<p><strong>ಗ್ಯಾಂಗ್ಟಕ್ (ಪಿಟಿಐ):</strong> ಭೂಕಂಪನದಿಂದ ತತ್ತರಿಸಿರುವ ಸಿಕ್ಕಿಂನಲ್ಲಿ ಮರುಕಂಪನಗಳು ಉಂಟಾಗಬಹುದು ಎಂದು ಭೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಸಂಭವನೀಯ ಮರುಭೂಕಂಪವು ಭೂ ಮೇಲ್ಮೈ ಧಕ್ಕೆ ಮತ್ತು ಆಕೃತಿಯಲ್ಲಿ ಬದಲಾವಣೆ ಮಾಡುವುದರ ಜೊತೆಗೆ ತೀಸ್ತಾ ನದಿ ಹರಿವಿನ ಮಾರ್ಗದಲ್ಲೂ ಕೆಲವು ವ್ಯತ್ಯಾಸ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.<br /> <br /> ಸೆಪ್ಟೆಂಬರ್ 18ರಂದು ಸಂಭವಿಸಿದ ಭೂಕಂಪದ ರಿಕ್ಟರ್ ಪ್ರಮಾಣವು 6.8 ಇದ್ದ ಕಾರಣ, ಈ ವಲಯದಲ್ಲಿ ಮರು ಕಂಪನಗಳು ಆಗುವ ಸಾಧ್ಯತೆ ಇದೆ ಎಂದಿದ್ದಾರೆ.<br /> <br /> `ಗಿರಿ ಶ್ರೇಣಿಯಲ್ಲಿ ಭೂಕಂಪಗಳು ಸಂಭವಿಸಿದರೆ ಅದು ಭೂ ಮೇಲ್ಮೈಗೆ ಧಕ್ಕೆಯುಂಟು ಮಾಡುತ್ತವೆ. ಆಕೃತಿಯಲ್ಲೂ ಬದಲಾವಣೆ ಮಾಡುತ್ತವೆ. ಅದರ ಸ್ವರೂಪ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಈಗಲೇ ಅಳೆದು ಹೇಳಲಾಗದು~ ಎಂದು ಸಿಕ್ಕಂನಲ್ಲಿರುವ ಭಾರತೀಯ ಭೂ ಸರ್ವೇಕ್ಷಣಾಯದ ಹಿರಿಯ ಭೂ ವಿಜ್ಞಾನಿ ಪಾರಿತೋಷ್ ಭೌಮಿಕ್ ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.<br /> <br /> `ತೀಸ್ತಾ ನದಿ ಪಾತ್ರ ತೀವ್ರ ಭೂಕಂಪ ವಲಯ ವ್ಯಾಪ್ತಿಯಿಂದ ಹೊರಗಿದೆ. ಆದರೆ ಈ ಪ್ರದೇಶದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದರೆ ನೀರ್ಗಲ್ಲಿನ ಕೊಳಗಳು ಹೆಚ್ಚಾಗಬಹುದು ಮತ್ತೆ ಕೆಲವು ಕರಗಬಹುದು. ಇದರಿಂದ ನದಿ ಹರಿವಿನ ಮಾರ್ಗದಲ್ಲಿ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> `ಗುರುದಾಂಬಾರ್ನಲ್ಲಿರುವ `ಚಾಂಗ್ಖೆಂಪು~ ಮತ್ತು `ಜಿಮೊ~ ನೀರ್ಗಲ್ಲು ಕೊಳಗಳು ತೀಸ್ತಾ ನದಿ ಆಕರಗಳು. ಭೂಕಂಪದಿಂದ ಈ ಕೊಳಗಳು ಕರಗಿ ಪ್ರವಾಹ ಉಂಟಾಗಬಹುದು. ಆ ಮೂಲಕ ನದಿ ಹರಿವಿನ ಮಾರ್ಗದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ. ಆದರೆ ಇವೆಲ್ಲವೂ ಮರುಭೂಕಂಪನದ ಕೇಂದ್ರ ಬಿಂದು ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ~ ಎಂದು ಭೌಮಿಕ್ ಹೇಳಿದರು.<br /> <br /> ಇಂತಹದ್ದೇ ಅಭಿಪ್ರಾಯವನ್ನು ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆಯ ಸುಶೀಲ್ ಕುಮಾರ್ ಸಹ ವ್ಯಕ್ತಪಡಿಸಿದ್ದಾರೆ -`ಕಂಪನವು ತನ್ನ ಕೇಂದ್ರ ಬಿಂದುವಿನಲ್ಲೇ ತೀವ್ರತರಹವಾಗಿದ್ದರೆ ಪರಿಣಾಮವೂ ತೀವ್ರವಾಗಿರುತ್ತದೆ. ನೀರ್ಗಲ್ಲು ಕೊಳಗಳು ಒಡೆದುಹೋಗಲೂಬಹುದು. ದುರದೃಷ್ಟವೆಂದರೆ ಭೂಕಂಪ ವಲಯದ ಸಮೀಪದಲ್ಲೇ ಇಂತಹ ಅನೇಕ ನೀರ್ಗಲ್ಲು ಕೊಳಗಳಿವೆ.~<br /> <br /> ಹಿಮಾಲಯ ಶ್ರೇಣಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಆರು ಬಾರಿಯಾದರೂ ಸಣ್ಣ ಪ್ರಮಾಣದ ಕಂಪನಗಳು ಉಂಟಾಗುತ್ತಲೇ ಇರುತ್ತವೆ ಎಂದು ನೇಪಾಳ ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (ಎನ್ಎಸ್ಸಿ) ಹೇಳಿದೆ.<br /> <br /> `ರಿಕ್ಟರ್ ಪ್ರಮಾಣ ಐದು ಅಥವಾ ಅದಕ್ಕಿಂತ ಹೆಚ್ಚಿದ್ದಾಗ ಅದನ್ನು ಮತ್ತು ನಂತರ ಕಂಪನಗಳ ಪ್ರಮಾಣವನ್ನು ದಾಖಲು ಮಾಡಿಕೊಳ್ಳುತ್ತೇವೆ. ಇಂತಹದ್ದು ಹಿಮಾಲಯದಲ್ಲಿ ಸ್ವಾಭಾವಿಕ. ಆದರೆ ಈ ಕಂಪನಗಳು ಇಂತಹದ್ದೇ ನೀರ್ಗಲ್ಲು ಕೊಳದ ಬಳಿ ನಡೆಯುತ್ತದೆ ಎಂದು ನಿಖರವಾಗಿ ಹೇಳಲಾಗದು. ಏಕೆಂದರೆ ಕಂಪನವನ್ನು ಗುರುತಿಸುವ ಸಾಧನೆಗಳನ್ನು ನೀರ್ಗಲ್ಲು ಕೊಳದ ಸನಿಹ ಸ್ಥಾಪಿಸಿಲ್ಲ~ ಎಂದು ಎನ್ಸಿಎ ವಿಜ್ಞಾನಿ ದಿಲ್ರಾಮ್ ತಿವಾರಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ಯಾಂಗ್ಟಕ್ (ಪಿಟಿಐ):</strong> ಭೂಕಂಪನದಿಂದ ತತ್ತರಿಸಿರುವ ಸಿಕ್ಕಿಂನಲ್ಲಿ ಮರುಕಂಪನಗಳು ಉಂಟಾಗಬಹುದು ಎಂದು ಭೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಸಂಭವನೀಯ ಮರುಭೂಕಂಪವು ಭೂ ಮೇಲ್ಮೈ ಧಕ್ಕೆ ಮತ್ತು ಆಕೃತಿಯಲ್ಲಿ ಬದಲಾವಣೆ ಮಾಡುವುದರ ಜೊತೆಗೆ ತೀಸ್ತಾ ನದಿ ಹರಿವಿನ ಮಾರ್ಗದಲ್ಲೂ ಕೆಲವು ವ್ಯತ್ಯಾಸ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.<br /> <br /> ಸೆಪ್ಟೆಂಬರ್ 18ರಂದು ಸಂಭವಿಸಿದ ಭೂಕಂಪದ ರಿಕ್ಟರ್ ಪ್ರಮಾಣವು 6.8 ಇದ್ದ ಕಾರಣ, ಈ ವಲಯದಲ್ಲಿ ಮರು ಕಂಪನಗಳು ಆಗುವ ಸಾಧ್ಯತೆ ಇದೆ ಎಂದಿದ್ದಾರೆ.<br /> <br /> `ಗಿರಿ ಶ್ರೇಣಿಯಲ್ಲಿ ಭೂಕಂಪಗಳು ಸಂಭವಿಸಿದರೆ ಅದು ಭೂ ಮೇಲ್ಮೈಗೆ ಧಕ್ಕೆಯುಂಟು ಮಾಡುತ್ತವೆ. ಆಕೃತಿಯಲ್ಲೂ ಬದಲಾವಣೆ ಮಾಡುತ್ತವೆ. ಅದರ ಸ್ವರೂಪ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಈಗಲೇ ಅಳೆದು ಹೇಳಲಾಗದು~ ಎಂದು ಸಿಕ್ಕಂನಲ್ಲಿರುವ ಭಾರತೀಯ ಭೂ ಸರ್ವೇಕ್ಷಣಾಯದ ಹಿರಿಯ ಭೂ ವಿಜ್ಞಾನಿ ಪಾರಿತೋಷ್ ಭೌಮಿಕ್ ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.<br /> <br /> `ತೀಸ್ತಾ ನದಿ ಪಾತ್ರ ತೀವ್ರ ಭೂಕಂಪ ವಲಯ ವ್ಯಾಪ್ತಿಯಿಂದ ಹೊರಗಿದೆ. ಆದರೆ ಈ ಪ್ರದೇಶದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದರೆ ನೀರ್ಗಲ್ಲಿನ ಕೊಳಗಳು ಹೆಚ್ಚಾಗಬಹುದು ಮತ್ತೆ ಕೆಲವು ಕರಗಬಹುದು. ಇದರಿಂದ ನದಿ ಹರಿವಿನ ಮಾರ್ಗದಲ್ಲಿ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> `ಗುರುದಾಂಬಾರ್ನಲ್ಲಿರುವ `ಚಾಂಗ್ಖೆಂಪು~ ಮತ್ತು `ಜಿಮೊ~ ನೀರ್ಗಲ್ಲು ಕೊಳಗಳು ತೀಸ್ತಾ ನದಿ ಆಕರಗಳು. ಭೂಕಂಪದಿಂದ ಈ ಕೊಳಗಳು ಕರಗಿ ಪ್ರವಾಹ ಉಂಟಾಗಬಹುದು. ಆ ಮೂಲಕ ನದಿ ಹರಿವಿನ ಮಾರ್ಗದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ. ಆದರೆ ಇವೆಲ್ಲವೂ ಮರುಭೂಕಂಪನದ ಕೇಂದ್ರ ಬಿಂದು ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ~ ಎಂದು ಭೌಮಿಕ್ ಹೇಳಿದರು.<br /> <br /> ಇಂತಹದ್ದೇ ಅಭಿಪ್ರಾಯವನ್ನು ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆಯ ಸುಶೀಲ್ ಕುಮಾರ್ ಸಹ ವ್ಯಕ್ತಪಡಿಸಿದ್ದಾರೆ -`ಕಂಪನವು ತನ್ನ ಕೇಂದ್ರ ಬಿಂದುವಿನಲ್ಲೇ ತೀವ್ರತರಹವಾಗಿದ್ದರೆ ಪರಿಣಾಮವೂ ತೀವ್ರವಾಗಿರುತ್ತದೆ. ನೀರ್ಗಲ್ಲು ಕೊಳಗಳು ಒಡೆದುಹೋಗಲೂಬಹುದು. ದುರದೃಷ್ಟವೆಂದರೆ ಭೂಕಂಪ ವಲಯದ ಸಮೀಪದಲ್ಲೇ ಇಂತಹ ಅನೇಕ ನೀರ್ಗಲ್ಲು ಕೊಳಗಳಿವೆ.~<br /> <br /> ಹಿಮಾಲಯ ಶ್ರೇಣಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಆರು ಬಾರಿಯಾದರೂ ಸಣ್ಣ ಪ್ರಮಾಣದ ಕಂಪನಗಳು ಉಂಟಾಗುತ್ತಲೇ ಇರುತ್ತವೆ ಎಂದು ನೇಪಾಳ ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (ಎನ್ಎಸ್ಸಿ) ಹೇಳಿದೆ.<br /> <br /> `ರಿಕ್ಟರ್ ಪ್ರಮಾಣ ಐದು ಅಥವಾ ಅದಕ್ಕಿಂತ ಹೆಚ್ಚಿದ್ದಾಗ ಅದನ್ನು ಮತ್ತು ನಂತರ ಕಂಪನಗಳ ಪ್ರಮಾಣವನ್ನು ದಾಖಲು ಮಾಡಿಕೊಳ್ಳುತ್ತೇವೆ. ಇಂತಹದ್ದು ಹಿಮಾಲಯದಲ್ಲಿ ಸ್ವಾಭಾವಿಕ. ಆದರೆ ಈ ಕಂಪನಗಳು ಇಂತಹದ್ದೇ ನೀರ್ಗಲ್ಲು ಕೊಳದ ಬಳಿ ನಡೆಯುತ್ತದೆ ಎಂದು ನಿಖರವಾಗಿ ಹೇಳಲಾಗದು. ಏಕೆಂದರೆ ಕಂಪನವನ್ನು ಗುರುತಿಸುವ ಸಾಧನೆಗಳನ್ನು ನೀರ್ಗಲ್ಲು ಕೊಳದ ಸನಿಹ ಸ್ಥಾಪಿಸಿಲ್ಲ~ ಎಂದು ಎನ್ಸಿಎ ವಿಜ್ಞಾನಿ ದಿಲ್ರಾಮ್ ತಿವಾರಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>