‘ಪ್ರತಿ ಬೆಳೆಗೂ ಅಕಾಲಿಕ ಮಳೆ ಮಾರಕವಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಮುಂದಾಗುವ ಸ್ಥಿತಿಯಲ್ಲಿದ್ದಾರೆ. ಈ ಸಮಯದಲ್ಲಿ ಸರ್ಕಾರ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸಾಲ ಮನ್ನಾದ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆದರೆ ಸರ್ಕಾರ ಕಣ್ಮುಚ್ಚಿರುವುದು, ಕೃಷಿ ಸಚಿವರು ಜವಾಬ್ದಾರಿ ಮರೆತಿರುವುದು ನಾಡಿನ ದುರಂತ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.