<p><strong>ಬೆಂಗಳೂರು</strong>: ‘ಅಮೆರಿಕವು ಭಾರತದ ಮೇಲೆ ಸಾರಿರುವ ಸುಂಕ ಸಮರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಜಪಾನ್ ಜತೆಗೆ ವ್ಯಾಪಾರ ವೃದ್ಧಿಗೆ ಮಾತುಕತೆ ನಡೆಸಿರುವುದು ಉತ್ತಮ ನಡೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದ್ದಾರೆ.</p>.<p>ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ‘ಅಮೆರಿಕವು ಅವಿವೇಕದ ಮತ್ತು ಅನ್ಯಾಯದ ಸುಂಕ ಸಮರದ ನಂತರ ನೀವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೊರಟಿರುವುದು ಎಲ್ಲ ಭಾರತೀಯರಂತೆ ನನಗೆ ಸಮಾಧಾನ ತಂದಿದೆ. ಎರಡೂ ದೇಶಗಳ ನಿಮ್ಮ ಭೇಟಿ ಅತ್ಯಂತ ಯಶಸ್ವಿಯಾಯಿತು’ ಎಂದಿದ್ದಾರೆ. </p>.<p>‘ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಬಗ್ಗೆ ನೀವು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಮಾತನಾಡಿದ್ದೀರಿ. ಈ ವಿಚಾರದಲ್ಲಿ ಭಾರತದ ನಿಲುವನ್ನು ಜಗತ್ತಿನ ಇತರ ದೇಶಗಳು ಈ ಹಿಂದೆಂದಿಗಿಂತ ಈಗ ಹೆಚ್ಚು ಪರಿಗಣಿಸುತ್ತವೆ ಎಂದು ನಾನು ನಿರೀಕ್ಷಿಸಿದ್ದೇನೆ. ನಿಮ್ಮ ಈ ‘ಬಹುಮೈತ್ರಿ’ ನಿಲುವು, ನಮ್ಮ ಈ ಹಿಂದಿನ ‘ಅಲಿಪ್ತ ನೀತಿ’ಗಿಂತ ಭಿನ್ನವಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲಿದೆ’ ಎಂದಿದ್ದಾರೆ.</p>.<div><blockquote>ಭಾರತವು ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಹಣಕಾಸು ಸ್ಥಿತಿ ಮತ್ತು ಜನಸಂಖ್ಯೆಯಲ್ಲಿ ಅಗಾಧತೆ ಹೊಂದಿದೆ. ಅಮೆರಿಕವು ತಡವಾಗಿ ಆದರೂ ನಮ್ಮ ಬಳಿಗೆ ಬರಲೇಬೇಕಾಗುತ್ತದೆ</blockquote><span class="attribution">ಎಚ್.ಡಿ.ದೇವೇಗೌಡ, ರಾಜ್ಯಸಭಾ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಅಮೆರಿಕವು ಭಾರತದ ಮೇಲೆ ಸಾರಿರುವ ಸುಂಕ ಸಮರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಜಪಾನ್ ಜತೆಗೆ ವ್ಯಾಪಾರ ವೃದ್ಧಿಗೆ ಮಾತುಕತೆ ನಡೆಸಿರುವುದು ಉತ್ತಮ ನಡೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದ್ದಾರೆ.</p>.<p>ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ‘ಅಮೆರಿಕವು ಅವಿವೇಕದ ಮತ್ತು ಅನ್ಯಾಯದ ಸುಂಕ ಸಮರದ ನಂತರ ನೀವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೊರಟಿರುವುದು ಎಲ್ಲ ಭಾರತೀಯರಂತೆ ನನಗೆ ಸಮಾಧಾನ ತಂದಿದೆ. ಎರಡೂ ದೇಶಗಳ ನಿಮ್ಮ ಭೇಟಿ ಅತ್ಯಂತ ಯಶಸ್ವಿಯಾಯಿತು’ ಎಂದಿದ್ದಾರೆ. </p>.<p>‘ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಬಗ್ಗೆ ನೀವು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಮಾತನಾಡಿದ್ದೀರಿ. ಈ ವಿಚಾರದಲ್ಲಿ ಭಾರತದ ನಿಲುವನ್ನು ಜಗತ್ತಿನ ಇತರ ದೇಶಗಳು ಈ ಹಿಂದೆಂದಿಗಿಂತ ಈಗ ಹೆಚ್ಚು ಪರಿಗಣಿಸುತ್ತವೆ ಎಂದು ನಾನು ನಿರೀಕ್ಷಿಸಿದ್ದೇನೆ. ನಿಮ್ಮ ಈ ‘ಬಹುಮೈತ್ರಿ’ ನಿಲುವು, ನಮ್ಮ ಈ ಹಿಂದಿನ ‘ಅಲಿಪ್ತ ನೀತಿ’ಗಿಂತ ಭಿನ್ನವಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲಿದೆ’ ಎಂದಿದ್ದಾರೆ.</p>.<div><blockquote>ಭಾರತವು ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಹಣಕಾಸು ಸ್ಥಿತಿ ಮತ್ತು ಜನಸಂಖ್ಯೆಯಲ್ಲಿ ಅಗಾಧತೆ ಹೊಂದಿದೆ. ಅಮೆರಿಕವು ತಡವಾಗಿ ಆದರೂ ನಮ್ಮ ಬಳಿಗೆ ಬರಲೇಬೇಕಾಗುತ್ತದೆ</blockquote><span class="attribution">ಎಚ್.ಡಿ.ದೇವೇಗೌಡ, ರಾಜ್ಯಸಭಾ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>