ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆದ ಜೆಡಿಎಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು, 80 ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಬಿಜೆಪಿಯನ್ನು ಹಿಂದಿಟ್ಟು ಜೆಡಿಎಸ್ ಜತೆಗೆ ಕೈಜೋಡಿಸಿದ್ದು, ಇತರೆ ವಿಜೇತರ ಸಹಕಾರ ಪಡೆದು 120 ಸ್ಥಾನಗಳ ಬೆಂಬಲದೊಂದಿಗೆಸರ್ಕಾರ ರಚನೆಯಾಗಿದ್ದು, 104 ಸ್ಥಾನಗಳನ್ನು ಪಡೆದು 113 ಬೆಂಬಲ ಸಂಖ್ಯೆಯನ್ನು ಮುಟ್ಟಲಾರದೆ ಬಿಜೆಪಿ ತಿಣುಕಾಡಿದ್ದು,ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದ್ದು, ಪದೇ ಪದೇ ಕಣ್ಣೀರು ಹಾಕುತ್ತ ’ನಾನು ಸಾಂದರ್ಭಿಕ ಶಿಶು, ನನ್ನ ಕಷ್ಟ ಹೇಳಿಕೊಳ್ಳಲಾರೆ’ ಎಂದೆಲ್ಲ ಗೋಗರೆಯುತ್ತಿದುದು,...ಈ ಎಲ್ಲದರ ಹಿನ್ನೆಲೆಯಲ್ಲಿ ಬಿಜೆಪಿ ಪ್ರಸ್ತಾಪಿಸಿರುವ ’ಆಕ್ಸಿಡೆಂಟಲ್ ಸಿಎಂ’ ಶೀರ್ಷಿಕೆ ಟ್ವೀಟಿಗರ ಗಮನ ಸೆಳೆದಿದೆ.