ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್ನಲ್ಲಿ ₹5,300 ಕೋಟಿ ಇಟ್ಟಿದೆ. ಆದರೆ, ಅದನ್ನು ಪಡೆಯಲು ನಿಗದಿತ (ಎನ್) ಅರ್ಜಿ ಫಾರಂ ಸಲ್ಲಿಸಬೇಕಿತ್ತು. ಆ ವಿಚಾರ ನಿಮಗೆ ಗೊತ್ತಾ? ನೀರಾವರಿ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೆ ಅಂತಹದ್ದೊಂದು ಅರ್ಜಿ ಸಲ್ಲಿಸಿದ್ದಾರಾ? ನೀವು ಅಧಿಕಾರಕ್ಕೆ ಬಂದು 9 ತಿಂಗಳು ಆಯಿತು. ಕೇವಲ ದೂರುವುದನ್ನು ಬಿಟ್ಟು ಇನ್ನೇನು ಮಾಡಿದ್ದೀರಿ. ಟೀಕೆ ಮಾಡಿದರೆ ಅಥವಾ ಕೇಂದ್ರ ಸಚಿವರು ಭೇಟಿ ಮಾಡಿ ಮನವಿ ಮಾಡಿದ ತಕ್ಷಣ ಹಣ ಬರುವುದಿಲ್ಲ. ಭದ್ರಾ ಮೇಲ್ದಂಡೆಗೆ ಹಣ ಬಂದಿಲ್ಲವಾದರೆ ಅದಕ್ಕೆ ನೀವೇ ಕಾರಣ ಎಂದು ಬೊಮ್ಮಾಯಿ ಹೇಳಿದರು.