<p><strong>ಬೆಂಗಳೂರು</strong>: ‘ಒಳಮೀಸಲಾತಿ ಸಂಬಂಧ ಗಣತಿದಾರರು ಮನೆ–ಮನೆಗೆ ಬಂದಾಗ ಭೋವಿ ಜನಾಂಗದವರು ಕಡ್ಡಾಯವಾಗಿ ‘ಭೋವಿ ವಡ್ಡರ್’ ಎಂದೇ ಬರೆಸಬೇಕು’ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.</p>.<p>ಅಂತರರಾಷ್ಟ್ರೀಯ ಭಾರತೀಯ ಭೋವಿ (ವಡ್ಡರ) ಸಮಾಜ ನಗರದಲ್ಲಿ ಭಾನುವಾರ ಒಳಮೀಸಲಾತಿ ಕುರಿತು ಆಯೋಜಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಭೋವಿ ಜನರಲ್ಲಿ ತಮ್ಮ ಜಾತಿಯ ಬಗ್ಗೆ ಕೀಳರಿಮೆ ಇದೆ. ಹೀಗಾಗಿ ಅವರು ತಮ್ಮ ಜಾತಿಯ ಹೆಸರು ಹೇಳಿಕೊಳ್ಳುವುದಿಲ್ಲ. ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗಬೇಕೆಂದರೆ ಜಾತಿಯ ಹೆಸರನ್ನು ಸರಿಯಾಗಿ ಬರೆಸಬೇಕು’ ಎಂದರು.</p>.<p>ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ, ‘ಇದು ಅತ್ಯಂತ ಮಹತ್ವದ ಕಾಲ. ಸಮುದಾಯದ ಅಕ್ಷರಸ್ತರು ಸ್ನೇಹಿತರು, ಸಂಬಂಧಿಗಳಿಗೆ ಸಮೀಕ್ಷೆ ವೇಳೆ ‘ಭೋವಿ ವಡ್ಡರ್’ ಎಂದೇ ಬರೆಸಬೇಕು ಎಂದು ತಿಳಿವಳಿಕೆ ಮೂಡಿಸಬೇಕು’ ಎಂದರು.</p>.<p>ಸಂಸದ ಮಲ್ಲೇಶ್ಬಾಬು, ‘ನಮ್ಮ ಜನಾಂಗದವರಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಆರ್ಥಿಕ, ರಾಜಕೀಯ ಅಧಿಕಾರ ಸಿಗಲು ಸರಿಯಾಗಿ ಜಾತಿ ಹೆಸರು ಬರೆಸಬೇಕು. ಇಲ್ಲದಿದ್ದರೆ ಜನಾಂಗದ ಜನ ಕಡಿಮೆ ಇದ್ದಾರೆ ಎಂದಾಗುತ್ತದೆ. ಸವಲತ್ತು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಒಳಮೀಸಲಾತಿ ಸಂಬಂಧ ಗಣತಿದಾರರು ಮನೆ–ಮನೆಗೆ ಬಂದಾಗ ಭೋವಿ ಜನಾಂಗದವರು ಕಡ್ಡಾಯವಾಗಿ ‘ಭೋವಿ ವಡ್ಡರ್’ ಎಂದೇ ಬರೆಸಬೇಕು’ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.</p>.<p>ಅಂತರರಾಷ್ಟ್ರೀಯ ಭಾರತೀಯ ಭೋವಿ (ವಡ್ಡರ) ಸಮಾಜ ನಗರದಲ್ಲಿ ಭಾನುವಾರ ಒಳಮೀಸಲಾತಿ ಕುರಿತು ಆಯೋಜಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಭೋವಿ ಜನರಲ್ಲಿ ತಮ್ಮ ಜಾತಿಯ ಬಗ್ಗೆ ಕೀಳರಿಮೆ ಇದೆ. ಹೀಗಾಗಿ ಅವರು ತಮ್ಮ ಜಾತಿಯ ಹೆಸರು ಹೇಳಿಕೊಳ್ಳುವುದಿಲ್ಲ. ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗಬೇಕೆಂದರೆ ಜಾತಿಯ ಹೆಸರನ್ನು ಸರಿಯಾಗಿ ಬರೆಸಬೇಕು’ ಎಂದರು.</p>.<p>ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ, ‘ಇದು ಅತ್ಯಂತ ಮಹತ್ವದ ಕಾಲ. ಸಮುದಾಯದ ಅಕ್ಷರಸ್ತರು ಸ್ನೇಹಿತರು, ಸಂಬಂಧಿಗಳಿಗೆ ಸಮೀಕ್ಷೆ ವೇಳೆ ‘ಭೋವಿ ವಡ್ಡರ್’ ಎಂದೇ ಬರೆಸಬೇಕು ಎಂದು ತಿಳಿವಳಿಕೆ ಮೂಡಿಸಬೇಕು’ ಎಂದರು.</p>.<p>ಸಂಸದ ಮಲ್ಲೇಶ್ಬಾಬು, ‘ನಮ್ಮ ಜನಾಂಗದವರಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಆರ್ಥಿಕ, ರಾಜಕೀಯ ಅಧಿಕಾರ ಸಿಗಲು ಸರಿಯಾಗಿ ಜಾತಿ ಹೆಸರು ಬರೆಸಬೇಕು. ಇಲ್ಲದಿದ್ದರೆ ಜನಾಂಗದ ಜನ ಕಡಿಮೆ ಇದ್ದಾರೆ ಎಂದಾಗುತ್ತದೆ. ಸವಲತ್ತು ಕಳೆದುಕೊಳ್ಳಬೇಕಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>