’ಕಾನೂನು ಹೋರಾಟದಲ್ಲಿ ನೈಸ್ ಕಂಪನಿಯ ವಿರುದ್ಧವೇ ತೀರ್ಪುಗಳು ಬಂದಿವೆ. ವಿವಿಧ ಸಮಿತಿಗಳು ಕೂಡ ರೈತರ ಪರವಾಗಿ ವರದಿ ನೀಡಿವೆ. ರೈತರಿಗೆ ಭೂಮಿ ವಾಪಸ್ ಮಾಡಬೇಕು. ಇಲ್ಲವೇ ಎಕರೆಗೆ ₹ 3 ಕೋಟಿಯಂತೆ ಪರಿಹಾರ ನೀಡಬೇಕು ಎಂದು ತಿಳಿಸಿವೆ. ಇತ್ತೀಚೆಗೆ ರೈತರಿಗೆ ಕಿರುಕುಳ ಆರಂಭವಾಗಿದೆ. ಗೂಂಡಾಗಳನ್ನು, ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂಸೆ ನೀಡಲಾಗುತ್ತಿದೆ. ಅಶೋಕ್ ಖೇಣಿ ಅವರ ಮಿತ್ರ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಆಗಿರುವುದರಿಂದ ಈ ಬೆಳವಣಿಗೆಗಳು ನಡೆಯುತ್ತಿವೆ' ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.