ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದಲ್ಲಿ ಈಚೆಗೆ ಸ್ಥಾಪಿಸಲಾಗಿರುವ ಮೂರು ದತ್ತಿ ನಿಧಿಗಳ ಪ್ರಶಸ್ತಿಗಳು ಘೋಷಣೆಯಾಗಿದ್ದು, ಧಾರವಾಡದ ಸಾಹಿತಿ ಡಾ. ಜಿ.ಎಂ.ಹೆಗಡೆ ಹೆಸರಿನ ಪ್ರಾಧ್ಯಾಪಕ, ಸಂಶೋಧಕ ಪ್ರಶಸ್ತಿಗೆ ಮುಂಬೈ ವಿ.ವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ.
ರಂಗಕರ್ಮಿ ಮಂಜನಬೈಲ್ ಅವರ ಹೆಸರಿನ ರಂಗಸನ್ಮಾನ್ ಪ್ರಶಸ್ತಿಗೆ ನಾಟಕಕಾರ, ನಿರ್ದೇಶಕ ಬೇಲೂರು ರಘುನಂದನ್ ಮತ್ತು ಪತ್ರಕರ್ತ ಪಾ.ವೆಂ. ಆಚಾರ್ಯ ಹೆಸರಿನ ಪತ್ರಿಕಾ ಮಾಧ್ಯಮ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಯು ತಲಾ ₹10,000 ನಗದು, ತಾಮ್ರಪತ್ರ, ಸನ್ಮಾನವನ್ನೊಳಗೊಂಡಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.