ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಔತಣ ‘ರಾಜಕೀಯ’ಕ್ಕೆ ಹೈಕಮಾಂಡ್‌ ಬ್ರೇಕ್: ಸಚಿವ ಪರಮೇಶ್ವರ ಆಯೋಜಿಸಿದ್ದ ಸಭೆ ರದ್ದು

Published : 7 ಜನವರಿ 2025, 22:49 IST
Last Updated : 7 ಜನವರಿ 2025, 22:49 IST
ಫಾಲೋ ಮಾಡಿ
Comments
ಸಿದ್ದರಾಮಯ್ಯ ಪರ ಒತ್ತಡ
ಬಜೆಟ್‌ ಮಂಡನೆ ಬಳಿಕ ಮುಖ್ಯಮಂತ್ರಿ ಸ್ಥಾನ ಬದಲಾವಣೆಯೂ ಸೇರಿದಂತೆ ‘ಅಧಿಕಾರ ಹಂಚಿಕೆ’ ಆಗಬೇಕೆಂಬ ಕೂಗು ಜೋರಾಗುವ ಲಕ್ಷಣಗಳು ಕಾಣಿಸಿವೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಅವರ ಆಪ್ತ ಬಣ ಈಗಾಗಲೇ ರಂಗಕ್ಕಿಳಿದಿದೆ. ಬದಲಾಯಿಸುವುದಾದರೆ ಸಿದ್ದರಾಮಯ್ಯ ಅವರೂ ಒಪ್ಪುವ ಸರ್ವಸಮ್ಮತ ವ್ಯಕ್ತಿಗೆ ಹುದ್ದೆ ನೀಡಬೇಕೆಂದು ಪಟ್ಟು ಹಿಡಿಯಲು ಕೂಡಾ ಈ ಬಳಗ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
‘ಡಿನ್ನರ್‌ ಪಾರ್ಟಿಯಿಂದ ಬದಲಾವಣೆ ಅಸಾಧ್ಯ’
ಮಂಡ್ಯ:‘ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಮಾಡಲು ಆಗಲ್ಲ. ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಡಿನ್ನರ್ ಪಾರ್ಟಿ ಮಾಡೋದ್ರಲ್ಲಿ ತಪ್ಪಿಲ್ಲ ಎಂದು ಸಿಎಂ ಹೇಳಿದ್ದಾರೆ. ನಾವು ಮಂತ್ರಿಗಳಿಗೆ ಊಟ ಕೊಡ್ತಿದ್ದೀವಿ ಅಷ್ಟೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT