<p><strong>ಬೆಂಗಳೂರು</strong>: ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ನಡೆಸುವ ಎಲ್ಲಾ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.</p><p>2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ ಆದೇಶವಿದು. ಈ ಆದೇಶದ ಪ್ರಕಾರ, ಶಾಲೆ ಹಾಗೂ ಶಾಲಾ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಇನ್ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದಕ್ಕೆ ಬಿಜೆಪಿ ನಾಯಕರ ಅಭಿಪ್ರಾಯವೇನು.? ಎಂದು ಪ್ರಶ್ನಿಸಿದ್ದಾರೆ.</p>. <p>ಜೊತೆಗೆ, ಶಾಲಾ ಆವರಣದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಕೂಡ ಸಲ್ಲಿಸಬಾರದು ಎಂದೂ ಈ ಆದೇಶ ಪತ್ರದಲ್ಲಿ ಇದೆ. ಅವರೇ ಅಧಿಕಾರದಲ್ಲಿದ್ದಾಗ ನಿಯಮ ತಂದು ಈಗ ಆ ನಿಯಮವನ್ನು ನಾವು ಪಾಲಿಸುವುದಿಲ್ಲ ಎಂದರೆ ಬಿಜೆಪಿಯವರಿಗೆ ಮತಿಭ್ರಮಣೆಯಾಗಿದೆ ಎಂದರ್ಥವಲ್ಲವೇ.? ಎಂದು ಪ್ರಶ್ನಿಸಿದ್ದಾರೆ.</p><p>ಆರ್ಎಸ್ಎಸ್ ಪರ ವಹಿಸಿಕೊಂಡು ಮಾತಾಡುತ್ತಿರುವ ಬಿಜೆಪಿಯವರು ಈ ನಿಯಮ ರೂಪಿಸುವಾಗ ಆರ್ಎಸ್ಎಸ್ ಹೊರತುಪಡಿಸಿ ಎಂದು ನಮೂದಿಸಬಹುದಿತ್ತಲ್ಲವೆ.? ಆಗ ಇವರ ಬುದ್ಧಿಗೆ ಮಂಕು ಬಡಿದಿತ್ತೆ.? ಕಾನೂನು ಜಾರಿಗೆ ತಂದ ಮೇಲೆ ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಅದು ಆರ್ಎಸ್ಎಸ್ ಇರಲಿ ಇನ್ಯಾವುದೇ ಸಂಘಟನೆಯಿರಲಿ. ಕಾನೂನಿಗಿಂತ ಇಲ್ಯಾರು ದೊಡ್ಡವರಿಲ್ಲ ಎಂದು ಕಿಡಿಕಾರಿದ್ದಾರೆ.</p> .ಬೆದರಿಕೆ ಹಾಕುವವರು ಬಿಜೆಪಿ–ಆರ್ಎಸ್ಎಸ್ ಬೆಂಬಲಿಗರು: ಸಚಿವ ಶರಣಪ್ರಕಾಶ ಪಾಟೀಲ.RSS ಚಟುವಟಿಕೆಗಳಿಗೆ ನಿಷೇಧ: ಪ್ರಿಯಾಂಕ್ ಕೋರಿದ್ದರಲ್ಲಿ ತಪ್ಪೇನಿದೆ? ಸಿಎಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ನಡೆಸುವ ಎಲ್ಲಾ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.</p><p>2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೊರಡಿಸಿದ ಆದೇಶವಿದು. ಈ ಆದೇಶದ ಪ್ರಕಾರ, ಶಾಲೆ ಹಾಗೂ ಶಾಲಾ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಇನ್ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದಕ್ಕೆ ಬಿಜೆಪಿ ನಾಯಕರ ಅಭಿಪ್ರಾಯವೇನು.? ಎಂದು ಪ್ರಶ್ನಿಸಿದ್ದಾರೆ.</p>. <p>ಜೊತೆಗೆ, ಶಾಲಾ ಆವರಣದಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಕೂಡ ಸಲ್ಲಿಸಬಾರದು ಎಂದೂ ಈ ಆದೇಶ ಪತ್ರದಲ್ಲಿ ಇದೆ. ಅವರೇ ಅಧಿಕಾರದಲ್ಲಿದ್ದಾಗ ನಿಯಮ ತಂದು ಈಗ ಆ ನಿಯಮವನ್ನು ನಾವು ಪಾಲಿಸುವುದಿಲ್ಲ ಎಂದರೆ ಬಿಜೆಪಿಯವರಿಗೆ ಮತಿಭ್ರಮಣೆಯಾಗಿದೆ ಎಂದರ್ಥವಲ್ಲವೇ.? ಎಂದು ಪ್ರಶ್ನಿಸಿದ್ದಾರೆ.</p><p>ಆರ್ಎಸ್ಎಸ್ ಪರ ವಹಿಸಿಕೊಂಡು ಮಾತಾಡುತ್ತಿರುವ ಬಿಜೆಪಿಯವರು ಈ ನಿಯಮ ರೂಪಿಸುವಾಗ ಆರ್ಎಸ್ಎಸ್ ಹೊರತುಪಡಿಸಿ ಎಂದು ನಮೂದಿಸಬಹುದಿತ್ತಲ್ಲವೆ.? ಆಗ ಇವರ ಬುದ್ಧಿಗೆ ಮಂಕು ಬಡಿದಿತ್ತೆ.? ಕಾನೂನು ಜಾರಿಗೆ ತಂದ ಮೇಲೆ ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಅದು ಆರ್ಎಸ್ಎಸ್ ಇರಲಿ ಇನ್ಯಾವುದೇ ಸಂಘಟನೆಯಿರಲಿ. ಕಾನೂನಿಗಿಂತ ಇಲ್ಯಾರು ದೊಡ್ಡವರಿಲ್ಲ ಎಂದು ಕಿಡಿಕಾರಿದ್ದಾರೆ.</p> .ಬೆದರಿಕೆ ಹಾಕುವವರು ಬಿಜೆಪಿ–ಆರ್ಎಸ್ಎಸ್ ಬೆಂಬಲಿಗರು: ಸಚಿವ ಶರಣಪ್ರಕಾಶ ಪಾಟೀಲ.RSS ಚಟುವಟಿಕೆಗಳಿಗೆ ನಿಷೇಧ: ಪ್ರಿಯಾಂಕ್ ಕೋರಿದ್ದರಲ್ಲಿ ತಪ್ಪೇನಿದೆ? ಸಿಎಂ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>