<p><strong>ಬೆಂಗಳೂರು</strong>: ರಾಜ್ಯದ ಯುವಜನರ ಕೌಶಲಾಭಿವೃದ್ಧಿಗೆಂದು ರಾಜ್ಯ ಸರ್ಕಾರವು ನೀಡಿದ್ದು ₹541.11 ಕೋಟಿ. ಆದರೆ ಕೌಶಲಾಭಿವೃದ್ಧಿ ಇಲಾಖೆಯು ಅದರಲ್ಲಿ ಬಳಸಿಕೊಂಡಿದ್ದು ₹230 ಕೋಟಿ ಮಾತ್ರ.</p>.<p>ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ. ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಲಾದ ‘2028–2023ರ ಅವಧಿಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಸಂಖ್ಯೆ–06’ರಲ್ಲಿ ಈ ಮಾಹಿತಿ ಇದೆ.</p>.<p>ಯುವಜನರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2018ರಲ್ಲಿ, ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ರೂಪಿಸಿತ್ತು. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು.</p>.<p>‘2017–18ರಿಂದ 2022–23ರವರೆಗಿನ ಆರು ಆರ್ಥಿಕ ವರ್ಷಗಳಲ್ಲಿ ಸರ್ಕಾರವು ಈ ಯೋಜನೆಗೆಂದು ಒಟ್ಟು ₹549.18 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ₹541.11 ಕೋಟಿಯನ್ನು ಬಿಡುಗಡೆಯೂ ಮಾಡಿತ್ತು. ಆದರೆ ಕೌಶಲ್ಯಾಭಿವೃದ್ಧಿಗೆ ಬಳಕೆಯಾಗಿದ್ದು ₹230.01 ಕೋಟಿಯಷ್ಟೆ’ ಎಂದು ಸಿಎಜಿ ಹೇಳಿದೆ.</p>.<p>‘ಬಿಡುಗಡೆಯಾದ ಅನುದಾನವು ಬಳಕೆಯಾಗದ ಕಾರಣ ₹173.55 ಕೋಟಿ ಸರ್ಕಾರಕ್ಕೆ ವಾಪಸಾಯಿತು. ₹230.02 ಕೋಟಿ ತರಬೇತಿಗೆ ಬಳಕೆಯಾಗಿದ್ದರೆ, ₹119.89 ಕೋಟಿಯನ್ನು ಇಲಾಖೆಯು ತನ್ನ ಬಳಿಯೇ ಉಳಿಸಿಕೊಂಡಿದೆ. ಅನುದಾನವನ್ನು ಸದುಪಯೋಗ ಮಾಡಿಕೊಳ್ಳುವ ಹೊಣೆಯನ್ನು ನಿರ್ವಹಣೆ ಮಾಡಿಲ್ಲ. ಸರ್ಕಾರಕ್ಕೆ ಪೂರ್ಣ ಹಣವನ್ನು ಹಿಂದಿರುಗಿಸಿಯೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.</p>.<p>‘ಸರ್ಕಾರವು ಈ ಬಗ್ಗೆ ಗಮನಹರಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗಾರ್ಹತೆ ಹೆಚ್ಚಿಸಿ, ನಿರುದ್ಯೋಗ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಶಿಫಾರಸು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಯುವಜನರ ಕೌಶಲಾಭಿವೃದ್ಧಿಗೆಂದು ರಾಜ್ಯ ಸರ್ಕಾರವು ನೀಡಿದ್ದು ₹541.11 ಕೋಟಿ. ಆದರೆ ಕೌಶಲಾಭಿವೃದ್ಧಿ ಇಲಾಖೆಯು ಅದರಲ್ಲಿ ಬಳಸಿಕೊಂಡಿದ್ದು ₹230 ಕೋಟಿ ಮಾತ್ರ.</p>.<p>ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ. ವಿಧಾನ ಪರಿಷತ್ತಿನಲ್ಲಿ ಗುರುವಾರ ಮಂಡಿಸಲಾದ ‘2028–2023ರ ಅವಧಿಯ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಸಂಖ್ಯೆ–06’ರಲ್ಲಿ ಈ ಮಾಹಿತಿ ಇದೆ.</p>.<p>ಯುವಜನರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2018ರಲ್ಲಿ, ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ರೂಪಿಸಿತ್ತು. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು.</p>.<p>‘2017–18ರಿಂದ 2022–23ರವರೆಗಿನ ಆರು ಆರ್ಥಿಕ ವರ್ಷಗಳಲ್ಲಿ ಸರ್ಕಾರವು ಈ ಯೋಜನೆಗೆಂದು ಒಟ್ಟು ₹549.18 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ₹541.11 ಕೋಟಿಯನ್ನು ಬಿಡುಗಡೆಯೂ ಮಾಡಿತ್ತು. ಆದರೆ ಕೌಶಲ್ಯಾಭಿವೃದ್ಧಿಗೆ ಬಳಕೆಯಾಗಿದ್ದು ₹230.01 ಕೋಟಿಯಷ್ಟೆ’ ಎಂದು ಸಿಎಜಿ ಹೇಳಿದೆ.</p>.<p>‘ಬಿಡುಗಡೆಯಾದ ಅನುದಾನವು ಬಳಕೆಯಾಗದ ಕಾರಣ ₹173.55 ಕೋಟಿ ಸರ್ಕಾರಕ್ಕೆ ವಾಪಸಾಯಿತು. ₹230.02 ಕೋಟಿ ತರಬೇತಿಗೆ ಬಳಕೆಯಾಗಿದ್ದರೆ, ₹119.89 ಕೋಟಿಯನ್ನು ಇಲಾಖೆಯು ತನ್ನ ಬಳಿಯೇ ಉಳಿಸಿಕೊಂಡಿದೆ. ಅನುದಾನವನ್ನು ಸದುಪಯೋಗ ಮಾಡಿಕೊಳ್ಳುವ ಹೊಣೆಯನ್ನು ನಿರ್ವಹಣೆ ಮಾಡಿಲ್ಲ. ಸರ್ಕಾರಕ್ಕೆ ಪೂರ್ಣ ಹಣವನ್ನು ಹಿಂದಿರುಗಿಸಿಯೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.</p>.<p>‘ಸರ್ಕಾರವು ಈ ಬಗ್ಗೆ ಗಮನಹರಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗಾರ್ಹತೆ ಹೆಚ್ಚಿಸಿ, ನಿರುದ್ಯೋಗ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಶಿಫಾರಸು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>