<p><strong>ಬೆಂಗಳೂರು:</strong> ಕೇಂದ್ರ ಸರ್ಕಾರ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆ ಉಪ ಸಭಾಪತಿಎಂ.ತಂಬಿದುರೈ <a href="https://www.thehindu.com/news/national/tamil-nadu/why-should-a-scheme-in-tamil-nadu-be-named-in-hindi/article25470681.ece?homepage=true&utm_campaign=socialflow&fbclid=IwAR2Lq_ix1RuvZwHW84f7kPxLsn7fDWdOLwOwtYEI14awa6XFk7zDkJ5WYnc" target="_blank">ದಿ ಹಿಂದು</a>ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಮವಾರ ಸಂದರ್ಶನ ಪ್ರಕಟಗೊಂಡಿದೆ.</p>.<p>ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂದು ಎಐಎಡಿಎಂಕೆ ಮುಖಂಡ ಹೇಳಿದ್ದಾರೆ. ಸಂವಿಧಾನದ <strong>ಎಂಟನೇ ಪರಿಚ್ಛೇದ</strong> ವಿವಿಧ ರಾಜ್ಯ ಸರ್ಕಾರಗಳು ಬಳಸುತ್ತಿರುವ 22 ಅಧಿಕೃತ ಭಾಷೆಗಳನ್ನು ಒಳಗೊಂಡಿದೆ.</p>.<p>‘ಯುರೋಪ್ ರಾಷ್ಟ್ರಗಳಲ್ಲಿ ಕೇವಲ ಶೇ 2ರಷ್ಟು ಜನರು ಮಾತನಾಡುವ ಭಾಷೆಯನ್ನು ಅಧಿಕೃತಗೊಳಿಸಲಾಗುತ್ತದೆ. ಅದನ್ನು ನಮ್ಮ ರಾಷ್ಟ್ರದಲ್ಲಿ ಮಾಡಲು ಏಕೆ ಸಾಧ್ಯವಿಲ್ಲ?’ ಎಂದು ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದಾರೆ.</p>.<p>ಕೇಂದ್ರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದಿರುವ ಅವರು, ‘ತಮಿಳುನಾಡಿನಲ್ಲಿ ಯೋಜನೆಗೆ ಹಿಂದಿಯ ಹೆಸರನ್ನು ಯಾವುದಕ್ಕಾಗಿ ಇಡಬೇಕು? ಹಿಂದಿ ಭಾಷೆಯನ್ನು ಆಡುವ ಭಾಗಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಿಗೆ ಹಿಂದಿಯಲ್ಲಿಯೇ ಹೆಸರು ಇರುವುದಕ್ಕೆ ನನ್ನ ವಿರೋಧವಿಲ್ಲ. ಉದಾಹರಣೆಗೆ, <strong>ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ</strong>; ಇಂಥ ಹೆಸರುಗಳು ಇಲ್ಲಿ ತಮಿಳುನಾಡಿನಲ್ಲಿ ನಮಗೆ ಅರ್ಥವೇ ಆಗುವುದಿಲ್ಲ’ ಎಂದಿದ್ದಾರೆ.</p>.<p>‘ಅಮ್ಮ(ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ) ಇರುವವರೆಗೂ, ಅವರು ಬಿಜೆಪಿ ಬಗೆಗೆ ವಿಮರ್ಶಾತ್ಮಕ ನಡೆಯನ್ನೇ ಹೊಂದಿದ್ದರು. ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿರುವ ನಾನು ಅಗತ್ಯ ಸಮಯದಲ್ಲಿ ಕೇಂದ್ರ ಸರ್ಕಾರದ ಟೀಕಾಕಾರನಾಗಿ ವರ್ತಿಸುತ್ತೇನೆ’ ಎಂದು ಬಿಜೆಪಿ ಬಗೆಗಿನ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.</p>.<p>‘ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳೇ ಅನುಷ್ಠಾನಗೊಳಿಸುವುದಾದರೂ, ಕೇಂದ್ರ ಯೋಜನೆಗೆ ಅಗತ್ಯವಿರುವ ಅನುದಾನ ಹಂಚಿಕೆ ಮಾಡುತ್ತದೆ ಹಾಗೂ ಕೆಲವು ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸೂಚಿಸುತ್ತದೆ. ಕೇಂದ್ರದಿಂದಾಗಿಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳಬಾರದು...’</p>.<p>‘ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎಐಎಡಿಎಂಕೆಗೆ ಮಹತ್ವ ನೀಡುತ್ತವೆ, ಉಳಿದ ಸಮಯದಲ್ಲಿ ನಮಗೆ ಅದೇ ಪ್ರಾಮುಖ್ಯತೆ ನೀಡುವುದಿಲ್ಲ’ ಎಂದು ತಂಬಿದುರೈ ರಾಜಕೀಯ ರಂಗದ ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಸರ್ಕಾರ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆ ಉಪ ಸಭಾಪತಿಎಂ.ತಂಬಿದುರೈ <a href="https://www.thehindu.com/news/national/tamil-nadu/why-should-a-scheme-in-tamil-nadu-be-named-in-hindi/article25470681.ece?homepage=true&utm_campaign=socialflow&fbclid=IwAR2Lq_ix1RuvZwHW84f7kPxLsn7fDWdOLwOwtYEI14awa6XFk7zDkJ5WYnc" target="_blank">ದಿ ಹಿಂದು</a>ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಮವಾರ ಸಂದರ್ಶನ ಪ್ರಕಟಗೊಂಡಿದೆ.</p>.<p>ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂದು ಎಐಎಡಿಎಂಕೆ ಮುಖಂಡ ಹೇಳಿದ್ದಾರೆ. ಸಂವಿಧಾನದ <strong>ಎಂಟನೇ ಪರಿಚ್ಛೇದ</strong> ವಿವಿಧ ರಾಜ್ಯ ಸರ್ಕಾರಗಳು ಬಳಸುತ್ತಿರುವ 22 ಅಧಿಕೃತ ಭಾಷೆಗಳನ್ನು ಒಳಗೊಂಡಿದೆ.</p>.<p>‘ಯುರೋಪ್ ರಾಷ್ಟ್ರಗಳಲ್ಲಿ ಕೇವಲ ಶೇ 2ರಷ್ಟು ಜನರು ಮಾತನಾಡುವ ಭಾಷೆಯನ್ನು ಅಧಿಕೃತಗೊಳಿಸಲಾಗುತ್ತದೆ. ಅದನ್ನು ನಮ್ಮ ರಾಷ್ಟ್ರದಲ್ಲಿ ಮಾಡಲು ಏಕೆ ಸಾಧ್ಯವಿಲ್ಲ?’ ಎಂದು ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದಾರೆ.</p>.<p>ಕೇಂದ್ರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದಿರುವ ಅವರು, ‘ತಮಿಳುನಾಡಿನಲ್ಲಿ ಯೋಜನೆಗೆ ಹಿಂದಿಯ ಹೆಸರನ್ನು ಯಾವುದಕ್ಕಾಗಿ ಇಡಬೇಕು? ಹಿಂದಿ ಭಾಷೆಯನ್ನು ಆಡುವ ಭಾಗಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಿಗೆ ಹಿಂದಿಯಲ್ಲಿಯೇ ಹೆಸರು ಇರುವುದಕ್ಕೆ ನನ್ನ ವಿರೋಧವಿಲ್ಲ. ಉದಾಹರಣೆಗೆ, <strong>ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ</strong>; ಇಂಥ ಹೆಸರುಗಳು ಇಲ್ಲಿ ತಮಿಳುನಾಡಿನಲ್ಲಿ ನಮಗೆ ಅರ್ಥವೇ ಆಗುವುದಿಲ್ಲ’ ಎಂದಿದ್ದಾರೆ.</p>.<p>‘ಅಮ್ಮ(ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ) ಇರುವವರೆಗೂ, ಅವರು ಬಿಜೆಪಿ ಬಗೆಗೆ ವಿಮರ್ಶಾತ್ಮಕ ನಡೆಯನ್ನೇ ಹೊಂದಿದ್ದರು. ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿರುವ ನಾನು ಅಗತ್ಯ ಸಮಯದಲ್ಲಿ ಕೇಂದ್ರ ಸರ್ಕಾರದ ಟೀಕಾಕಾರನಾಗಿ ವರ್ತಿಸುತ್ತೇನೆ’ ಎಂದು ಬಿಜೆಪಿ ಬಗೆಗಿನ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.</p>.<p>‘ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳೇ ಅನುಷ್ಠಾನಗೊಳಿಸುವುದಾದರೂ, ಕೇಂದ್ರ ಯೋಜನೆಗೆ ಅಗತ್ಯವಿರುವ ಅನುದಾನ ಹಂಚಿಕೆ ಮಾಡುತ್ತದೆ ಹಾಗೂ ಕೆಲವು ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸೂಚಿಸುತ್ತದೆ. ಕೇಂದ್ರದಿಂದಾಗಿಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳಬಾರದು...’</p>.<p>‘ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎಐಎಡಿಎಂಕೆಗೆ ಮಹತ್ವ ನೀಡುತ್ತವೆ, ಉಳಿದ ಸಮಯದಲ್ಲಿ ನಮಗೆ ಅದೇ ಪ್ರಾಮುಖ್ಯತೆ ನೀಡುವುದಿಲ್ಲ’ ಎಂದು ತಂಬಿದುರೈ ರಾಜಕೀಯ ರಂಗದ ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>