ಪದವಿ ಪಡೆದವರಿಗೆ ಉದ್ಯೋಗ ಸೃಷ್ಟಿಯಾಗದೇ ಹೋದರೆ, ಸೃಷ್ಟಿ ಮಾಡದೇ ಹೋದರೆ ಅವರು ನಿರುಪಯುಕ್ತರಾಗುತ್ತಾರೆ. ದೇಶಕ್ಕೆ ಅವರಿಂದ ಕೊಡುಗೆ ಸಿಗದೇ ಹೊಗುತ್ತದೆ. ಉದ್ಯೋಗಕ್ಕೂ, ಉದ್ಯಮಕ್ಕೂ, ಕಾನೂನು ಸುವ್ಯವಸ್ಥೆಗೂ ನೇರ ಸಂಬಂಧ ಇರುತ್ತದೆ. ಕಾನೂನು ಸುವ್ಯವಸ್ಥೆ ಇದ್ದರೆ ರಾಜ್ಯಕ್ಕೆ ಉದ್ಯಮಗಳು ಬರುತ್ತವೆ. ಉದ್ಯಮಗಳು ಬಂದರೆ ಉದ್ಯೋಗ ದೊರೆಯುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಯಾವುದೇ ಹೂಡಿಕೆದಾರರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.