<p><strong>ಬೆಂಗಳೂರು</strong>: ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡದಂತೆ ತಜ್ಞರ ಸಮಿತಿ ಸೂಚಿಸಿದೆ. ಆದ್ದರಿಂದ ಇದೇ ಆವರಣದಲ್ಲಿ ನಾಯಿಗಳಿಗೆ ಆಶ್ರಯತಾಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.</p><p>ತಜ್ಞರ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಸೌಧ ಮತ್ತು ವಿಕಾಸಸೌಧಗಳನ್ನು ರಾತ್ರಿ ವೇಳೆ ಬೀದಿ ನಾಯಿಗಳೇ ಕಾವಲು ಕಾಯುತ್ತಿವೆ. ಇಲ್ಲೇ ಉಳಿಸಿಕೊಳ್ಳುವುದು ಸೂಕ್ತ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ ಎಂದರು.</p><p>‘ವಿಧಾನಸೌಧದ ಆವರಣದಲ್ಲಿರುವ ನಾಯಿಗಳ ಹಾವಳಿ ತಪ್ಪಿಸಲು ತಜ್ಞರ ಸಮಿತಿಯಿಂದ ವರದಿ ಕೇಳಲಾಗಿತ್ತು. ಇವತ್ತಿನ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲೇ ಉಳಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಶ್ರಯತಾಣದ ನಿರ್ವಹಣೆಯನ್ನು ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸುವ ಬಗ್ಗೆ ಚರ್ಚೆ ನಡೆಯಿತು’ ಎಂದರು.</p><p><strong>ಸಭೆಯಲ್ಲಿ ನಡೆದ ಚರ್ಚೆ: </strong></p><p>‘ವಿಧಾನಸೌಧ ಮತ್ತು ವಿಕಾಸಸೌಧದ ವ್ಯಾಪ್ತಿಯಲ್ಲಿ 54 ನಾಯಿಗಳು ಇವೆ. ಇಲ್ಲಿ ವಾಕಿಂಗ್ ಮಾಡುವವರಿಗೆ ಮತ್ತು ವಿಧಾನಸೌಧ ನೋಡಲು ಬರುವ ಮಕ್ಕಳಿಗೆ ಭಯ ಆಗುತ್ತದೆ. ಆದ್ದರಿಂದ, ನಾಯಿಗಳನ್ನು ಬೇರೆಡೆ ಸಾಗಿಸಬೇಕು ಎಂಬ ವಿಚಾರವಾಗಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಅವರು ತಿಳಿಸಿದರು.</p><p>‘ನಾಯಿಗಳನ್ನು ಇರಲು ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ಹೆಚ್ಚಿನವರದ್ದಾಗಿತ್ತು. ಅವುಗಳಿಗೆ ಆಶ್ರಯ ತಾಣ ಮಾಡಿಕೊಡಲು ಲೋಕೋಪಯೋಗಿ ಇಲಾಖೆಗೆ ಹೇಳಿದರಾಯಿತು. ಮಳೆ–ಬಿಸಿಲು ಇದ್ದಾಗ ಅಲ್ಲಿಗೆ ಬಂದು ರಕ್ಷಣೆ ಪಡೆಯುತ್ತವೆ’ ಎಂದು ಖಾದರ್ ಹೇಳಿದರು.</p><p>ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ಇಲಿಗಳನ್ನು ಹಿಡಿಯಲು ₹8 ಲಕ್ಷ ಟೆಂಡರ್ ಕೊಟ್ಟ ವಿಚಾರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಆ ವಿಚಾರ ನನಗೆ ಗೊತ್ತಿಲ್ಲ. ಸಮಸ್ಯೆ ಬಗೆ ಹರಿಯಬೇಕು ಅಷ್ಟೆ. ಹಣದ ಸಮಸ್ಯೆ ಇಲ್ಲ, ನಮಗೆ ಸಮಸ್ಯೆ ಬಗೆಹರಿಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿಧಾನಸೌಧದ ಆವರಣದಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡದಂತೆ ತಜ್ಞರ ಸಮಿತಿ ಸೂಚಿಸಿದೆ. ಆದ್ದರಿಂದ ಇದೇ ಆವರಣದಲ್ಲಿ ನಾಯಿಗಳಿಗೆ ಆಶ್ರಯತಾಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.</p><p>ತಜ್ಞರ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಸೌಧ ಮತ್ತು ವಿಕಾಸಸೌಧಗಳನ್ನು ರಾತ್ರಿ ವೇಳೆ ಬೀದಿ ನಾಯಿಗಳೇ ಕಾವಲು ಕಾಯುತ್ತಿವೆ. ಇಲ್ಲೇ ಉಳಿಸಿಕೊಳ್ಳುವುದು ಸೂಕ್ತ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ ಎಂದರು.</p><p>‘ವಿಧಾನಸೌಧದ ಆವರಣದಲ್ಲಿರುವ ನಾಯಿಗಳ ಹಾವಳಿ ತಪ್ಪಿಸಲು ತಜ್ಞರ ಸಮಿತಿಯಿಂದ ವರದಿ ಕೇಳಲಾಗಿತ್ತು. ಇವತ್ತಿನ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲೇ ಉಳಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಶ್ರಯತಾಣದ ನಿರ್ವಹಣೆಯನ್ನು ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸುವ ಬಗ್ಗೆ ಚರ್ಚೆ ನಡೆಯಿತು’ ಎಂದರು.</p><p><strong>ಸಭೆಯಲ್ಲಿ ನಡೆದ ಚರ್ಚೆ: </strong></p><p>‘ವಿಧಾನಸೌಧ ಮತ್ತು ವಿಕಾಸಸೌಧದ ವ್ಯಾಪ್ತಿಯಲ್ಲಿ 54 ನಾಯಿಗಳು ಇವೆ. ಇಲ್ಲಿ ವಾಕಿಂಗ್ ಮಾಡುವವರಿಗೆ ಮತ್ತು ವಿಧಾನಸೌಧ ನೋಡಲು ಬರುವ ಮಕ್ಕಳಿಗೆ ಭಯ ಆಗುತ್ತದೆ. ಆದ್ದರಿಂದ, ನಾಯಿಗಳನ್ನು ಬೇರೆಡೆ ಸಾಗಿಸಬೇಕು ಎಂಬ ವಿಚಾರವಾಗಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಅವರು ತಿಳಿಸಿದರು.</p><p>‘ನಾಯಿಗಳನ್ನು ಇರಲು ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ಹೆಚ್ಚಿನವರದ್ದಾಗಿತ್ತು. ಅವುಗಳಿಗೆ ಆಶ್ರಯ ತಾಣ ಮಾಡಿಕೊಡಲು ಲೋಕೋಪಯೋಗಿ ಇಲಾಖೆಗೆ ಹೇಳಿದರಾಯಿತು. ಮಳೆ–ಬಿಸಿಲು ಇದ್ದಾಗ ಅಲ್ಲಿಗೆ ಬಂದು ರಕ್ಷಣೆ ಪಡೆಯುತ್ತವೆ’ ಎಂದು ಖಾದರ್ ಹೇಳಿದರು.</p><p>ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ಇಲಿಗಳನ್ನು ಹಿಡಿಯಲು ₹8 ಲಕ್ಷ ಟೆಂಡರ್ ಕೊಟ್ಟ ವಿಚಾರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಆ ವಿಚಾರ ನನಗೆ ಗೊತ್ತಿಲ್ಲ. ಸಮಸ್ಯೆ ಬಗೆ ಹರಿಯಬೇಕು ಅಷ್ಟೆ. ಹಣದ ಸಮಸ್ಯೆ ಇಲ್ಲ, ನಮಗೆ ಸಮಸ್ಯೆ ಬಗೆಹರಿಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>