<p><strong>ಬೆಂಗಳೂರು:</strong> ನಿರಂತರ ಧಾರಾಕಾರ ಮಳೆ, ರಸ್ತೆ ಹಾಗೂ ಬಡಾವಣೆಯು ಜಲಾವೃತವಾಗಿದ್ದ ಕಾರಣ ರಾಜಧಾನಿ ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಚಾಮರಾಜನಗರ ಜಿಲ್ಲೆ ಮಾಂಬಳ್ಳಿಯಲ್ಲಿ ಶವಸಂಸ್ಕಾರಕ್ಕೂ ಸಂಬಂಧಿಕರು ಪರದಾಡಿದರು.</p>.<p>ಬೆಂಗಳೂರಿನಲ್ಲಿ 300 ಮನೆಗಳಿರುವ ‘ರೈನ್ ಬೋ ಡ್ರೈವ್’ ಬಡಾವಣೆ ನಡುಗಡ್ಡೆಯಾಗಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೇ ಮೃತಪಟ್ಟಿದ್ದು, ಬಳಿಕ ಹರಿವ ನೀರಿನಲ್ಲೇ ಶವ ಹೊತ್ತೊಯ್ಯಲು ಕುಟುಂಬದವರು ಪರದಾಡಿದರು.</p>.<p>ಶ್ರೀನಿವಾಸ್ ರಾಮರಾವ್ ಎಂಬವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಒಯ್ಯಲು ಕುಟುಂಬ ಸದಸ್ಯರಿಗೆ ಆಗಲಿಲ್ಲ. ನೀರು ಆವರಿಸಿದ್ದರಿಂದ ಆಂಬುಲೆನ್ಸ್ ಕೂಡಾ ಬರಲಾಗಲಿಲ್ಲ. ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟ ಅವರ ಶವವನ್ನು ಸಂಬಂಧಿಕರು ಹರಿವ ನೀರಿನಲ್ಲೇ ಹೆಗಲ ಮೇಲೆ ಹೊತ್ತೊಯ್ದರು.</p>.<p>‘ಹಾಲನಾಯಕನಹಳ್ಳಿ ಕೆರೆ ಪಕ್ಕದಲ್ಲೇ ಇರುವ ಬಡಾವಣೆಗೆ ನೀರು ನುಗ್ಗಿದೆ. ಕೆರೆಯಲ್ಲಿ ಹೂಳು ತುಂಬಿದೆ. ನೀರು ಹರಿದು ಹೋಗುವ ರಾಜಕಾಲುವೆಗಳೂ ಇಲ್ಲ. ಕೆರೆಯ ನೀರೆಲ್ಲವೂ ಬಡಾವಣೆಗೆ ತುಂಬಿಕೊಂಡಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p><strong>ಹಳ್ಳದಲ್ಲೇ ಶವ ಹೊತ್ತೊಯ್ದರು<br />ಹರಪನಹಳ್ಳಿ (ವಿಜಯನಗರ) ವರದಿ: </strong>ತಾಲ್ಲೂಕಿನ ಸುಮಾರು 345 ಮನೆಗಳಿರುವ ‘ಶೃಂಗಾರ ತೋಟ’ ಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆಗೆ ಶವವನ್ನು ತುಂಬಿದ ಹಳ್ಳದಲ್ಲೇ ಗ್ರಾಮಸ್ಥರು ಕಷ್ಟಪಟ್ಟು ಹೊತ್ತುಕೊಂಡು ಹೋದರು.</p>.<p>ಗ್ರಾಮದಲ್ಲಿನ ಒಂದೇ ರುದ್ರಭೂಮಿ ಇದ್ದು, ಸ್ಮಶಾನದ ಹಾದಿಯಲ್ಲಿ ಸೊಂಟದವರೆಗೂ ನೀರು ಆವರಿಸಿತ್ತು. ಗ್ರಾಮದ ಮೂಕವ್ವನವರ ವಿರೂಪಾಕ್ಷಪ್ಪ (56) ಬುಧವಾರ ಮೃತಪಟ್ಟಿದ್ದರು. ಗ್ರಾಮದಿಂದ ಅರ್ಧ ಕಿ.ಮೀ ದೂರದ ಸ್ಮಶಾನಕ್ಕೆ ಸಂಬಂಧಿಕರು ಶವ ಹೊತ್ತೊಯ್ದರು.</p>.<p>ಶವ ಹೊತ್ತು ಸಾಗುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. ರುದ್ರಭೂಮಿಗೆ ಹೋಗಿ ಬರಲು ಉತ್ತಮ ರಸ್ತೆಯಿಲ್ಲ’ ಎಂದು ಗ್ರಾಮಸ್ಥರಾದ ಬಸವರಾಜ, ಅಜೀಜ್ ಸಾಬ್, ನಿಂಗರಾಜ್, ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.</p>.<p>‘ಶೀಘ್ರ ಶೃಂಗಾರ ತೋಟ ಗ್ರಾಮಕ್ಕೆ ತೆರಳಿ, ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್ ಶಿವಕುಮಾರ ಬಿರಾದಾರ್ ತಿಳಿಸಿದರು.</p>.<p><strong>ಕೊಡಗು: ಭಾರಿ ಮಳೆ<br />ಮಡಿಕೇರಿ:</strong> ನಗರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆಯ ನಂತರ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.</p>.<p>ವಿವಿಧ ಬಡಾವಣೆಗಳು ಜಲಾವೃತಗೊಂಡಿದ್ದವು. ಸೋಮವಾಪೇಟೆಯ ತಾಲ್ಲೂಕು ಹರದೂರು ವ್ಯಾಪ್ತಿಯಲ್ಲಿ 14 ಸೆಂ.ಮೀ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿರಂತರ ಧಾರಾಕಾರ ಮಳೆ, ರಸ್ತೆ ಹಾಗೂ ಬಡಾವಣೆಯು ಜಲಾವೃತವಾಗಿದ್ದ ಕಾರಣ ರಾಜಧಾನಿ ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಚಾಮರಾಜನಗರ ಜಿಲ್ಲೆ ಮಾಂಬಳ್ಳಿಯಲ್ಲಿ ಶವಸಂಸ್ಕಾರಕ್ಕೂ ಸಂಬಂಧಿಕರು ಪರದಾಡಿದರು.</p>.<p>ಬೆಂಗಳೂರಿನಲ್ಲಿ 300 ಮನೆಗಳಿರುವ ‘ರೈನ್ ಬೋ ಡ್ರೈವ್’ ಬಡಾವಣೆ ನಡುಗಡ್ಡೆಯಾಗಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೇ ಮೃತಪಟ್ಟಿದ್ದು, ಬಳಿಕ ಹರಿವ ನೀರಿನಲ್ಲೇ ಶವ ಹೊತ್ತೊಯ್ಯಲು ಕುಟುಂಬದವರು ಪರದಾಡಿದರು.</p>.<p>ಶ್ರೀನಿವಾಸ್ ರಾಮರಾವ್ ಎಂಬವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಒಯ್ಯಲು ಕುಟುಂಬ ಸದಸ್ಯರಿಗೆ ಆಗಲಿಲ್ಲ. ನೀರು ಆವರಿಸಿದ್ದರಿಂದ ಆಂಬುಲೆನ್ಸ್ ಕೂಡಾ ಬರಲಾಗಲಿಲ್ಲ. ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟ ಅವರ ಶವವನ್ನು ಸಂಬಂಧಿಕರು ಹರಿವ ನೀರಿನಲ್ಲೇ ಹೆಗಲ ಮೇಲೆ ಹೊತ್ತೊಯ್ದರು.</p>.<p>‘ಹಾಲನಾಯಕನಹಳ್ಳಿ ಕೆರೆ ಪಕ್ಕದಲ್ಲೇ ಇರುವ ಬಡಾವಣೆಗೆ ನೀರು ನುಗ್ಗಿದೆ. ಕೆರೆಯಲ್ಲಿ ಹೂಳು ತುಂಬಿದೆ. ನೀರು ಹರಿದು ಹೋಗುವ ರಾಜಕಾಲುವೆಗಳೂ ಇಲ್ಲ. ಕೆರೆಯ ನೀರೆಲ್ಲವೂ ಬಡಾವಣೆಗೆ ತುಂಬಿಕೊಂಡಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p><strong>ಹಳ್ಳದಲ್ಲೇ ಶವ ಹೊತ್ತೊಯ್ದರು<br />ಹರಪನಹಳ್ಳಿ (ವಿಜಯನಗರ) ವರದಿ: </strong>ತಾಲ್ಲೂಕಿನ ಸುಮಾರು 345 ಮನೆಗಳಿರುವ ‘ಶೃಂಗಾರ ತೋಟ’ ಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆಗೆ ಶವವನ್ನು ತುಂಬಿದ ಹಳ್ಳದಲ್ಲೇ ಗ್ರಾಮಸ್ಥರು ಕಷ್ಟಪಟ್ಟು ಹೊತ್ತುಕೊಂಡು ಹೋದರು.</p>.<p>ಗ್ರಾಮದಲ್ಲಿನ ಒಂದೇ ರುದ್ರಭೂಮಿ ಇದ್ದು, ಸ್ಮಶಾನದ ಹಾದಿಯಲ್ಲಿ ಸೊಂಟದವರೆಗೂ ನೀರು ಆವರಿಸಿತ್ತು. ಗ್ರಾಮದ ಮೂಕವ್ವನವರ ವಿರೂಪಾಕ್ಷಪ್ಪ (56) ಬುಧವಾರ ಮೃತಪಟ್ಟಿದ್ದರು. ಗ್ರಾಮದಿಂದ ಅರ್ಧ ಕಿ.ಮೀ ದೂರದ ಸ್ಮಶಾನಕ್ಕೆ ಸಂಬಂಧಿಕರು ಶವ ಹೊತ್ತೊಯ್ದರು.</p>.<p>ಶವ ಹೊತ್ತು ಸಾಗುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. ರುದ್ರಭೂಮಿಗೆ ಹೋಗಿ ಬರಲು ಉತ್ತಮ ರಸ್ತೆಯಿಲ್ಲ’ ಎಂದು ಗ್ರಾಮಸ್ಥರಾದ ಬಸವರಾಜ, ಅಜೀಜ್ ಸಾಬ್, ನಿಂಗರಾಜ್, ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.</p>.<p>‘ಶೀಘ್ರ ಶೃಂಗಾರ ತೋಟ ಗ್ರಾಮಕ್ಕೆ ತೆರಳಿ, ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್ ಶಿವಕುಮಾರ ಬಿರಾದಾರ್ ತಿಳಿಸಿದರು.</p>.<p><strong>ಕೊಡಗು: ಭಾರಿ ಮಳೆ<br />ಮಡಿಕೇರಿ:</strong> ನಗರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆಯ ನಂತರ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.</p>.<p>ವಿವಿಧ ಬಡಾವಣೆಗಳು ಜಲಾವೃತಗೊಂಡಿದ್ದವು. ಸೋಮವಾಪೇಟೆಯ ತಾಲ್ಲೂಕು ಹರದೂರು ವ್ಯಾಪ್ತಿಯಲ್ಲಿ 14 ಸೆಂ.ಮೀ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>