‘ತಾಂತ್ರಿಕ ಕಾರಣಕ್ಕೆ ಆದೇಶ ರದ್ದು’
ಮೀಸಲಾತಿ ಹೆಚ್ಚಿಸಲು ರೂಪಿಸಿರುವ ಕಾಯ್ದೆಯನ್ನು ಕೆಎಟಿ ವಜಾ ಮಾಡಿಲ್ಲ. ಮೀಸಲು ಅನ್ವಯಿಸಿ ರೋಸ್ಟರ್ ಪರಿಷ್ಕರಿಸಿ ಹೊರಡಿಸಿದ್ದ ಆದೇಶವನ್ನು ಕೆಲವು ತಾಂತ್ರಿಕ ಕಾರಣಗಳಿಗೆ ಕೆಎಟಿ ರದ್ದು ಮಾಡಿದೆ. ಸುಗ್ರೀವಾಜ್ಞೆಯ ಮೇಲೆ ಈ ಆದೇಶ ಹೊರಡಿಸಲಾಗಿದೆ. ಕಾಯ್ದೆ ಮಾಡಿದ ನಂತರ ಆದೇಶವನ್ನು ಬದಲಾಯಿಸಬೇಕಿತ್ತು ಎನ್ನುವುದು ವಾದ. ಸುಗ್ರೀವಾಜ್ಞೆ ಜಾರಿಗೆ ಬಂದ ದಿನದಿಂದ ಆ ಆದೇಶವೂ ಜಾರಿಗೆ ಬರುತ್ತದೆ ಎಂದು ಕಾಯ್ದೆಯಲ್ಲಿದೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುವುದು. –ಕೆ.ಜಿ. ಜಗದೀಶ್, ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ