ಇತ್ತೀಚಿನ ದಿನಗಳಲ್ಲಿ ಹಿರೀಕರ ನಡುವೆ ಭಿನ್ನಮತ ತೀವ್ರಗೊಂಡಿತ್ತು. ದೆಹಲಿಗೆ ಹೋಗಿ ಒಬ್ಬರ ಮೇಲೆ ಮತ್ತೊಬ್ಬರು ದೂರು ಸಲ್ಲಿಸುತ್ತಲೇ ಬಂದಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ವರಿಷ್ಠರು, ‘ಮೊದಲು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು. ನಂತರವಷ್ಟೇ ನಮ್ಮನ್ನು ಭೇಟಿಯಾಗಬೇಕು. ಅಲ್ಲಿಯವರೆಗೂ ದೆಹಲಿಗೆ ಬರುವುದು ಬೇಡ’ ಎಂದು ಕಟ್ಟಪಟ್ಟಣೆ ಮಾಡಿದ್ದರು. ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ವಹಿಸಲಾಗಿತ್ತು.