<p><strong>ಕಲಬುರ್ಗಿ:</strong>ಇಲ್ಲಿನ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಆಶ್ರಯ ಕಾಲೊನಿಯಲ್ಲಿ ಆರೈಕೆ ಕೇಂದ್ರವಿದೆ. ಅದನ್ನು ಸರ್ಕಾರ ಇಲ್ಲವೇ ದಾನಿಗಳು ಕೊಟ್ಟಿದ್ದಲ್ಲ. ಬದಲಾಗಿ ಕುಷ್ಠರೋಗಿಗಳು ಹಾಗೂ ಅವರ ಕುಟುಂಬದವರೇ ಸ್ವಂತ ಖರ್ಚಿನಲ್ಲಿ ಇದನ್ನು ತೆರೆದಿದ್ದಾರೆ!</p>.<p>ಈ ಕಾಲೊನಿಯಲ್ಲಿ 260 ಮಂದಿ ವಾಸವಾಗಿದ್ದಾರೆ.ರೋಗಿಗಳು ಡ್ರೆಸ್ಸಿಂಗ್ ಹಾಗೂ ಇತರ ಸಣ್ಣಪುಟ್ಟ ಆರೋಗ್ಯ ಸೌಲಭ್ಯಕ್ಕಾಗಿ ದೂರದ ಆರೋಗ್ಯ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸಲು ಐವರು ಯುವಕರು ಸೇರಿ 2002ರಲ್ಲಿ ಯೋಜನೆಯನ್ನು ಸಿದ್ಧಪಡಿಸಿದರು.</p>.<p>ತಮ್ಮ ಸಂಪಾದನೆಯಲ್ಲಿ ಪ್ರತಿ ತಿಂಗಳು ತಲಾ ₹ 1 ಸಾವಿರ ಸಂಗ್ರಹಿಸಿ ವೈದ್ಯಕೀಯ ಅವಶ್ಯಕತೆ ಪೂರೈಸತೊಡಗಿದರು. ಇಂತಹ ಪ್ರಯತ್ನ ಯಶಸ್ವಿಯಾಗಿದ್ದು, ಇದಕ್ಕೆ ‘ಮಹಾತ್ಮಗಾಂಧಿ ಕುಷ್ಠರೋಗಿಗಳ ಆರೋಗ್ಯ ಕೇಂದ್ರ’ ಎಂದು ಹೆಸರಿಡಲಾಗಿದೆ.</p>.<p>ಇದೆಲ್ಲಕ್ಕೂ ಬೆನ್ನೆಲುಬಾಗಿ ನಿಂತಿದ್ದು ಆಟೊ ಚಾಲಕ ಹಣಮಂತ ದೇವನೂರ.ಕುಷ್ಠರೋಗಿ ತಾಯಿಯ ನೋವನ್ನು ಕಣ್ಣಾರೆ ಕಂಡವರು. ವೈದ್ಯರು ಎಷ್ಟೋ ಬಾರಿ ಕುಷ್ಠರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಪತ್ರೆಗೆ ಹೋಗುವುದು ರೋಗಿಗಳಿಗೆ ಕಷ್ಟವಾಗಿತ್ತು.</p>.<p>ಈ ವ್ಯವಸ್ಥೆಯಿಂದ ಬೇಸತ್ತ ಅವರು, ತಾಯಿಗೆ ತಾವೇ ಪ್ರಥಮ ಚಿಕಿತ್ಸೆ ಮಾಡತೊಡಗಿದರು. ದಿನಗಳು ಕಳೆದಂತೆ ಈ ಸೇವೆಯನ್ನು ಕಾಲೊನಿಯ ಎಲ್ಲ ರೋಗಿಗಳಿಗೂ ನೀಡಲು ಶುರು ಮಾಡಿದರು. 16 ವರ್ಷಗಳಿಂದ ನಿರಂತರವಾಗಿಎಲ್ಲರೋಗಿಗಳಿಗೆ ಇವರೇ ಆರೈಕೆ ಮಾಡುತ್ತಾರೆ. ಇವರ ಸೇವೆಗಾಗಿ 2008ರಲ್ಲಿ ಅಂದಿನಉಪರಾಷ್ಟ್ರಪತಿ ರಾಷ್ಟ್ರೀಯ ಪುರಸ್ಕಾರ’ ನೀಡಿದ್ದಾರೆ.</p>.<p>**</p>.<p>ಆರೈಕೆ ಕೇಂದ್ರಕ್ಕೆ ಕಾಯಂ ಆಗಿ ಒಬ್ಬರು ಶುಶ್ರೂಷಕರನ್ನು ನೇಮಿಸುವ ವ್ಯವಸ್ಥೆ ಆಗಬೇಕು.</p>.<p><em><strong>–ಹಣಮಂತ ದೇವನೂರ, ಕುಷ್ಠರೋಗಿಗಳ ಸೇವಾ ಸಂಘದ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong>ಇಲ್ಲಿನ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಆಶ್ರಯ ಕಾಲೊನಿಯಲ್ಲಿ ಆರೈಕೆ ಕೇಂದ್ರವಿದೆ. ಅದನ್ನು ಸರ್ಕಾರ ಇಲ್ಲವೇ ದಾನಿಗಳು ಕೊಟ್ಟಿದ್ದಲ್ಲ. ಬದಲಾಗಿ ಕುಷ್ಠರೋಗಿಗಳು ಹಾಗೂ ಅವರ ಕುಟುಂಬದವರೇ ಸ್ವಂತ ಖರ್ಚಿನಲ್ಲಿ ಇದನ್ನು ತೆರೆದಿದ್ದಾರೆ!</p>.<p>ಈ ಕಾಲೊನಿಯಲ್ಲಿ 260 ಮಂದಿ ವಾಸವಾಗಿದ್ದಾರೆ.ರೋಗಿಗಳು ಡ್ರೆಸ್ಸಿಂಗ್ ಹಾಗೂ ಇತರ ಸಣ್ಣಪುಟ್ಟ ಆರೋಗ್ಯ ಸೌಲಭ್ಯಕ್ಕಾಗಿ ದೂರದ ಆರೋಗ್ಯ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸಲು ಐವರು ಯುವಕರು ಸೇರಿ 2002ರಲ್ಲಿ ಯೋಜನೆಯನ್ನು ಸಿದ್ಧಪಡಿಸಿದರು.</p>.<p>ತಮ್ಮ ಸಂಪಾದನೆಯಲ್ಲಿ ಪ್ರತಿ ತಿಂಗಳು ತಲಾ ₹ 1 ಸಾವಿರ ಸಂಗ್ರಹಿಸಿ ವೈದ್ಯಕೀಯ ಅವಶ್ಯಕತೆ ಪೂರೈಸತೊಡಗಿದರು. ಇಂತಹ ಪ್ರಯತ್ನ ಯಶಸ್ವಿಯಾಗಿದ್ದು, ಇದಕ್ಕೆ ‘ಮಹಾತ್ಮಗಾಂಧಿ ಕುಷ್ಠರೋಗಿಗಳ ಆರೋಗ್ಯ ಕೇಂದ್ರ’ ಎಂದು ಹೆಸರಿಡಲಾಗಿದೆ.</p>.<p>ಇದೆಲ್ಲಕ್ಕೂ ಬೆನ್ನೆಲುಬಾಗಿ ನಿಂತಿದ್ದು ಆಟೊ ಚಾಲಕ ಹಣಮಂತ ದೇವನೂರ.ಕುಷ್ಠರೋಗಿ ತಾಯಿಯ ನೋವನ್ನು ಕಣ್ಣಾರೆ ಕಂಡವರು. ವೈದ್ಯರು ಎಷ್ಟೋ ಬಾರಿ ಕುಷ್ಠರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಪತ್ರೆಗೆ ಹೋಗುವುದು ರೋಗಿಗಳಿಗೆ ಕಷ್ಟವಾಗಿತ್ತು.</p>.<p>ಈ ವ್ಯವಸ್ಥೆಯಿಂದ ಬೇಸತ್ತ ಅವರು, ತಾಯಿಗೆ ತಾವೇ ಪ್ರಥಮ ಚಿಕಿತ್ಸೆ ಮಾಡತೊಡಗಿದರು. ದಿನಗಳು ಕಳೆದಂತೆ ಈ ಸೇವೆಯನ್ನು ಕಾಲೊನಿಯ ಎಲ್ಲ ರೋಗಿಗಳಿಗೂ ನೀಡಲು ಶುರು ಮಾಡಿದರು. 16 ವರ್ಷಗಳಿಂದ ನಿರಂತರವಾಗಿಎಲ್ಲರೋಗಿಗಳಿಗೆ ಇವರೇ ಆರೈಕೆ ಮಾಡುತ್ತಾರೆ. ಇವರ ಸೇವೆಗಾಗಿ 2008ರಲ್ಲಿ ಅಂದಿನಉಪರಾಷ್ಟ್ರಪತಿ ರಾಷ್ಟ್ರೀಯ ಪುರಸ್ಕಾರ’ ನೀಡಿದ್ದಾರೆ.</p>.<p>**</p>.<p>ಆರೈಕೆ ಕೇಂದ್ರಕ್ಕೆ ಕಾಯಂ ಆಗಿ ಒಬ್ಬರು ಶುಶ್ರೂಷಕರನ್ನು ನೇಮಿಸುವ ವ್ಯವಸ್ಥೆ ಆಗಬೇಕು.</p>.<p><em><strong>–ಹಣಮಂತ ದೇವನೂರ, ಕುಷ್ಠರೋಗಿಗಳ ಸೇವಾ ಸಂಘದ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>