<p><strong>ಬಳ್ಳಾರಿ:</strong> ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಇಂದು ನಡೆಯುತ್ತಿರುವ 'ಸಮರ್ಪಣಾ ಸಂಕಲ್ಪ' ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬೆಂಗಳೂರಿನಿಂದ 250 ಬಿಎಂಟಿಸಿ ಬಸ್ಗಳು ಬಳ್ಳಾರಿಗೆ ಬಂದಿವೆ. </p><p>ಇದರ ಜತೆಗೆ ಚಿಕ್ಕಬಳ್ಳಾಪುರ, ಹಾಸನದಿಂದ ತಲಾ 50, ರಾಯಚೂರಿನಿಂದ 225 ಬಸ್ಗಳನ್ನು ಕರೆಸಿಕೊಳ್ಳಲಾಗಿದೆ. </p><p>ಕೆಕೆಆರ್ಟಿಸಿಯ ಬಳ್ಳಾರಿ ವಿಭಾಗದಲ್ಲಿ ಬಸ್ ಗಳ ಕೊರತೆ ಇದ್ದಿದ್ದರಿಂದ ರಾಜ್ಯದ ವಿವಿಧ ಕಡೆಗಳಿಂದ ಬಸ್ ಗಳನ್ನು ತರಿಸಿಕೊಳ್ಳಲಾಗಿದೆ. ಜಿಲ್ಲೆಯಿಂದ ಒಟ್ಟು 800 ಬಸ್ ಗಳನ್ನು ಸಮಾವೇಶಕ್ಕೆ ಒಪ್ಪಂದದ ಮೇರೆಗೆ ಒದಗಿಸಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಕರು ಪ್ರಜಾವಾಣಿಗೆ ತಿಳಿಸಿದರು. </p><p>ರಾಜ್ಯದ ವಿವಿಧ ಕಡೆಗಳಿಂದ ಬಳ್ಳಾರಿಗೆ ಬಂದಿರುವ ಬಸ್ಗಳು ಮುನ್ಸಿಪಲ್ ಕಾಲೇಜು ಮೈದಾನ, ಅಕ್ಕಪಕ್ಕದ ರಸ್ತೆಗಳಲ್ಲಿ ನಿಂತಿವೆ. </p><p>ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ ತಲಾ 10 ಸಾವಿರ ಜನರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುತ್ತಿದೆ.</p>.ಸಮರ್ಪಣಾ ಸಂಕಲ್ಪ ಸಮಾವೇಶ | ರೈತರಿಂದ ಪ್ರತಿಭಟನೆಯ ಆತಂಕ: ಕಟ್ಟುನಿಟ್ಟಿನ ತಪಾಸಣೆ.ಹೊಸಪೇಟೆ | ಬಿಡುವು ನೀಡಿದ ಮಳೆ: ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಹಬ್ಬದ ಕಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಇಂದು ನಡೆಯುತ್ತಿರುವ 'ಸಮರ್ಪಣಾ ಸಂಕಲ್ಪ' ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬೆಂಗಳೂರಿನಿಂದ 250 ಬಿಎಂಟಿಸಿ ಬಸ್ಗಳು ಬಳ್ಳಾರಿಗೆ ಬಂದಿವೆ. </p><p>ಇದರ ಜತೆಗೆ ಚಿಕ್ಕಬಳ್ಳಾಪುರ, ಹಾಸನದಿಂದ ತಲಾ 50, ರಾಯಚೂರಿನಿಂದ 225 ಬಸ್ಗಳನ್ನು ಕರೆಸಿಕೊಳ್ಳಲಾಗಿದೆ. </p><p>ಕೆಕೆಆರ್ಟಿಸಿಯ ಬಳ್ಳಾರಿ ವಿಭಾಗದಲ್ಲಿ ಬಸ್ ಗಳ ಕೊರತೆ ಇದ್ದಿದ್ದರಿಂದ ರಾಜ್ಯದ ವಿವಿಧ ಕಡೆಗಳಿಂದ ಬಸ್ ಗಳನ್ನು ತರಿಸಿಕೊಳ್ಳಲಾಗಿದೆ. ಜಿಲ್ಲೆಯಿಂದ ಒಟ್ಟು 800 ಬಸ್ ಗಳನ್ನು ಸಮಾವೇಶಕ್ಕೆ ಒಪ್ಪಂದದ ಮೇರೆಗೆ ಒದಗಿಸಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಕರು ಪ್ರಜಾವಾಣಿಗೆ ತಿಳಿಸಿದರು. </p><p>ರಾಜ್ಯದ ವಿವಿಧ ಕಡೆಗಳಿಂದ ಬಳ್ಳಾರಿಗೆ ಬಂದಿರುವ ಬಸ್ಗಳು ಮುನ್ಸಿಪಲ್ ಕಾಲೇಜು ಮೈದಾನ, ಅಕ್ಕಪಕ್ಕದ ರಸ್ತೆಗಳಲ್ಲಿ ನಿಂತಿವೆ. </p><p>ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ ತಲಾ 10 ಸಾವಿರ ಜನರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುತ್ತಿದೆ.</p>.ಸಮರ್ಪಣಾ ಸಂಕಲ್ಪ ಸಮಾವೇಶ | ರೈತರಿಂದ ಪ್ರತಿಭಟನೆಯ ಆತಂಕ: ಕಟ್ಟುನಿಟ್ಟಿನ ತಪಾಸಣೆ.ಹೊಸಪೇಟೆ | ಬಿಡುವು ನೀಡಿದ ಮಳೆ: ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಹಬ್ಬದ ಕಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>