ರೈಲ್ವೆ ಸಚಿವಾಲಯ ಆದೇಶ ಪ್ರತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪಸಿಂಹ, ‘ಇನ್ನು ಮುಂದೆ ‘ಟಿಪ್ಪು ಎಕ್ಸ್ಪ್ರೆಸ್’ ಬದಲು ‘ಒಡೆಯರ್ ಎಕ್ಸ್ಪ್ರೆಸ್’ ನಿಮಗೆ ಸೇವೆ ಒದಗಿಸಲಿದೆ. ಜತೆಗೆ, ‘ಮೈಸೂರು-ತಾಳಗುಪ್ಪ’ ಬದಲು ‘ಕುವೆಂಪು ಎಕ್ಸ್ಪ್ರೆಸ್’ ಆಗಿ ಬದಲಾಗಲಿದೆ. ಇದಕ್ಕೆ ಕಾರಣರಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ಪ್ರಲ್ಹಾದ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಡಿ.ಪಿ.ಸತೀಶ್ ಅವರಿಗೆ ಧನ್ಯವಾದ’ ಬರೆದುಕೊಂಡಿದ್ದಾರೆ.