<p><strong>ಬೆಂಗಳೂರು</strong>: ಕೊರೊನಾ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೇ ಕುರ್ಚಿ ಕೆಳಗೆ ಬಚ್ಚಿಟ್ಟುಕೊಳ್ಳುವ ಬಾಲಕ, ಮುಸುಕು ಹೊದ್ದು ಕುಳಿತುಕೊಳ್ಳುವ ಬಾಲಕಿಯರು, ಅದೇ ಭಯದಲ್ಲಿ ಮಲಗಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವ 14 ವರ್ಷದ ಬಾಲಕ...</p>.<p>ಇದು ಕೋವಿಡ್ ಎರಡನೇ ಅಲೆ ಮಕ್ಕಳ ಮನಸ್ಸನ್ನು ಅದೆಷ್ಟು ಘಾಸಿ ಮಾಡಿಸಿದೆ ಎಂಬುದಕ್ಕೆ ಉದಾಹರಣೆಗಳು. ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಬೆಂಗಳೂರಿನ ಮಕ್ಕಳ ಹಕ್ಕುಗಳ ಸಂಸ್ಥೆ ಮಾಡುತ್ತಿದೆ.ಕೋವಿಡ್ ಭೀತಿಯಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಹಲವು ಪ್ರಕರಣಗಳು ಈ ಸಂಸ್ಥೆ ಮುಂದೆ ಬರುತ್ತಿವೆ. ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಮಕ್ಕಳನ್ನು ಆನ್ಲೈನ್ನಲ್ಲೇ ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರಿಗೆ ಸ್ಥೈರ್ಯ ತುಂಬುತ್ತಿದ್ದಾರೆ.</p>.<p>ರಾಜಾಜಿನಗರದ 9 ವರ್ಷ ಬಾಲಕ ಪದೇ ಪದೇ ಕುರ್ಚಿಯ ಅಡಿಯಲ್ಲಿ ಮೌನವಾಗಿ ಕುಳಿತು ಬಿಡುತ್ತಿದ್ದ. ಕೋವಿಡ್ ವಿಷಯ ಮನೆಯಲ್ಲಿ ಚರ್ಚೆಯಾದಾಗ ಅಥವಾ ಟಿ.ವಿಯಲ್ಲಿ ಬಂದಾಗ ಬಾಲಕ ಹೀಗೆ ಮಾಡುತ್ತಿರುವುದನ್ನು ಪೋಷಕರು ಗಮನಿಸಿದ್ದರು. ಆತ ಹೀಗೆ ವರ್ತಿಸಲು ಕಾರಣವಿತ್ತು. ಬಾಲಕನ ಸ್ನೇಹಿತನ ತಂದೆ ಕೋವಿಡ್ಗೆ ತುತ್ತಾಗಿದ್ದರು. ಆ ಸಂದರ್ಭದಲ್ಲಿ ಆದ ಎಲ್ಲಾ ಬೆಳವಣಿಗೆಗಳನ್ನು ಸ್ನೇಹಿತನಿಗೆ ತಿಳಿಸಿದ್ದ. ಆದೇ ವಿಷಯ ಮನಸ್ಸಿಗೆ ತುಂಬಿಕೊಂಡಿದ್ದ ಬಾಲಕ, ಮನೆಯಲ್ಲಿ ಮತ್ತೆ ಆ ವಿಷಯ ಚರ್ಚೆಯಾದಾಗ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತನಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ ಎಂದು ನಾಗಸಿಂಹ ಜಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಇನ್ನೊಂದೆಡೆ ಚಿತ್ರದುರ್ಗದ 12 ವರ್ಷ ಮತ್ತು 9 ವರ್ಷದ ಅಕ್ಕ–ತಂಗಿಯರು ಕೋವಿಡ್ ವಿಷಯ ಕಿವಿಗೆ ಬಿದ್ದ ಕೂಡಲೇ ಮುಸುಕು ಹೊದ್ದು ಕುಳಿತುಕೊಳ್ಳುತ್ತಿದ್ದಾರೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ನಾಟಕಗಳನ್ನೂ ಈ ಬಾಲಕಿಯರು ಮಾಡಿದ್ದರು. ಎರಡನೇ ಅಲೆ ಇದೇ ಮಕ್ಕಳನ್ನು ಖಿನ್ನತೆಗೆ ಒಳಗಾಗಿಸಿದೆ.</p>.<p>‘ದೇವನಹಳ್ಳಿಯ 14 ವರ್ಷದ ಬಾಲಕ ಇತ್ತೀಚೆಗೆ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದಾನೆ. ಆತನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಕೊರೊನಾ ಸೋಂಕಿನ ಭಯ ಎಂಬುದು ಗೊತ್ತಾಗಿದೆ. ಆ ಮಕ್ಕಳ ಮನಸ್ಸಿನಲ್ಲಿದ್ದ ಭೀತಿ ಹೊರ ಹಾಕುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.</p>.<p>‘ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಚಿತಾಗಾರದ ಚಿತ್ರಣ, ಆಮ್ಲಜನಕ ಸಿಗದೆ ಆಗುತ್ತಿರುವ ಸಾವು–ನೋವುಗಳು, ಆನ್ಲೈನ್ ತರಗತಿಯಲ್ಲೂ ಕೋವಿಡ್ ಕುರಿತ ಜಾಗೃತಿ ಹೆಸರಿನಲ್ಲಿ ಭಯ ಹುಟ್ಟಿಸುತ್ತಿರುವುದು ಮಕ್ಕಳ ಮನಸ್ಸಿನಲ್ಲಿ ವಿಚಿತ್ರ ವಾತಾವರಣ ಸೃಷ್ಟಿಸಿದೆ’ ಎಂದು ನಾಗಸಿಂಹ ಜಿ. ರಾವ್ ವಿವರಿಸಿದರು.</p>.<p><strong>ಸಲಹೆಗಳೇನು</strong><br />* ಮಕ್ಕಳಲ್ಲಿ ಕೋವಿಡ್ ಭಯ ಹುಟ್ಟಿಸಬೇಡಿ<br />* ಖಿನ್ನತೆಗೆ ಒಳಗಾಗಿದ್ದರೆ ಮಕ್ಕಳನ್ನು ನಿಂದಿಸಿ ಅವಮಾನ ಮಾಡದೇ, ಆಪ್ತತೆಯಿಂದ ಮಾತನಾಡಿಸಿ<br />* ಆಪ್ತ ಸಮಾಲೋಚಕರ ಬಳಿ ಏನು ಹೇಳಿದೆ ಎಂದು ಪ್ರಶ್ನಿಸಬೇಡಿ<br />* ಮಕ್ಕಳ ಖಾಸಗಿತನ ರಕ್ಷಿಸಿ, ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ<br />* ಮಕ್ಕಳ ವಿಚಿತ್ರ ವರ್ತನೆ ಬಗ್ಗೆ ಅವರ ಮುಂದೆಯೇ ಚರ್ಚಿಸಬೇಡಿ<br />* ಕತೆ, ಹಾಡು ಹೇಳಿಸಿ, ಆಟ ಆಡಿಸಿ ಹೆದರಿಕೆ ಹೋಗಲಾಡಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೊರೊನಾ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೇ ಕುರ್ಚಿ ಕೆಳಗೆ ಬಚ್ಚಿಟ್ಟುಕೊಳ್ಳುವ ಬಾಲಕ, ಮುಸುಕು ಹೊದ್ದು ಕುಳಿತುಕೊಳ್ಳುವ ಬಾಲಕಿಯರು, ಅದೇ ಭಯದಲ್ಲಿ ಮಲಗಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವ 14 ವರ್ಷದ ಬಾಲಕ...</p>.<p>ಇದು ಕೋವಿಡ್ ಎರಡನೇ ಅಲೆ ಮಕ್ಕಳ ಮನಸ್ಸನ್ನು ಅದೆಷ್ಟು ಘಾಸಿ ಮಾಡಿಸಿದೆ ಎಂಬುದಕ್ಕೆ ಉದಾಹರಣೆಗಳು. ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಬೆಂಗಳೂರಿನ ಮಕ್ಕಳ ಹಕ್ಕುಗಳ ಸಂಸ್ಥೆ ಮಾಡುತ್ತಿದೆ.ಕೋವಿಡ್ ಭೀತಿಯಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಹಲವು ಪ್ರಕರಣಗಳು ಈ ಸಂಸ್ಥೆ ಮುಂದೆ ಬರುತ್ತಿವೆ. ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಮಕ್ಕಳನ್ನು ಆನ್ಲೈನ್ನಲ್ಲೇ ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರಿಗೆ ಸ್ಥೈರ್ಯ ತುಂಬುತ್ತಿದ್ದಾರೆ.</p>.<p>ರಾಜಾಜಿನಗರದ 9 ವರ್ಷ ಬಾಲಕ ಪದೇ ಪದೇ ಕುರ್ಚಿಯ ಅಡಿಯಲ್ಲಿ ಮೌನವಾಗಿ ಕುಳಿತು ಬಿಡುತ್ತಿದ್ದ. ಕೋವಿಡ್ ವಿಷಯ ಮನೆಯಲ್ಲಿ ಚರ್ಚೆಯಾದಾಗ ಅಥವಾ ಟಿ.ವಿಯಲ್ಲಿ ಬಂದಾಗ ಬಾಲಕ ಹೀಗೆ ಮಾಡುತ್ತಿರುವುದನ್ನು ಪೋಷಕರು ಗಮನಿಸಿದ್ದರು. ಆತ ಹೀಗೆ ವರ್ತಿಸಲು ಕಾರಣವಿತ್ತು. ಬಾಲಕನ ಸ್ನೇಹಿತನ ತಂದೆ ಕೋವಿಡ್ಗೆ ತುತ್ತಾಗಿದ್ದರು. ಆ ಸಂದರ್ಭದಲ್ಲಿ ಆದ ಎಲ್ಲಾ ಬೆಳವಣಿಗೆಗಳನ್ನು ಸ್ನೇಹಿತನಿಗೆ ತಿಳಿಸಿದ್ದ. ಆದೇ ವಿಷಯ ಮನಸ್ಸಿಗೆ ತುಂಬಿಕೊಂಡಿದ್ದ ಬಾಲಕ, ಮನೆಯಲ್ಲಿ ಮತ್ತೆ ಆ ವಿಷಯ ಚರ್ಚೆಯಾದಾಗ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತನಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ ಎಂದು ನಾಗಸಿಂಹ ಜಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಇನ್ನೊಂದೆಡೆ ಚಿತ್ರದುರ್ಗದ 12 ವರ್ಷ ಮತ್ತು 9 ವರ್ಷದ ಅಕ್ಕ–ತಂಗಿಯರು ಕೋವಿಡ್ ವಿಷಯ ಕಿವಿಗೆ ಬಿದ್ದ ಕೂಡಲೇ ಮುಸುಕು ಹೊದ್ದು ಕುಳಿತುಕೊಳ್ಳುತ್ತಿದ್ದಾರೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ನಾಟಕಗಳನ್ನೂ ಈ ಬಾಲಕಿಯರು ಮಾಡಿದ್ದರು. ಎರಡನೇ ಅಲೆ ಇದೇ ಮಕ್ಕಳನ್ನು ಖಿನ್ನತೆಗೆ ಒಳಗಾಗಿಸಿದೆ.</p>.<p>‘ದೇವನಹಳ್ಳಿಯ 14 ವರ್ಷದ ಬಾಲಕ ಇತ್ತೀಚೆಗೆ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದಾನೆ. ಆತನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಕೊರೊನಾ ಸೋಂಕಿನ ಭಯ ಎಂಬುದು ಗೊತ್ತಾಗಿದೆ. ಆ ಮಕ್ಕಳ ಮನಸ್ಸಿನಲ್ಲಿದ್ದ ಭೀತಿ ಹೊರ ಹಾಕುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.</p>.<p>‘ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಚಿತಾಗಾರದ ಚಿತ್ರಣ, ಆಮ್ಲಜನಕ ಸಿಗದೆ ಆಗುತ್ತಿರುವ ಸಾವು–ನೋವುಗಳು, ಆನ್ಲೈನ್ ತರಗತಿಯಲ್ಲೂ ಕೋವಿಡ್ ಕುರಿತ ಜಾಗೃತಿ ಹೆಸರಿನಲ್ಲಿ ಭಯ ಹುಟ್ಟಿಸುತ್ತಿರುವುದು ಮಕ್ಕಳ ಮನಸ್ಸಿನಲ್ಲಿ ವಿಚಿತ್ರ ವಾತಾವರಣ ಸೃಷ್ಟಿಸಿದೆ’ ಎಂದು ನಾಗಸಿಂಹ ಜಿ. ರಾವ್ ವಿವರಿಸಿದರು.</p>.<p><strong>ಸಲಹೆಗಳೇನು</strong><br />* ಮಕ್ಕಳಲ್ಲಿ ಕೋವಿಡ್ ಭಯ ಹುಟ್ಟಿಸಬೇಡಿ<br />* ಖಿನ್ನತೆಗೆ ಒಳಗಾಗಿದ್ದರೆ ಮಕ್ಕಳನ್ನು ನಿಂದಿಸಿ ಅವಮಾನ ಮಾಡದೇ, ಆಪ್ತತೆಯಿಂದ ಮಾತನಾಡಿಸಿ<br />* ಆಪ್ತ ಸಮಾಲೋಚಕರ ಬಳಿ ಏನು ಹೇಳಿದೆ ಎಂದು ಪ್ರಶ್ನಿಸಬೇಡಿ<br />* ಮಕ್ಕಳ ಖಾಸಗಿತನ ರಕ್ಷಿಸಿ, ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ<br />* ಮಕ್ಕಳ ವಿಚಿತ್ರ ವರ್ತನೆ ಬಗ್ಗೆ ಅವರ ಮುಂದೆಯೇ ಚರ್ಚಿಸಬೇಡಿ<br />* ಕತೆ, ಹಾಡು ಹೇಳಿಸಿ, ಆಟ ಆಡಿಸಿ ಹೆದರಿಕೆ ಹೋಗಲಾಡಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>