<p><strong>ಮೈಸೂರು:</strong> ‘ಕತ್ತೆ ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಗಾದೆಯಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ’ ಎಂದು ನಟ ಪ್ರಕಾಶ್ರಾಜ್ ಟೀಕಿಸಿದರು. </p><p>ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಬೌದ್ಧ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ‘ಮಾತೆತ್ತಿದ್ದರೆ ಹಿಂದೂ ಧರ್ಮ ಎನ್ನುತ್ತಾರೆ. ಆ ಧರ್ಮಕ್ಕೆ ಸೇರದ ಕಳ್ಳರು ಅವರು. ಸಗಣಿ ಆಲ್ರೌಂಡರ್ಸ್. ಒಲೆಗೆ ಬಿದ್ದರೆ ಇಂಧನ, ಹೊಲಕ್ಕೆ ಬಿದ್ದರೆ ಗೊಬ್ಬರ, ತಲೆಗೆ ಬಿದ್ದರೆ ಅಂಧ ಭಕ್ತ’ ಎಂದರು. </p><p>‘ಎಲ್ಲರನ್ನೂ ತುಳಿಯಬೇಕೆಂದುಕೊಂಡಿರುವ ನಿಮ್ಮ ಇತಿಹಾಸ ಕೇವಲ ಒಂದು ಶತಮಾನವಷ್ಟೇ. ಆದರೆ, ಶತಶತಮಾನಗಳ ಬುದ್ಧ, ಬಸವ ಹಾಗೂ ಅವರನ್ನು ನಂಬಿ ದಾರಿದೀಪವಾಗಿರುವ ಅಂಬೇಡ್ಕರ್ ಅವರು ನಮ್ಮ ಹಿಂದೆ ಶಕ್ತಿಯಾಗಿ ನಿಂತಿದ್ದಾರೆ. ಈ ಮೂವರ ಮುಂದೆ ನಿಮಗೆ ನಿಲ್ಲಲಾಗದು. ಅಸಮಾನತೆಯನ್ನು ಪ್ರತಿಪಾದಿಸುವ ನಿಮಗೆ ಧರ್ಮದೇಟು ಕೊಡಬೇಕು’ ಎಂದು ಹೇಳಿದರು. </p><p>‘ರಾಜಕಾರಣಿಗಳು ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಭಾಷಣ ಮಾಡುವುದಲ್ಲ. ಸಂಘಿಗಳ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಹೋಗಬಾರದು, ಸದನದಲ್ಲೂ ಅವರ ಮಂತ್ರಗಳನ್ನು ಪಠಿಸಬಾರದು ಎಂದು ಹೇಳಬೇಕು’ ಎಂದರು.</p><p>‘ರಾಕ್ಷಸರ ಜಗತ್ತಿನಲ್ಲಿ ಕರುಣೆ, ಪ್ರೀತಿಯಿಂದಷ್ಟೇ ಅಲ್ಲ, ಹೋರಾಟದಿಂದಲೇ ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.</p>.ಆರ್ಎಸ್ಎಸ್ ವಿಜಯದಶಮಿ ಉತ್ಸವ: ಸಾವಿರಾರು ಗಣವೇಷಧಾರಿಗಳಿಂದ ಪಥಸಂಚಲನ.ಆರ್ಎಸ್ಎಸ್ ನಿರ್ಬಂಧ: ಬಿಜೆಪಿ– ಕಾಂಗ್ರೆಸ್ ನಾಯಕರ ವಾಗ್ವಾದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಕತ್ತೆ ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಗಾದೆಯಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ’ ಎಂದು ನಟ ಪ್ರಕಾಶ್ರಾಜ್ ಟೀಕಿಸಿದರು. </p><p>ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಬೌದ್ಧ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ‘ಮಾತೆತ್ತಿದ್ದರೆ ಹಿಂದೂ ಧರ್ಮ ಎನ್ನುತ್ತಾರೆ. ಆ ಧರ್ಮಕ್ಕೆ ಸೇರದ ಕಳ್ಳರು ಅವರು. ಸಗಣಿ ಆಲ್ರೌಂಡರ್ಸ್. ಒಲೆಗೆ ಬಿದ್ದರೆ ಇಂಧನ, ಹೊಲಕ್ಕೆ ಬಿದ್ದರೆ ಗೊಬ್ಬರ, ತಲೆಗೆ ಬಿದ್ದರೆ ಅಂಧ ಭಕ್ತ’ ಎಂದರು. </p><p>‘ಎಲ್ಲರನ್ನೂ ತುಳಿಯಬೇಕೆಂದುಕೊಂಡಿರುವ ನಿಮ್ಮ ಇತಿಹಾಸ ಕೇವಲ ಒಂದು ಶತಮಾನವಷ್ಟೇ. ಆದರೆ, ಶತಶತಮಾನಗಳ ಬುದ್ಧ, ಬಸವ ಹಾಗೂ ಅವರನ್ನು ನಂಬಿ ದಾರಿದೀಪವಾಗಿರುವ ಅಂಬೇಡ್ಕರ್ ಅವರು ನಮ್ಮ ಹಿಂದೆ ಶಕ್ತಿಯಾಗಿ ನಿಂತಿದ್ದಾರೆ. ಈ ಮೂವರ ಮುಂದೆ ನಿಮಗೆ ನಿಲ್ಲಲಾಗದು. ಅಸಮಾನತೆಯನ್ನು ಪ್ರತಿಪಾದಿಸುವ ನಿಮಗೆ ಧರ್ಮದೇಟು ಕೊಡಬೇಕು’ ಎಂದು ಹೇಳಿದರು. </p><p>‘ರಾಜಕಾರಣಿಗಳು ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಭಾಷಣ ಮಾಡುವುದಲ್ಲ. ಸಂಘಿಗಳ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಹೋಗಬಾರದು, ಸದನದಲ್ಲೂ ಅವರ ಮಂತ್ರಗಳನ್ನು ಪಠಿಸಬಾರದು ಎಂದು ಹೇಳಬೇಕು’ ಎಂದರು.</p><p>‘ರಾಕ್ಷಸರ ಜಗತ್ತಿನಲ್ಲಿ ಕರುಣೆ, ಪ್ರೀತಿಯಿಂದಷ್ಟೇ ಅಲ್ಲ, ಹೋರಾಟದಿಂದಲೇ ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.</p>.ಆರ್ಎಸ್ಎಸ್ ವಿಜಯದಶಮಿ ಉತ್ಸವ: ಸಾವಿರಾರು ಗಣವೇಷಧಾರಿಗಳಿಂದ ಪಥಸಂಚಲನ.ಆರ್ಎಸ್ಎಸ್ ನಿರ್ಬಂಧ: ಬಿಜೆಪಿ– ಕಾಂಗ್ರೆಸ್ ನಾಯಕರ ವಾಗ್ವಾದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>