<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಯ ಎಕ್ಸ್ಪೈರಿ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೈ ಕಮಾಂಡ್ಗೆ ಕಾಣಿಕೆ ಸಲ್ಲಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಟಕ್ಕರ್ ನೀಡಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.</p>.<p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, 'ಸಿಎಂ ಆಗಿಯೇ ಸಿದ್ಧ ಎಂದು ತೊಡೆ ತಟ್ಟಿದ್ದ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರನ್ನು ಛೂ ಬಿಟ್ಟು, ಜಾತಿಗಣತಿ - ದಲಿತ ಸಿಎಂ ಅಸ್ತ್ರ ಮುಂದಿಟ್ಟುಕೊಂಡು ಡಿಕೆಶಿಯ ನಟ್ಟು, ಬೋಲ್ಟು ಕಳಚಿ ಸಿಎಂ ಪದವಿಯೆಂಬ ಹಗಲು ಕನಸಿಗೆ ತಿಲಾಂಜಲಿ ಹಾಡಿದ್ದಾರೆ' ಎಂದು ಕುಟುಕಿದೆ.</p>.<p>'ತಮ್ಮ ಪಕ್ಷಕ್ಕೆ ಅಪಾರ ಧನ ಅರ್ಪಿಸಿರುವ ಮೂಲ ಕಾಂಗ್ರೆಸ್ಸಿಗ ಡಿಕೆಶಿ ಅವರು ಸಿದ್ದರಾಮಯ್ಯರ ಚಕ್ರವ್ಯೂಹದಲ್ಲಿ ಸೋತಿದ್ದು, ಅವರ ಮುಂದೆ ಬೇರೆ ದಾರಿ ಕಾಣದೆ ಶರಣಾಗಿದ್ದಾರೆ' ಎಂದಿದೆ. </p>.<p>ನಾನು ಸಿಎಂ, ನಾನು ಸಿಎಂ ಎಂದು ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳೇ ಮರೀಚಿಕೆಯಾಗಿದೆ ಎಂದೂ ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಯ ಎಕ್ಸ್ಪೈರಿ ದಿನಾಂಕ ಹತ್ತಿರ ಬರುತ್ತಿದ್ದಂತೆ ಕೈ ಕಮಾಂಡ್ಗೆ ಕಾಣಿಕೆ ಸಲ್ಲಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಟಕ್ಕರ್ ನೀಡಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.</p>.<p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, 'ಸಿಎಂ ಆಗಿಯೇ ಸಿದ್ಧ ಎಂದು ತೊಡೆ ತಟ್ಟಿದ್ದ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರನ್ನು ಛೂ ಬಿಟ್ಟು, ಜಾತಿಗಣತಿ - ದಲಿತ ಸಿಎಂ ಅಸ್ತ್ರ ಮುಂದಿಟ್ಟುಕೊಂಡು ಡಿಕೆಶಿಯ ನಟ್ಟು, ಬೋಲ್ಟು ಕಳಚಿ ಸಿಎಂ ಪದವಿಯೆಂಬ ಹಗಲು ಕನಸಿಗೆ ತಿಲಾಂಜಲಿ ಹಾಡಿದ್ದಾರೆ' ಎಂದು ಕುಟುಕಿದೆ.</p>.<p>'ತಮ್ಮ ಪಕ್ಷಕ್ಕೆ ಅಪಾರ ಧನ ಅರ್ಪಿಸಿರುವ ಮೂಲ ಕಾಂಗ್ರೆಸ್ಸಿಗ ಡಿಕೆಶಿ ಅವರು ಸಿದ್ದರಾಮಯ್ಯರ ಚಕ್ರವ್ಯೂಹದಲ್ಲಿ ಸೋತಿದ್ದು, ಅವರ ಮುಂದೆ ಬೇರೆ ದಾರಿ ಕಾಣದೆ ಶರಣಾಗಿದ್ದಾರೆ' ಎಂದಿದೆ. </p>.<p>ನಾನು ಸಿಎಂ, ನಾನು ಸಿಎಂ ಎಂದು ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳೇ ಮರೀಚಿಕೆಯಾಗಿದೆ ಎಂದೂ ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>