ಜೇನು ಕುರುಬರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸೋಮಣ್ಣ ಅವರಿಗೆ ಪದ್ಮಶ್ರೀ ಲಭಿಸಿದೆ.
ಸಾಂಪ್ರದಾಯಿಕ ಪದ್ಧತಿಯನ್ನು ಮೀರಿ 14ನೇ ವಯಸ್ಸಿನಲ್ಲಿ ಕಾಡು ಆನೆಗಳನ್ನು ಪಳಗಿಸಲು ಪ್ರಾರಂಭಿಸಿದ ಭಾರತದ ಮೊದಲ ಮಹಿಳಾ ಮಾವುತಳಾದ ಅಸ್ಸಾಂನ ಪಾರ್ವತಿ ಬರುವಾ ಅವರಿಗೆ ಸಾಮಾಜಿಕ ಕಾರ್ಯ(ಪ್ರಾಣಿಗಳ) ವಿಭಾಗದಲ್ಲಿ ಪದ್ಮಶ್ರೀ ಲಭಿಸಿದೆ.
ಪ್ರತಿದಿನ ಸೈಕಲ್ನಲ್ಲಿ ಹೊಸ ಸ್ಥಳಗಳಿಗೆ ಪ್ರಯಾಣಿಸುವಾಗ ಬಂಜರು ಭೂಮಿಯಲ್ಲಿ 5,000ಕ್ಕೂ ಹೆಚ್ಚು ಆಲದ, ಮಾವು ಮತ್ತು ಬ್ಲ್ಯಾಕ್ಬೆರಿ ಮರಗಳನ್ನು ನೆಟ್ಟಿರುವ ಪುರುಲಿಯಾದ ಸಿಂಡ್ರಿ ಗ್ರಾಮದ ಬುಡಕಟ್ಟು ಪರಿಸರವಾದಿ ದುಖು ಮಾಝಿ ಅವರಿಗೆ ಸಮಾಜಕಾರ್ಯ (ಪರಿಸರ ಅರಣ್ಯೀಕರಣ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.