<p><strong>ಮೈಸೂರು:</strong> ‘ಪ್ರಸ್ತುತ ಕಾಲಘಟ್ಟದಲ್ಲಿ ವೈಚಾರಿಕ ವಾಗ್ವಾದಕ್ಕೆ ಜಾಗವಿಲ್ಲದಂತಾಗಿದೆ. ಸಂವಾದನೀಯ, ಸಹನೀಯ ಅಂಶಗಳು ನಾಶವಾಗುತ್ತಿವೆ. ಸಂಶೋಧಕರಿಗೆ ಬೆದರಿಕೆಗೆ ಪತ್ರಗಳು ಬರುವುದು, ನಮ್ಮಂಥವರಿಗೆ ಗನ್ಮ್ಯಾನ್ ಕೊಡುವುದು ಅಚ್ಚರಿ ಮೂಡಿ<br />ಸುವ ಸಂಗತಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.</p>.<p>ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಭಾನುವಾರ ಇಲ್ಲಿ ಆಯೋಜಿಸಿದ್ದ ಸಂಶೋಧಕ ‘ಡಾ.ಎಲ್.ಬಸವರಾಜು ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸದ್ಯ ನಾವು ವಿಭಜಿತ ಮನಸ್ಥಿತಿಯಲ್ಲಿದ್ದೇವೆ. ವಿಭಜಿತ ಓದು, ವಿಭಜಿತ ವಿಮರ್ಶೆ, ವಿಭಜಿತ ಸಂಶೋಧನೆ ನಡೆಯುತ್ತಿದೆ. ಇದೊಂದು ಉಗ್ರರೂಪವಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಒಂದು ಪಕ್ಷದ ಅಜೆಂಡಾಗಳಿಗೆ ಅನುಗುಣವಾಗಿ ಸಂಶೋಧನೆ ನಡೆಸುವ ಅನಾರೋಗ್ಯಕರ ಪ್ರವೃತ್ತಿ ಹೆಚ್ಚಿದೆ. ಹೀಗಾಗಿ, ತಾಜ್ಮಹಲ್, ಬಾಬ್ರಿ ಮಸೀದಿ, ಶಿವ ದೇವಾಲಯ, ಜೈನ ಮಂದಿರದ ಔಚಿತ್ಯ ಪ್ರಶ್ನಿಸಲಾಗುತ್ತಿದೆ. ಸಾಂಸ್ಕೃತಿಕ ಸಂಶೋಧಕರಿಗಿಂತ ರಾಜಕೀಯ ಸಂಶೋಧಕರು ಹೆಚ್ಚು ಪ್ರಚಾರ ಗಿಟ್ಟಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಚರಿತ್ರೆಯನ್ನು ಪುರಾಣ ಮಾಡುವ, ಪುರಾಣವನ್ನು ಚರಿತ್ರೆ ಮಾಡುವ ಅನೇಕರು ಸಂಶೋಧಕರೆಂಬ ಹಣೆಪಟ್ಟಿ ಹೊತ್ತು ಬರುತ್ತಿದ್ದಾರೆ. ದೇವರ ಜನ್ಮಸ್ಥಾನ ಹಾಗೂ ದೇವರ ಮೃತ್ಯುಸ್ಥಾನವನ್ನು ಹುಡುಕಲು ಹೊರಟಿದ್ದಾರೆ. ಧರ್ಮಪರ, ಜಾತಿಪರ ಸಂಶೋಧನೆಗಳು ನಡೆಯುತ್ತಿದ್ದು, ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದು ಟೀಕಿಸಿದರು.</p>.<p>‘ವಿಶ್ವವಿದ್ಯಾಲಯಗಳಲ್ಲಿ ಕೆಲ ತಾಂತ್ರಿಕ ಅಂಶಗಳು ಸಂಶೋಧನೆಯ ಮಹತ್ವವನ್ನು, ಅನನ್ಯತೆಯನ್ನು ಹಾಳು ಮಾಡುತ್ತಿವೆ. ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನೀತಿ ನಿಯಮಗಳೇ ಕಾರಣ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಪ್ರಸ್ತುತ ಕಾಲಘಟ್ಟದಲ್ಲಿ ವೈಚಾರಿಕ ವಾಗ್ವಾದಕ್ಕೆ ಜಾಗವಿಲ್ಲದಂತಾಗಿದೆ. ಸಂವಾದನೀಯ, ಸಹನೀಯ ಅಂಶಗಳು ನಾಶವಾಗುತ್ತಿವೆ. ಸಂಶೋಧಕರಿಗೆ ಬೆದರಿಕೆಗೆ ಪತ್ರಗಳು ಬರುವುದು, ನಮ್ಮಂಥವರಿಗೆ ಗನ್ಮ್ಯಾನ್ ಕೊಡುವುದು ಅಚ್ಚರಿ ಮೂಡಿ<br />ಸುವ ಸಂಗತಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.</p>.<p>ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಭಾನುವಾರ ಇಲ್ಲಿ ಆಯೋಜಿಸಿದ್ದ ಸಂಶೋಧಕ ‘ಡಾ.ಎಲ್.ಬಸವರಾಜು ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸದ್ಯ ನಾವು ವಿಭಜಿತ ಮನಸ್ಥಿತಿಯಲ್ಲಿದ್ದೇವೆ. ವಿಭಜಿತ ಓದು, ವಿಭಜಿತ ವಿಮರ್ಶೆ, ವಿಭಜಿತ ಸಂಶೋಧನೆ ನಡೆಯುತ್ತಿದೆ. ಇದೊಂದು ಉಗ್ರರೂಪವಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಒಂದು ಪಕ್ಷದ ಅಜೆಂಡಾಗಳಿಗೆ ಅನುಗುಣವಾಗಿ ಸಂಶೋಧನೆ ನಡೆಸುವ ಅನಾರೋಗ್ಯಕರ ಪ್ರವೃತ್ತಿ ಹೆಚ್ಚಿದೆ. ಹೀಗಾಗಿ, ತಾಜ್ಮಹಲ್, ಬಾಬ್ರಿ ಮಸೀದಿ, ಶಿವ ದೇವಾಲಯ, ಜೈನ ಮಂದಿರದ ಔಚಿತ್ಯ ಪ್ರಶ್ನಿಸಲಾಗುತ್ತಿದೆ. ಸಾಂಸ್ಕೃತಿಕ ಸಂಶೋಧಕರಿಗಿಂತ ರಾಜಕೀಯ ಸಂಶೋಧಕರು ಹೆಚ್ಚು ಪ್ರಚಾರ ಗಿಟ್ಟಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಚರಿತ್ರೆಯನ್ನು ಪುರಾಣ ಮಾಡುವ, ಪುರಾಣವನ್ನು ಚರಿತ್ರೆ ಮಾಡುವ ಅನೇಕರು ಸಂಶೋಧಕರೆಂಬ ಹಣೆಪಟ್ಟಿ ಹೊತ್ತು ಬರುತ್ತಿದ್ದಾರೆ. ದೇವರ ಜನ್ಮಸ್ಥಾನ ಹಾಗೂ ದೇವರ ಮೃತ್ಯುಸ್ಥಾನವನ್ನು ಹುಡುಕಲು ಹೊರಟಿದ್ದಾರೆ. ಧರ್ಮಪರ, ಜಾತಿಪರ ಸಂಶೋಧನೆಗಳು ನಡೆಯುತ್ತಿದ್ದು, ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ’ ಎಂದು ಟೀಕಿಸಿದರು.</p>.<p>‘ವಿಶ್ವವಿದ್ಯಾಲಯಗಳಲ್ಲಿ ಕೆಲ ತಾಂತ್ರಿಕ ಅಂಶಗಳು ಸಂಶೋಧನೆಯ ಮಹತ್ವವನ್ನು, ಅನನ್ಯತೆಯನ್ನು ಹಾಳು ಮಾಡುತ್ತಿವೆ. ಇದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನೀತಿ ನಿಯಮಗಳೇ ಕಾರಣ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>