ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ಕೋವಿಡ್–19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಈ ಸರ್ಕಾರದ ವಿಫಲವಾಗಿದೆ ಎಂಬುದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾಡಿರುವ ಸಂಪುಟ ಪುನರಚನೆಯೇ ಸಾಕ್ಷಿ. ಕೋವಿಡ್ ನಿಭಾಯಿಸುವಲ್ಲಿನ ಸರ್ಕಾರದ ಅಸಮರ್ಥತೆಯು ಅಪಾರ ಜೀವ, ಜೀವನವನ್ನು ಕಸಿದಿದೆ ಎಂಬ ಕಾಂಗ್ರೆಸ್ನ ಆರೋಪಕ್ಕೆ ಆರೋಗ್ಯ ಸಚಿವರ ಬದಲಾವಣೆಯು ಪುಷ್ಟಿ ನೀಡಿದೆ,’ ಎಂದಿದ್ದಾರೆ.