಸ್ ಆ್ಯಪ್ ಹೇಳಿದೆ.</p>.<p>ಆದರೆ, ಬಳಕೆದಾರರ ಚಟುವಟಿಕೆ ವರದಿಯ ಆಧಾರದ ಮೇಲೆ ಶಂಕಿತ ಸಂದೇಶಗಳ ಪ್ರಸರಣ ತಡೆಯಬಹುದು ಎಂದು ಮೊದಲ ನೋಟಿಸ್ಗೆ ಉತ್ತರ ನೀಡಿತ್ತು.</p>.<p>ಸರ್ಕಾರದ ಎರಡನೇ ನೋಟಿಸ್ಗೆ ವಾಟ್ಸ್ ಆ್ಯಪ್ ಇನ್ನೂ ಉತ್ತರ ನೀಡಿಲ್ಲವಾದರೂ, ತಾನು ಕೈಗೊಂಡ ಕ್ರಮಗಳನ್ನು ಬ್ಲಾಗ್ನಲ್ಲಿ ಪ್ರಕಟಿಸಿದೆ.<br />**<br /><strong>ಭಾರತಕ್ಕೂ ಬರಲಿದೆ ‘ವೆರಿಫಿಕಾಡೊ’</strong><br />ಭಾರತದಲ್ಲಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ವಾಟ್ಸ್ ಆ್ಯಪ್ ದುರ್ಬಳಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಾಟ್ಸ್ ಆ್ಯಪ್ ಶುಕ್ರವಾರ ಚುನಾವಣಾ ಆಯೋಗಕ್ಕೆ ಭರವಸೆ ನೀಡಿದೆ.</p>.<p>ಈ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಜಾಗತಿಕ ತಂತ್ರಜ್ಞರ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.</p>.<p>ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಸುಳ್ಳು ಸುದ್ದಿ ಪರಿಶೀಲನಾ ಮಾದರಿ ’ವೆರಿಫಿಕಾಡೊ’ ಅನ್ನು ಭಾರತದ ಮಾರುಕಟ್ಟೆಗೂ ಪರಿಚಯಿಸುವುದಾಗಿ ಸಂಸ್ಥೆ ತಿಳಿಸಿದೆ.</p>.<p>‘ವೆರಿಫಿಕಾಡೊ’ ಮಾದರಿಯನ್ನು ಈಗಾಗಲೇ ಮೆಕ್ಸಿಕೊ ಮತ್ತು ಬ್ರೆಜಿಲ್ ಚುನಾವಣೆ ಸಂದರ್ಭದಲ್ಲಿ ಅಳವಡಿಸಲಾಗಿತ್ತು. ಅದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.</p>.<p>ಈಗಾಗಲೇ ಭಾರತದಲ್ಲಿರುವ ಸಂಸ್ಥೆಯ ಜಾಗತಿಕ ತಂತ್ರಜ್ಞರ ತಂಡವು ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ತಂತ್ರಜ್ಞರ ಜತೆ ಚರ್ಚೆಯಲ್ಲಿ ತೊಡಗಿದೆ.<br />**<br /><strong>ಹೊಸ ಕ್ರಮಗಳೇನು?</strong><br />* ಮುಂದಿನ ದಿನಗಳಲ್ಲಿ ಖಾಸಗಿತನ ರಕ್ಷಣೆ ಮತ್ತು ಸುರಕ್ಷತೆಯ ಇನ್ನಷ್ಟ ಕ್ರಮಗಳನ್ನು ಅಳವಡಿಸುವ ಭರವಸೆ<br />* ‘ಫಾರ್ವರ್ಡೆಡ್ ಮೆಸೇಜ್’ ಸ್ಪಷ್ಟವಾಗಿ ಗುರುತಿಸಲು ಮತ್ತು ಗುಂಪು ಸಂಭಾಷಣೆಗೆ ಕಡಿವಾಣ ಹಾಕಲು ಹೊಸ ಸುರಕ್ಷತಾ ಕ್ರಮ ಅಳವಡಿಕೆ<br />* ಸುದ್ದಿಗಳ ನೈಜತೆ ಖಚಿತಪಡಿಸಿಕೊಳ್ಳಲು ಬಳಕೆದಾರರಿಗೆ ಕೆಲವು ಸಲಹೆ, ಸೂಚನೆ ನೀಡಿ ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಜಾಹೀರಾತು<br />* ಸುಳ್ಳುಸುದ್ದಿ ಪತ್ತೆಗೆ ಬಳಕೆದಾರರಿಗೆ ನೆರವಾಗಲು ಭಾರತದಲ್ಲಿ 12ಕ್ಕೂ ಹೆಚ್ಚು ಕಂಪನಿಗಳ ಜತೆಗೂಡಿ ‘ಡಿಜಿಟಲ್ ಶಿಕ್ಷಣ ಯೋಜನೆ’ ರೂಪಿಸುವ ಯತ್ನ<br />***<br />ಇತರ ದೇಶಗಳಿಗೆ ಹೋಲಿಸಿದರೆ ಭಾರತದ ವಾಟ್ಸ್ ಆ್ಯಪ್ ಬಳಕೆದಾರರು ಅತಿ ಹೆಚ್ಚು ಸಂದೇಶ, ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.<br /><strong>– ವಾಟ್ಸ್ ಆ್ಯಪ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತದಲ್ಲಿಯ ವಾಟ್ಸ್ ಆ್ಯಪ್ ಬಳಕೆದಾರರು ಇನ್ನು ಮುಂದೆ ಐದಕ್ಕಿಂತ ಹೆಚ್ಚು ಸಂದೇಶಗಳನ್ನು (ಚಿತ್ರ, ವಿಡಿಯೊ ಮತ್ತು ಸಂದೇಶ) ಒಟ್ಟಿಗೆ ಕಳಿಸುವುದು ಸಾಧ್ಯವಿಲ್ಲ.</p>.<p>ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ವಾಟ್ಸ್ ಆ್ಯಪ್ ಈ ಹೊಸಮಾರ್ಗ ಕಂಡುಕೊಂಡಿದೆ.</p>.<p>ಒಂದು ಬಾರಿಗೆ ಒಟ್ಟಿಗೆ ಐದಕ್ಕಿಂತ ಹೆಚ್ಚು ಸಂದೇಶ ಕಳಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ವಾಟ್ಸ್ ಆ್ಯಪ್ ಶುಕ್ರವಾರ ಪ್ರಕಟಿಸಿದೆ. ಹೊಸ ನಿಯಮ ಎಂದಿನಿಂದ ಅನ್ವಯವಾಗಲಿದೆ ಎಂಬುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಜಾಗತಿಕಮಟ್ಟದಲ್ಲಿ ಈ ಮಿತಿಯನ್ನು 20ಕ್ಕೆ ನಿಗದಿಗೊಳಿಸಲಾಗಿದೆ.</p>.<p>ಇಲ್ಲಿಯವರೆಗೆ ವಾಟ್ಸ್ ಆ್ಯಪ್ ಬಳಕೆದಾರರಿಗೆ ಸಂದೇಶ ಹಂಚಿಕೊಳ್ಳಲು ಯಾವುದೇ ಮಿತಿ ಇರಲಿಲ್ಲ. ಬಳಕೆದಾರರು ಏಕಕಾಲಕ್ಕೆ ಬೇಕಾದಷ್ಟು ಸಂದೇಶ ಹಂಚಿಕೊಳ್ಳಬಹುದಾಗಿತ್ತು.</p>.<p><strong>’ಕ್ವಿಕ್ ಫಾರ್ವಡ್ ಬಟನ್’ನಿಷ್ಕ್ರಿಯ:</strong>ತ್ವರಿತವಾಗಿ ಸಂದೇಶ ಹಂಚಿಕೊಳ್ಳಲು ರೂಪಿಸಲಾಗಿರುವ ಮಿಡಿಯಾ ಸಂದೇಶದ ಪಕ್ಕ ಕಾಣಿಸಿಕೊಳ್ಳುವ ’ಕ್ವಿಕ್ ಫಾರ್ವಡ್ ಬಟನ್’ ತೆಗೆದು ಹಾಕುವುದಾಗಿ ಸಂಸ್ಥೆ ತನ್ನ ಅಧಿಕೃತ ಬ್ಲಾಗ್ಸ್ಪಾಟ್ನಲ್ಲಿ ಪ್ರಕಟಿಸಿದೆ.</p>.<p>ಅಮಾಯಕರ ಮೇಲೆ ಹೆಚ್ಚುತ್ತಿರುವ ಗುಂಪು ದಾಳಿಗಳಿಗೆ ಪ್ರಚೋದನೆ ನೀಡುವ ಸುಳ್ಳುಸುದ್ದಿಗಳ ಪ್ರಸರಣಕ್ಕೆ ವಾಟ್ಸ್ ಆ್ಯಪ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸಂಸ್ಥೆ ಹೇಳಿದೆ.</p>.<p>ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಗುರುವಾರ ಸಂಸ್ಥೆಗೆ ಎರಡನೇ ನೋಟಿಸ್ ನೀಡಿತ್ತು.</p>.<p>ವದಂತಿ ಹರಡುವ ವೇದಿಕೆಯಾಗಿ ವಾಟ್ಸ್ ಆ್ಯಪ್ ದುರ್ಬಳಕೆಯಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಸಂಸ್ಥೆ ಈ ಕ್ರಮ ಕೈಗೊಂಡಿದೆ.</p>.<p>ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಒಡೆತನದ ವಾಟ್ಸ್ ಆ್ಯಪ್ ಜಾಗತಿಕವಾಗಿ ನೂರು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಆ ಪೈಕಿ 20 ಕೋಟಿ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ.<br />**</p>.<p><strong>ಪ್ರಸರಣ ತಡೆಗೆ ಖಾಸಗಿತನ ಅಡ್ಡಿ!</strong><br />ನಿಷ್ಪ್ರಯೋಜಕ ಸಂದೇಶ ಪ್ರಸರಣ ತಡೆಯಲು ಸಾಧ್ಯ. ಆದರೆ, ಖಾಸಗಿ ಸಂದೇಶಗಳ ಪರಿಶೀಲನೆ ನಿರ್ಬಂಧವಿರುವುದು ತನ್ನ ಕೈಗಳನ್ನು ಕಟ್ಟಿ ಹಾಕಿದೆ ಎಂದು ವಾಟ್ಸ್ ಆ್ಯಪ್ ಹೇಳಿದೆ.</p>.<p>ಆದರೆ, ಬಳಕೆದಾರರ ಚಟುವಟಿಕೆ ವರದಿಯ ಆಧಾರದ ಮೇಲೆ ಶಂಕಿತ ಸಂದೇಶಗಳ ಪ್ರಸರಣ ತಡೆಯಬಹುದು ಎಂದು ಮೊದಲ ನೋಟಿಸ್ಗೆ ಉತ್ತರ ನೀಡಿತ್ತು.</p>.<p>ಸರ್ಕಾರದ ಎರಡನೇ ನೋಟಿಸ್ಗೆ ವಾಟ್ಸ್ ಆ್ಯಪ್ ಇನ್ನೂ ಉತ್ತರ ನೀಡಿಲ್ಲವಾದರೂ, ತಾನು ಕೈಗೊಂಡ ಕ್ರಮಗಳನ್ನು ಬ್ಲಾಗ್ನಲ್ಲಿ ಪ್ರಕಟಿಸಿದೆ.<br />**<br /><strong>ಭಾರತಕ್ಕೂ ಬರಲಿದೆ ‘ವೆರಿಫಿಕಾಡೊ’</strong><br />ಭಾರತದಲ್ಲಿ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ವಾಟ್ಸ್ ಆ್ಯಪ್ ದುರ್ಬಳಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಾಟ್ಸ್ ಆ್ಯಪ್ ಶುಕ್ರವಾರ ಚುನಾವಣಾ ಆಯೋಗಕ್ಕೆ ಭರವಸೆ ನೀಡಿದೆ.</p>.<p>ಈ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಜಾಗತಿಕ ತಂತ್ರಜ್ಞರ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.</p>.<p>ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಸುಳ್ಳು ಸುದ್ದಿ ಪರಿಶೀಲನಾ ಮಾದರಿ ’ವೆರಿಫಿಕಾಡೊ’ ಅನ್ನು ಭಾರತದ ಮಾರುಕಟ್ಟೆಗೂ ಪರಿಚಯಿಸುವುದಾಗಿ ಸಂಸ್ಥೆ ತಿಳಿಸಿದೆ.</p>.<p>‘ವೆರಿಫಿಕಾಡೊ’ ಮಾದರಿಯನ್ನು ಈಗಾಗಲೇ ಮೆಕ್ಸಿಕೊ ಮತ್ತು ಬ್ರೆಜಿಲ್ ಚುನಾವಣೆ ಸಂದರ್ಭದಲ್ಲಿ ಅಳವಡಿಸಲಾಗಿತ್ತು. ಅದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.</p>.<p>ಈಗಾಗಲೇ ಭಾರತದಲ್ಲಿರುವ ಸಂಸ್ಥೆಯ ಜಾಗತಿಕ ತಂತ್ರಜ್ಞರ ತಂಡವು ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ತಂತ್ರಜ್ಞರ ಜತೆ ಚರ್ಚೆಯಲ್ಲಿ ತೊಡಗಿದೆ.<br />**<br /><strong>ಹೊಸ ಕ್ರಮಗಳೇನು?</strong><br />* ಮುಂದಿನ ದಿನಗಳಲ್ಲಿ ಖಾಸಗಿತನ ರಕ್ಷಣೆ ಮತ್ತು ಸುರಕ್ಷತೆಯ ಇನ್ನಷ್ಟ ಕ್ರಮಗಳನ್ನು ಅಳವಡಿಸುವ ಭರವಸೆ<br />* ‘ಫಾರ್ವರ್ಡೆಡ್ ಮೆಸೇಜ್’ ಸ್ಪಷ್ಟವಾಗಿ ಗುರುತಿಸಲು ಮತ್ತು ಗುಂಪು ಸಂಭಾಷಣೆಗೆ ಕಡಿವಾಣ ಹಾಕಲು ಹೊಸ ಸುರಕ್ಷತಾ ಕ್ರಮ ಅಳವಡಿಕೆ<br />* ಸುದ್ದಿಗಳ ನೈಜತೆ ಖಚಿತಪಡಿಸಿಕೊಳ್ಳಲು ಬಳಕೆದಾರರಿಗೆ ಕೆಲವು ಸಲಹೆ, ಸೂಚನೆ ನೀಡಿ ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಜಾಹೀರಾತು<br />* ಸುಳ್ಳುಸುದ್ದಿ ಪತ್ತೆಗೆ ಬಳಕೆದಾರರಿಗೆ ನೆರವಾಗಲು ಭಾರತದಲ್ಲಿ 12ಕ್ಕೂ ಹೆಚ್ಚು ಕಂಪನಿಗಳ ಜತೆಗೂಡಿ ‘ಡಿಜಿಟಲ್ ಶಿಕ್ಷಣ ಯೋಜನೆ’ ರೂಪಿಸುವ ಯತ್ನ<br />***<br />ಇತರ ದೇಶಗಳಿಗೆ ಹೋಲಿಸಿದರೆ ಭಾರತದ ವಾಟ್ಸ್ ಆ್ಯಪ್ ಬಳಕೆದಾರರು ಅತಿ ಹೆಚ್ಚು ಸಂದೇಶ, ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.<br /><strong>– ವಾಟ್ಸ್ ಆ್ಯಪ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>