ಇವರಿಬ್ಬರಲ್ಲದೇ ಕೆಲವು ಶಾಸಕರು, ಪಾಲಿಕೆಯ ಕೆಲವು ಸದಸ್ಯರೂ ಲಾಕ್ಡೌನ್ ಮುಂದುವರಿಸಲು ಒತ್ತಡ ಹೇರಿದ್ದರು. ಆದರೆ, ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿರುವುದರಿಂದ ಲಾಕ್ಡೌನ್ ಮುಂದುವರಿಸಿದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡುವುದು ಕಷ್ಟವಾಗಬಹುದು. ಸರ್ಕಾರದ ಇತರ ಖರ್ಚು– ವೆಚ್ಚಗಳಿಗೂ ಕಷ್ಟವಾಗಬಹುದು ಎಂಬುವುದು ಅವರ ಆತಂಕಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.