‘ಸದನ ಸಮಿತಿ ರನಚೆ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ ಸಭಾಧ್ಯಕ್ಷ ರಮೇಶ್ಕುಮಾರ್, ‘ಸಮಯದ ಕಾರಣ 15 ದಿನಗಳ ಒಳಗೆ ತನಿಖೆ ಆಗಬೇಕು ಎಂಬ ಉದ್ದೇಶದಿಂದ ಎಸ್ಐಟಿಗೆ ನೀಡುವಂತೆ ಸಿಎಂಗೆ ಹೇಳಿದ್ದೇನೆ. ನ್ಯಾಯಾಂಗ ತನಿಖೆಯಿಂದ ಬೇಗ ಬಗೆಹರಿಯುವುದಿಲ್ಲ. 15 ದಿನಗಳ ಒಳಗೆ ತನಿಖೆ ಮುಗಿದು ನನ್ನ ತಲೆ ಮೇಲಿರುವ ಭಾರವನ್ನು ಇಳಿಸಿಕೊಂಡು ನಿರಾಳವಾಗಬೇಕು ಎಂಬ ಉದ್ದೇಶದಿಂದ ಎಸ್ಐಟಿಗೆ ನೀಡಲು ಸೂಚಿಸಿದ್ದೇನೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.