‘ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇವತ್ತು ಬೆಳಿಗ್ಗೆ ದೂರವಾಣಿ ಕರೆ ಮಾಡಿ ವಿಡಿಯೊ ನೋಡಿದ ಬಳಿಕ ತಮಗೆ ವಿಪರೀತ ಮಾನಸಿಕ ಹಿಂಸೆ ಆಗಿದೆ ಎಂದು ಕಣ್ಣೀರು ಸುರಿಸಿದ್ದಾರೆ. ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಪ್ರಕರಣವಿದು. ಇದರಲ್ಲಿ ಅನ್ಯಾಯವಾದವರಿಗೆ ಶಿಕ್ಷೆ ಆಗಲೇಬೇಕು. ತಪ್ಪಿತಸ್ಥರು ಯಾರೇ ಇರಲಿ, ಅದು ನಾನೇ ಆಗಿರಬಹುದು, ನನ್ನ ಸರ್ಕಾರವೇ ಆಗಿರಬಹುದು ಅಥವಾ ಬೇರೆ ಯಾರೇ ಆಗಿದ್ದರೂ ಸರಿ ಶಿಕ್ಷೆ ಆಗಲೇಬೇಕು. ಯಾವುದೇ ಕಾರಣಕ್ಕೂ ವಿಷಯಾಂತರ ಆಗಬಾರದು. ನನ್ನ ಗುರಿ ಮತ್ತು ಉದ್ದೇಶ ಇಷ್ಟೇ ಆಗಿದೆ’ ಎಂದು ಅವರು ಹೇಳಿದರು.