‘ಯಾರೂ ವೋಟ್ ಆಫ್ ಕಾನ್ಫಿಡೆನ್ಸ್ಗೆ ತಯಾರಿಲ್ಲ’ ಎಂದು ಯು.ಟಿ.ಖಾದರ್ ಹೇಳಿದಾಗ, ‘ನಾವು 105ಜನ ಇದ್ದೇವೆ, ಮತಕ್ಕೆ ಹಾಕಿ’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ‘ಸ್ಕ್ರಿಪ್ಟ್, ನಿರ್ದೇಶನ ಮೊದಲೇ ತಯಾರಾಗಿದೆ’ ಎಂದು ಬಿಜೆಪಿಯ ಸಿ.ಟಿ.ರವಿ ಛೇಡಿಸಿದರು. ಸಚಿವ ಆರ್.ವಿ.ದೇಶಪಾಂಡೆ, ಕೆಲವು ಮಹಿಳಾ ಸದಸ್ಯರೂ ಕಲಾಪವನ್ನು ಮುಂಡೂಡಲು ಆಗ್ರಹಿಸಿದರು.