ಬೆಳಗಾವಿಯಿಂದ ಹೆಲಿಕಾಪ್ಟರ್ ನಲ್ಲಿ ಕೆರಕಲಮಟ್ಟಿಗೆ ಬರಲಿರುವ ಅಮಿತ್ ಶಾ, ಕಾರ್ಖಾನೆಗಳ ಉದ್ಘಾಟನೆ ಹಾಗೂ ನಿರಾಣಿ ಸಮೂಹದಿಂದ ಪ್ರತಿದಿನ 75 ಸಾವಿರ ಟನ್ ಕಬ್ಬು ನುರಿಸುವ, 26 ಲಕ್ಷ ಲೀಟರ್ ಇಥೆನಾಲ್ ಹಾಗೂ 260 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ ಜೋಶಿ ಪಾಲ್ಗೊಳ್ಳಲಿದ್ದಾರೆ.