ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಬಹಿರಂಗ ಹೇಳಿಕೆ ನೀಡಿದರೆ ಕ್ರಮ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ

ಪಕ್ಷ ಸಂಘಟನೆಗಾಗಿ ಕ್ರಮ: ದಾವಣಗೆರೆ, ಬಾಗಲಕೋಟೆ ಜಿಲ್ಲಾ ನಾಯಕರ ಸಭೆ
Published : 4 ಜುಲೈ 2025, 15:33 IST
Last Updated : 4 ಜುಲೈ 2025, 15:33 IST
ಫಾಲೋ ಮಾಡಿ
Comments
ಪಕ್ಷದ ಎರಡನೇ ಹಂತದ ಶುದ್ದೀಕರಣ: ಡಿವಿಎಸ್‌
ಪಕ್ಷದಲ್ಲಿ ಮೊದಲ ಹಂತದ ಶುದ್ದೀಕರಣ ಯಶಸ್ವಿಯಾಗಿದೆ. ಅಶಿಸ್ತಿನಿಂದ ವರ್ತಿಸಿದ ಹಲವರನ್ನು ಹೊರಹಾಕಲಾಗಿದೆ. ಇನ್ನಷ್ಟು ಜನರನ್ನು ಹೊರಹಾಕಿದರೆ ಪಕ್ಷ ಉಳಿಯುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಎಲ್ಲರನ್ನೂ ಸರಿ ಮಾಡುವ ಉದ್ದೇಶದಿಂದ ಎರಡನೇ ಹಂತದ ಶುದ್ದೀಕರಣ ಪ್ರಕ್ರಿಯೆ ಆರಂಭವಾಗಿದೆ. ಎಲ್ಲೆಲ್ಲಿ ಗುಂಪುಗಾರಿಕೆ ಮತ್ತು ಸಮಸ್ಯೆಗಳು ಇವೆಯೋ ಅಂತಹ ಜಿಲ್ಲೆಗಳ ನಾಯಕರನ್ನು ಕರೆಸಿ ಮಾತನಾಡಿ ಸಂಧಾನ ಮಾಡಲಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ಚಿಂತನೆ ಆರಂಭವಾಗಿದೆ. ಎಲ್ಲ ಸರಿಹೋಗಲು ಸ್ವಲ್ಪ ದಿನ ಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು. ‘ಪಕ್ಷವನ್ನು ಸರಿಪಡಿಸುವ ದಿಸೆಯಲ್ಲಿ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಪಕ್ಷಕ್ಕೆ ಬದ್ಧರಾಗಿ ಇರುವವರು ಸೇರಿ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT