<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೇರಿದ 47 ಸ್ಥಳಗಳಲ್ಲಿ ಶೋಧ ನಡೆಸಿದ್ದ ಲೋಕಾಯುಕ್ತ ಪೊಲೀಸರು ₹35.31 ಕೋಟಿ ಮೌಲ್ಯದ ಸ್ವತ್ತು ಪತ್ತೆಮಾಡಿದ್ದಾರೆ. ಬಹುತೇಕ ಅಧಿಕಾರಿಗಳು ನಿವೇಶನ, ಮನೆ ಮತ್ತು ಕೃಷಿ ಜಮೀನುಗಳ ಮೇಲೆ ಹೂಡಿಕೆ ಮಾಡಿದ್ದಾರೆ. </p>.<p>ರಾಜ್ಯದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಅಧಾರದಲ್ಲಿ ಮಂಗಳವಾರ ಬೆಳಿಗ್ಗೆಯೇ, 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.</p>.<p>ಎಲ್ಲ ಹತ್ತು ಅಧಿಕಾರಿಗಳ ಬಳಿ ಒಟ್ಟು 50 ನಿವೇಶನ, 23 ಮನೆ–ಬಂಗಲೆ, 78 ಎಕರೆ 21 ಗುಂಟೆಗಳಷ್ಟು ಕೃಷಿ ಜಮೀನು ಪತ್ತೆಯಾಗಿದೆ. ಈ ಎಲ್ಲವುಗಳ ಮೌಲ್ಯ ₹22.31 ಕೋಟಿಯಷ್ಟಾಗುತ್ತದೆ. ಈ ಅಧಿಕಾರಿಗಳು ತಮ್ಮ ಕುಟುಂಬದವರು, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಕೃಷಿ ಜಮೀನು, ನಿವೇಶನ ಮತ್ತು ವಾಹನಗಳನ್ನು ಹೊಂದಿರುವುದು ಗೊತ್ತಾಗಿದೆ.</p>.<p>ಈ ಅಧಿಕಾರಿಗಳು ಸ್ಥಿರಾಸ್ತಿಯ ನಂತರ, ಚಿನ್ನಾಭರಣಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ದಾಳಿಯ ವೇಳೆ ಒಟ್ಟು ₹5.91 ಕೋಟಿ ಮೌಲ್ಯದಷ್ಟು ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ.</p>.<p>ಕಾರ್ಯಪಾಲಕ ಎಂಜಿನಿಯರ್ ಬಳಿ ಗರಿಷ್ಠ ಆಸ್ತಿ: ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಘಟಕದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ ಅವರಿಗೆ ಸೇರಿದ ₹5.36 ಕೋಟಿ ಮೌಲ್ಯದ ಆಸ್ತಿ ಇದ್ದು, ಮಂಗಳವಾರದ ದಾಳಿಯ ವೇಳೆ ಪತ್ತೆಯಾದ ಗರಿಷ್ಠ ಮೊತ್ತ ಇದಾಗಿದೆ.</p>.<p>ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಸೂಪರಿಂಟೆಂಡೆಂಟ್ ಕೃಷ್ಣಮೂರ್ತಿ ಪಿ. ಅವರ ಬಳಿ ₹4.26 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.</p>.<p>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಭಾಷ್ಚಂದ್ರ ಚಂದ್ರವ್ವ ನಾಟೀಕರ್ ಅವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅವರು ಒಟ್ಟು ₹3.11 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.</p>.<p>ಹಲವರ ಬ್ಯಾಂಕ್ ಲಾಕರ್ಗಳನ್ನು ಇನ್ನಷ್ಟೇ ತೆರೆಯಬೇಕಿದ್ದು, ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಪತ್ತೆಯಾಗಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p><strong>ಯಾವುದರ ಮೇಲೆ ಎಷ್ಟು ಹೂಡಿಕೆ...</strong> </p><p>₹22.31 ಕೋಟಿಸ್ಥಿರಾಸ್ತಿಗಳು ₹78.40 ಲಕ್ಷನಗದು ₹5.91 ಕೋಟಿಚಿನ್ನಾಭರಣ ₹2.33 ಕೋಟಿವಾಹನಗಳು ₹3.96 ಕೋಟಿಗೃಹೋಪಯೋಗಿ ವಸ್ತುಗಳು ಷೇರು ಮ್ಯೂಚುವಲ್ ಫಂಡ್ </p>.<p>ಅಧಿಕಾರಿಗಳ ಆಸ್ತಿ ವಿವರಕೃ</p><p>ಷ್ಣಮೂರ್ತಿ ಪಿ. ಕಚೇರಿ ಸೂಪರಿಂಟೆಂಡೆಂಟ್ ಆರ್ಟಿಒ ಎಲೆಕ್ಟ್ರಾನಿಕ್ಸ್ ಸಿಟಿ ಬೆಂಗಳೂರು ₹3.34 ಕೋಟಿ ಮೌಲ್ಯದ 7 ನಿವೇಶನ 4 ಮನೆ 5 ಎಕರೆ 30 ಗುಂಟೆ ಕೃಷಿ ಜಮೀನು ₹22 ಲಕ್ಷ ನಗದು ₹32 ಲಕ್ಷದ ಚಿನ್ನಾಭರಣ ₹22 ಲಕ್ಷದ ವಾಹನ ₹16 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ –––––– </p><p>ರಾಮಸ್ವಾಮಿ ಸಿ.ರೆವೆನ್ಯೂ ಇನ್ಸ್ಪೆಕ್ಟರ್ ಹೂಟಗಳ್ಳಿ ನಗರಸಭೆ ಮೈಸೂರು ₹1.65 ಕೋಟಿ ಮೌಲ್ಯದ 3 ನಿವೇಶನ 2 ಮನೆ 7 ಎಕರೆ ಕೃಷಿ ಜಮೀನು ₹1.15 ಲಕ್ಷ ನಗದು ₹86.26 ಲಕ್ಷದ ಚಿನ್ನಾಭರಣ ₹14.80 ಲಕ್ಷದ ವಾಹನ ₹10 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.77 ಕೋಟಿಆಸ್ತಿಯ ಒಟ್ಟು ಮೌಲ್ಯ –––– </p><p>ಪ್ರಭು.ಜೆಸಹಾಯಕ ನಿರ್ದೇಶಕ ಎಪಿಎಂಸಿ ದಾವಣಗೆರೆ ₹1.04 ಕೋಟಿ ಮೌಲ್ಯದ 5 ನಿವೇಶನ 3 ಮನೆ 3 ಎಕರೆ ಕೃಷಿ ಜಮೀನು ₹7.20 ಲಕ್ಷ ನಗದು ₹85.60 ಲಕ್ಷದ ಚಿನ್ನಾಭರಣ ₹12 ಲಕ್ಷದ ವಾಹನ ₹40.50 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸಿ.ಪುಟ್ಟಸ್ವಾಮಿಸಮುದಾಯ ಸಂಘಟನಾಧಿಕಾರಿ ನಗರಸಭೆ ಕಾರ್ಯಾಲಯ ಮಂಡ್ಯ ಟೌನ್ ಮಂಡ್ಯ ₹3.48 ಕೋಟಿ ಮೌಲ್ಯದ 8 ನಿವೇಶನ 2 ಮನೆ 12 ಎಕರೆ ಕೃಷಿ ಜಮೀನು ₹1.75 ಲಕ್ಷ ನಗದು ₹25 ಲಕ್ಷದ ಚಿನ್ನಾಭರಣ ₹33 ಲಕ್ಷದ ವಾಹನ ₹29.25 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.37 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಪ್ರೇಮ್ ಸಿಂಗ್ಮುಖ್ಯ ಎಂಜಿನಿಯರ್ ಕೃಷ್ಣ ಭಾಗ್ಯ ಜಲ ನಿಗಮ ಕಾಲುವೆ ವಿಭಾಗ–1 ಶಹಾಪುರ ಯಾದಗಿರಿ ₹2.43 ಕೋಟಿ ಮೌಲ್ಯದ 4 ನಿವೇಶನ 1 ಮನೆ 24 ಎಕರೆ 30 ಗುಂಟೆ ಕೃಷಿ ಜಮೀನು ₹60 ಲಕ್ಷ ಠೇವಣಿ ₹50.75 ಲಕ್ಷದ ಚಿನ್ನಾಭರಣ ₹42.48 ಲಕ್ಷದ ವಾಹನ ₹8.83 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.07 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿಕಾರ್ಯಪಾಲಕ ಎಂಜಿನಿಯರ್ ಜಿಲ್ಲಾ ನಗರಾಭಿವೃದ್ಧಿ ಘಟಕ ಹಾವೇರಿ ₹3.67 ಕೋಟಿ ಮೌಲ್ಯದ 14 ನಿವೇಶನ 3 ಮನೆ ₹10.44 ಲಕ್ಷ ನಗದು ₹25.40 ಲಕ್ಷದ ಚಿನ್ನಾಭರಣ ₹15 ಲಕ್ಷದ ವಾಹನ ₹1.18 ಕೋಟಿ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹5.36 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಸುಭಾಷ್ಚಂದ್ರ ಚಂದ್ರವ್ವ ನಾಟೀಕರ್ ಸಹಾಯಕ ಪ್ರಾಧ್ಯಾಪಕ ಸಮಾಜಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ₹2.59 ಕೋಟಿ ಮೌಲ್ಯದ 5 ನಿವೇಶನ 2 ಮನೆ 18 ಎಕರೆ 21 ಗುಂಟೆ ಕೃಷಿ ಜಮೀನು ₹1.12 ಲಕ್ಷ ನಗದು ₹6.75 ಲಕ್ಷದ ಚಿನ್ನಾಭರಣ ₹37 ಲಕ್ಷದ ವಾಹನ ₹8 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹3.11 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸತೀಶ್ ರಾಮಣ್ಣ ಕಟ್ಟಿಮನಿಹಿರಿಯ ಪಶು ಪರಿವೀಕ್ಷಕ ಪ್ರಾಥಮಿಕ ಪಶು ಆಸ್ಪತ್ರೆ ಹುಲಿಗೋಳ್ ಗದಗ ₹55.50 ಲಕ್ಷ ಮೌಲ್ಯದ 2 ಮನೆ 4 ಎಕರೆ ಕೃಷಿ ಜಮೀನು ₹17.16 ಲಕ್ಷ ನಗದು ₹74.80 ಲಕ್ಷದ ಚಿನ್ನಾಭರಣ ₹25 ಲಕ್ಷದ ವಾಹನ ₹36.60 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.09 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಡಿ.ಎಂ.ಗಿರೀಶ್ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಮಡಿಕೇರಿ ವಿಭಾಗ ಕೊಡಗು ₹1.89 ಕೋಟಿ ಮೌಲ್ಯದ 4 ನಿವೇಶನ 1 ಮನೆ ₹5.53 ಲಕ್ಷ ನಗದು ₹1.81 ಕೋಟಿ ಮೌಲ್ಯದ ಚಿನ್ನಾಭರಣ ₹9.08 ಲಕ್ಷದ ವಾಹನ ₹40 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸಿ.ಎನ್.ಲಕ್ಷ್ಮೀಪತಿಪ್ರಥಮ ದರ್ಜೆ ಸಹಾಯಕ ಸಿಮ್ಸ್ ವೈದ್ಯಕೀಯ ಕಾಲೇಜು ಶಿವಮೊಗ್ಗ ₹1.63 ಕೋಟಿ ಮೌಲ್ಯದ 3 ಮನೆ 3 ಎಕರೆ 20 ಗುಂಟೆ ಕೃಷಿ ಜಮೀನು ₹12.01 ಲಕ್ಷ ನಗದು ₹23.29 ಲಕ್ಷದ ಚಿನ್ನಾಭರಣ ₹23.04 ಲಕ್ಷದ ವಾಹನ ₹27.47 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೇರಿದ 47 ಸ್ಥಳಗಳಲ್ಲಿ ಶೋಧ ನಡೆಸಿದ್ದ ಲೋಕಾಯುಕ್ತ ಪೊಲೀಸರು ₹35.31 ಕೋಟಿ ಮೌಲ್ಯದ ಸ್ವತ್ತು ಪತ್ತೆಮಾಡಿದ್ದಾರೆ. ಬಹುತೇಕ ಅಧಿಕಾರಿಗಳು ನಿವೇಶನ, ಮನೆ ಮತ್ತು ಕೃಷಿ ಜಮೀನುಗಳ ಮೇಲೆ ಹೂಡಿಕೆ ಮಾಡಿದ್ದಾರೆ. </p>.<p>ರಾಜ್ಯದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಅಧಾರದಲ್ಲಿ ಮಂಗಳವಾರ ಬೆಳಿಗ್ಗೆಯೇ, 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.</p>.<p>ಎಲ್ಲ ಹತ್ತು ಅಧಿಕಾರಿಗಳ ಬಳಿ ಒಟ್ಟು 50 ನಿವೇಶನ, 23 ಮನೆ–ಬಂಗಲೆ, 78 ಎಕರೆ 21 ಗುಂಟೆಗಳಷ್ಟು ಕೃಷಿ ಜಮೀನು ಪತ್ತೆಯಾಗಿದೆ. ಈ ಎಲ್ಲವುಗಳ ಮೌಲ್ಯ ₹22.31 ಕೋಟಿಯಷ್ಟಾಗುತ್ತದೆ. ಈ ಅಧಿಕಾರಿಗಳು ತಮ್ಮ ಕುಟುಂಬದವರು, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಕೃಷಿ ಜಮೀನು, ನಿವೇಶನ ಮತ್ತು ವಾಹನಗಳನ್ನು ಹೊಂದಿರುವುದು ಗೊತ್ತಾಗಿದೆ.</p>.<p>ಈ ಅಧಿಕಾರಿಗಳು ಸ್ಥಿರಾಸ್ತಿಯ ನಂತರ, ಚಿನ್ನಾಭರಣಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ದಾಳಿಯ ವೇಳೆ ಒಟ್ಟು ₹5.91 ಕೋಟಿ ಮೌಲ್ಯದಷ್ಟು ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ.</p>.<p>ಕಾರ್ಯಪಾಲಕ ಎಂಜಿನಿಯರ್ ಬಳಿ ಗರಿಷ್ಠ ಆಸ್ತಿ: ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಘಟಕದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ ಅವರಿಗೆ ಸೇರಿದ ₹5.36 ಕೋಟಿ ಮೌಲ್ಯದ ಆಸ್ತಿ ಇದ್ದು, ಮಂಗಳವಾರದ ದಾಳಿಯ ವೇಳೆ ಪತ್ತೆಯಾದ ಗರಿಷ್ಠ ಮೊತ್ತ ಇದಾಗಿದೆ.</p>.<p>ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಸೂಪರಿಂಟೆಂಡೆಂಟ್ ಕೃಷ್ಣಮೂರ್ತಿ ಪಿ. ಅವರ ಬಳಿ ₹4.26 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.</p>.<p>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಭಾಷ್ಚಂದ್ರ ಚಂದ್ರವ್ವ ನಾಟೀಕರ್ ಅವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅವರು ಒಟ್ಟು ₹3.11 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.</p>.<p>ಹಲವರ ಬ್ಯಾಂಕ್ ಲಾಕರ್ಗಳನ್ನು ಇನ್ನಷ್ಟೇ ತೆರೆಯಬೇಕಿದ್ದು, ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಪತ್ತೆಯಾಗಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.</p>.<p><strong>ಯಾವುದರ ಮೇಲೆ ಎಷ್ಟು ಹೂಡಿಕೆ...</strong> </p><p>₹22.31 ಕೋಟಿಸ್ಥಿರಾಸ್ತಿಗಳು ₹78.40 ಲಕ್ಷನಗದು ₹5.91 ಕೋಟಿಚಿನ್ನಾಭರಣ ₹2.33 ಕೋಟಿವಾಹನಗಳು ₹3.96 ಕೋಟಿಗೃಹೋಪಯೋಗಿ ವಸ್ತುಗಳು ಷೇರು ಮ್ಯೂಚುವಲ್ ಫಂಡ್ </p>.<p>ಅಧಿಕಾರಿಗಳ ಆಸ್ತಿ ವಿವರಕೃ</p><p>ಷ್ಣಮೂರ್ತಿ ಪಿ. ಕಚೇರಿ ಸೂಪರಿಂಟೆಂಡೆಂಟ್ ಆರ್ಟಿಒ ಎಲೆಕ್ಟ್ರಾನಿಕ್ಸ್ ಸಿಟಿ ಬೆಂಗಳೂರು ₹3.34 ಕೋಟಿ ಮೌಲ್ಯದ 7 ನಿವೇಶನ 4 ಮನೆ 5 ಎಕರೆ 30 ಗುಂಟೆ ಕೃಷಿ ಜಮೀನು ₹22 ಲಕ್ಷ ನಗದು ₹32 ಲಕ್ಷದ ಚಿನ್ನಾಭರಣ ₹22 ಲಕ್ಷದ ವಾಹನ ₹16 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ –––––– </p><p>ರಾಮಸ್ವಾಮಿ ಸಿ.ರೆವೆನ್ಯೂ ಇನ್ಸ್ಪೆಕ್ಟರ್ ಹೂಟಗಳ್ಳಿ ನಗರಸಭೆ ಮೈಸೂರು ₹1.65 ಕೋಟಿ ಮೌಲ್ಯದ 3 ನಿವೇಶನ 2 ಮನೆ 7 ಎಕರೆ ಕೃಷಿ ಜಮೀನು ₹1.15 ಲಕ್ಷ ನಗದು ₹86.26 ಲಕ್ಷದ ಚಿನ್ನಾಭರಣ ₹14.80 ಲಕ್ಷದ ವಾಹನ ₹10 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.77 ಕೋಟಿಆಸ್ತಿಯ ಒಟ್ಟು ಮೌಲ್ಯ –––– </p><p>ಪ್ರಭು.ಜೆಸಹಾಯಕ ನಿರ್ದೇಶಕ ಎಪಿಎಂಸಿ ದಾವಣಗೆರೆ ₹1.04 ಕೋಟಿ ಮೌಲ್ಯದ 5 ನಿವೇಶನ 3 ಮನೆ 3 ಎಕರೆ ಕೃಷಿ ಜಮೀನು ₹7.20 ಲಕ್ಷ ನಗದು ₹85.60 ಲಕ್ಷದ ಚಿನ್ನಾಭರಣ ₹12 ಲಕ್ಷದ ವಾಹನ ₹40.50 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸಿ.ಪುಟ್ಟಸ್ವಾಮಿಸಮುದಾಯ ಸಂಘಟನಾಧಿಕಾರಿ ನಗರಸಭೆ ಕಾರ್ಯಾಲಯ ಮಂಡ್ಯ ಟೌನ್ ಮಂಡ್ಯ ₹3.48 ಕೋಟಿ ಮೌಲ್ಯದ 8 ನಿವೇಶನ 2 ಮನೆ 12 ಎಕರೆ ಕೃಷಿ ಜಮೀನು ₹1.75 ಲಕ್ಷ ನಗದು ₹25 ಲಕ್ಷದ ಚಿನ್ನಾಭರಣ ₹33 ಲಕ್ಷದ ವಾಹನ ₹29.25 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.37 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಪ್ರೇಮ್ ಸಿಂಗ್ಮುಖ್ಯ ಎಂಜಿನಿಯರ್ ಕೃಷ್ಣ ಭಾಗ್ಯ ಜಲ ನಿಗಮ ಕಾಲುವೆ ವಿಭಾಗ–1 ಶಹಾಪುರ ಯಾದಗಿರಿ ₹2.43 ಕೋಟಿ ಮೌಲ್ಯದ 4 ನಿವೇಶನ 1 ಮನೆ 24 ಎಕರೆ 30 ಗುಂಟೆ ಕೃಷಿ ಜಮೀನು ₹60 ಲಕ್ಷ ಠೇವಣಿ ₹50.75 ಲಕ್ಷದ ಚಿನ್ನಾಭರಣ ₹42.48 ಲಕ್ಷದ ವಾಹನ ₹8.83 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.07 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿಕಾರ್ಯಪಾಲಕ ಎಂಜಿನಿಯರ್ ಜಿಲ್ಲಾ ನಗರಾಭಿವೃದ್ಧಿ ಘಟಕ ಹಾವೇರಿ ₹3.67 ಕೋಟಿ ಮೌಲ್ಯದ 14 ನಿವೇಶನ 3 ಮನೆ ₹10.44 ಲಕ್ಷ ನಗದು ₹25.40 ಲಕ್ಷದ ಚಿನ್ನಾಭರಣ ₹15 ಲಕ್ಷದ ವಾಹನ ₹1.18 ಕೋಟಿ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹5.36 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಸುಭಾಷ್ಚಂದ್ರ ಚಂದ್ರವ್ವ ನಾಟೀಕರ್ ಸಹಾಯಕ ಪ್ರಾಧ್ಯಾಪಕ ಸಮಾಜಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ₹2.59 ಕೋಟಿ ಮೌಲ್ಯದ 5 ನಿವೇಶನ 2 ಮನೆ 18 ಎಕರೆ 21 ಗುಂಟೆ ಕೃಷಿ ಜಮೀನು ₹1.12 ಲಕ್ಷ ನಗದು ₹6.75 ಲಕ್ಷದ ಚಿನ್ನಾಭರಣ ₹37 ಲಕ್ಷದ ವಾಹನ ₹8 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹3.11 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸತೀಶ್ ರಾಮಣ್ಣ ಕಟ್ಟಿಮನಿಹಿರಿಯ ಪಶು ಪರಿವೀಕ್ಷಕ ಪ್ರಾಥಮಿಕ ಪಶು ಆಸ್ಪತ್ರೆ ಹುಲಿಗೋಳ್ ಗದಗ ₹55.50 ಲಕ್ಷ ಮೌಲ್ಯದ 2 ಮನೆ 4 ಎಕರೆ ಕೃಷಿ ಜಮೀನು ₹17.16 ಲಕ್ಷ ನಗದು ₹74.80 ಲಕ್ಷದ ಚಿನ್ನಾಭರಣ ₹25 ಲಕ್ಷದ ವಾಹನ ₹36.60 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.09 ಕೋಟಿಆಸ್ತಿಯ ಒಟ್ಟು ಮೌಲ್ಯ </p><p>–––– ಡಿ.ಎಂ.ಗಿರೀಶ್ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಮಡಿಕೇರಿ ವಿಭಾಗ ಕೊಡಗು ₹1.89 ಕೋಟಿ ಮೌಲ್ಯದ 4 ನಿವೇಶನ 1 ಮನೆ ₹5.53 ಲಕ್ಷ ನಗದು ₹1.81 ಕೋಟಿ ಮೌಲ್ಯದ ಚಿನ್ನಾಭರಣ ₹9.08 ಲಕ್ಷದ ವಾಹನ ₹40 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ</p><p> –––– ಸಿ.ಎನ್.ಲಕ್ಷ್ಮೀಪತಿಪ್ರಥಮ ದರ್ಜೆ ಸಹಾಯಕ ಸಿಮ್ಸ್ ವೈದ್ಯಕೀಯ ಕಾಲೇಜು ಶಿವಮೊಗ್ಗ ₹1.63 ಕೋಟಿ ಮೌಲ್ಯದ 3 ಮನೆ 3 ಎಕರೆ 20 ಗುಂಟೆ ಕೃಷಿ ಜಮೀನು ₹12.01 ಲಕ್ಷ ನಗದು ₹23.29 ಲಕ್ಷದ ಚಿನ್ನಾಭರಣ ₹23.04 ಲಕ್ಷದ ವಾಹನ ₹27.47 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>