ಯಾದಗಿರಿ ಜಿಲ್ಲೆಯ ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟೆ ಸೀರೆ ‘ಪ್ಯಾಟ’ ಸೀರೆಯೆಂದೆ ಪ್ರಸಿದ್ಧಿ ಪಡೆದಿದೆ. ನಾರಾಯಣಪೇಟೆಯ ಸೀರೆಯನ್ನು ಒಂದು ಕಾಲದಲ್ಲಿ ದೇವರ ಉಡುಪೆಂದು ಪರಿಗಣಿಸಲಾಗಿತ್ತು. ಸಾಂಪ್ರದಾಯಿಕವಾಗಿ ಕೈಯಿಂದ ಮಾಡಿದ ಸೀರೆಗಳು ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡು ರಾಜ್ಯಗಳ ಆಕರ್ಷಕ ಪ್ರಭಾವ ತೋರಿಸುತ್ತವೆ.