ತೀವ್ರಗಾಮಿ ಸಿದ್ಧಾಂತದಲ್ಲಿ ನಂಬಿಕೆ ಇರಿಸಿಕೊಂಡಿರುವ ಮಾನ್ ಅವರ ಪಕ್ಷ ಎಸ್ಎಡಿ (ಅಮೃತಸರ), ಪ್ರತ್ಯೇಕ ಖಲಿಸ್ತಾನಕ್ಕಾಗಿ ಬೇಡಿಕೆಯಿಟ್ಟು ಚುನಾವಣೆಗೆ ಸ್ಪರ್ಧಿಸಿರುವ ಏಕೈಕ ಪಕ್ಷವಾಗಿದೆ.ಮುಖ್ಯವಾಹಿನಿಯ ಪಕ್ಷಗಳೊಂದಿಗೆ ಮಾನ್ ಅವರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಕರ್ನಾಟಕದ ಹಿಜಾಬ್ ಗದ್ದಲದ ಕುರಿತು ಅವರು ತೆಗೆದುಕೊಂಡ ನಿಲುವು ಮುಸ್ಲಿಂ ಪ್ರಾಬಲ್ಯದ ಮಲೇರ್ಕೋಟ್ಲಾದಲ್ಲಿ ಮಹತ್ವ ಪಡೆದುಕೊಂಡಿದೆ.