<p><strong>ಚೆನ್ನೈ:</strong> ‘ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಡಿಎಂಕೆಯ ಯುವ ಘಟಕದ ಕಾರ್ಯಕರ್ತರೊಬ್ಬರು ನನಗೆ ಒತ್ತಾಯ ಮಾಡುತ್ತಿದ್ದಾರೆ’ ಎಂದು ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ 20 ವರ್ಷದ ಯುವತಿಯೊಬ್ಬರು ಆರೋಪಿಸಿದ್ದಾರೆ. </p>.<p>ಯುವತಿಯು ಆರೋಪ ಮಾಡಿದ ಬಳಿಕ ಡಿಎಂಕೆಯು, ಅರಕ್ಕೋಣಂ ಮೂಲದ ಕಾರ್ಯಕರ್ತ ಆರ್ ತೈವ ಅಲಿಯಾಸ್ ತೈವಸೆಯಲ್ ಅವರನ್ನು ಪಕ್ಷದಿಂದ ಹುದ್ದೆಯಿಂದ ಬುಧವಾರ ಅಮಾನತು ಮಾಡಿದೆ. ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿದೆ. </p>.<p>ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಎಐಎಡಿಎಂಕೆಯು ಡಿಎಂಕೆ ವಿರುದ್ಧ ರಾಣಿಪೇಟ್ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಪಕ್ಷದ ನಾಯಕಿ ಬಿ. ವಲರಮತಿ ಅವರು, ‘ಯುವತಿಗೆ ನ್ಯಾಯ ದೊರಕುವವರೆಗೂ ಎಐಎಡಿಎಂಕೆಯ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ತಿಳಿಸಿದ್ದಾರೆ. </p>.<p>‘ಆರೋಪಿ ಡಿಎಂಕೆ ಕಾರ್ಯಕರ್ತನ ವಿರುದ್ಧ ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ನಮಗೆ ತಿಳಿಸಬೇಕು. ಕ್ರಮ ಜರುಗಿಸದೇ ಇದ್ದರೆ ನಮ್ಮ ಪಕ್ಷ ಬೃಹತ್ ಪ್ರತಿಭಟನೆ ನಡೆಸುತ್ತದೆ’ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ‘ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಡಿಎಂಕೆಯ ಯುವ ಘಟಕದ ಕಾರ್ಯಕರ್ತರೊಬ್ಬರು ನನಗೆ ಒತ್ತಾಯ ಮಾಡುತ್ತಿದ್ದಾರೆ’ ಎಂದು ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ 20 ವರ್ಷದ ಯುವತಿಯೊಬ್ಬರು ಆರೋಪಿಸಿದ್ದಾರೆ. </p>.<p>ಯುವತಿಯು ಆರೋಪ ಮಾಡಿದ ಬಳಿಕ ಡಿಎಂಕೆಯು, ಅರಕ್ಕೋಣಂ ಮೂಲದ ಕಾರ್ಯಕರ್ತ ಆರ್ ತೈವ ಅಲಿಯಾಸ್ ತೈವಸೆಯಲ್ ಅವರನ್ನು ಪಕ್ಷದಿಂದ ಹುದ್ದೆಯಿಂದ ಬುಧವಾರ ಅಮಾನತು ಮಾಡಿದೆ. ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿದೆ. </p>.<p>ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಎಐಎಡಿಎಂಕೆಯು ಡಿಎಂಕೆ ವಿರುದ್ಧ ರಾಣಿಪೇಟ್ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಪಕ್ಷದ ನಾಯಕಿ ಬಿ. ವಲರಮತಿ ಅವರು, ‘ಯುವತಿಗೆ ನ್ಯಾಯ ದೊರಕುವವರೆಗೂ ಎಐಎಡಿಎಂಕೆಯ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ತಿಳಿಸಿದ್ದಾರೆ. </p>.<p>‘ಆರೋಪಿ ಡಿಎಂಕೆ ಕಾರ್ಯಕರ್ತನ ವಿರುದ್ಧ ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ನಮಗೆ ತಿಳಿಸಬೇಕು. ಕ್ರಮ ಜರುಗಿಸದೇ ಇದ್ದರೆ ನಮ್ಮ ಪಕ್ಷ ಬೃಹತ್ ಪ್ರತಿಭಟನೆ ನಡೆಸುತ್ತದೆ’ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>