<p>ಬೆಂಗಳೂರು: ‘ಬರಹಗಾರರನ್ನು ಭಾಷೆ, ಜಾತಿ, ಸಿದ್ಧಾಂತದ ಹೆಸರಿನಲ್ಲಿ ಇಬ್ಭಾಗಿಸುವ ಹುನ್ನಾರಗಳು ಹಿಂದೆಂದಿಗಿಂತ ಇಂದು ತೀವ್ರಗತಿಯಲ್ಲಿ ನಡೆಯುತ್ತಿವೆ. ಈ ಒಡೆದು ಆಳುವ ನೀತಿಯನ್ನು ಎಲ್ಲಾ ಬರಹಗಾರರು ಅರ್ಥೈಸಿಕೊಳ್ಳುವ ತುರ್ತು ಅಗತ್ಯವಿದೆ’ ಎಂದು ಲೇಖಕಿ ಶಶಿ ದೇಶಪಾಂಡೆ ಒತ್ತಿ ಹೇಳಿದರು.<br /> <br /> ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಶನಿವಾರ ಆರಂಭಗೊಂಡ ‘ಬೆಂಗಳೂರು ಸಾಹಿತ್ಯ ಉತ್ಸವ’ದ ನಾಲ್ಕನೇಯ ಆವೃತ್ತಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.<br /> <br /> ‘ಅಸಹಿಷ್ಣುತೆ ಖಂಡಿಸಿ ಬರಹಗಾರರು ತಮಗೆ ಸಂದ ಪ್ರಶಸ್ತಿಗಳನ್ನು ವಾಪಸ್ ಮಾಡುವ ವಿಚಾರದಲ್ಲಿ ದೇಶದ ಸಾರಸ್ವತ ಲೋಕದೊಳಗೆ ಎರಡು ಪಂಗಡಗಳು ಸೃಷ್ಟಿಯಾದವು. ಆ ಕಾರಣ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯಗಳು ಮೂಡಲು ಆರಂಭಿಸಿದವು. ಅಸಹಿಷ್ಣುತೆ ವಿಚಾರವಾಗಿ ನಡೆಯುತ್ತಿರುವ ಸಂವಾದ, ಚರ್ಚೆಗಳು ಅಸಂಬದ್ಧವಾದ ರೀತಿಯಲ್ಲಿ ಹಳಿ ತಪ್ಪಿ ಸಾಗುತ್ತಿವೆ. ಕೆಲ ಬುದ್ಧಿವಂತರ ಕುತಂತ್ರದಿಂದ ಈ ಗೊಂದಲ ಉಂಟಾಯಿತೆ? ನನಗೆ ಗೊತ್ತಿಲ್ಲ’ ಎಂದರು.<br /> <br /> ‘ತುಂಬ ಶಾಂತಿ ಮತ್ತು ಸಜ್ಜನರಿರುವ ಧಾರವಾಡದಂತಹ ಪ್ರದೇಶದಲ್ಲಿ ನಡೆದ ಕಲಬುರ್ಗಿ ಅವರ ಹತ್ಯೆ ತುಂಬಾ ಘಾತಕಾರಿಯಾದದ್ದು. ಆದರೆ, ಈ ಬಗ್ಗೆ ಸಾಹಿತ್ಯ ಅಕಾಡೆಮಿ ಮೌನ ವಹಿಸಿರುವುದು ಬೇಸರ ತಂದಿದೆ. ಲೇಖಕರ ಹಿತ ಕಾಪಾಡುವಲ್ಲಿ ಸಾಹಿತ್ಯ ಅಕಾಡೆಮಿ ವಿಫಲವಾಗಿದೆ’ ಎಂದು ಆರೋಪಿಸಿದರು.<br /> <br /> ‘ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಭಿನ್ನ ಅಭಿಪ್ರಾಯವುಳ್ಳವರನ್ನು ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಟೀಕೆಗಳನ್ನು ಬರಹಗಾರರು ನಿರ್ಲಕ್ಷಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಬರಹಗಾರರನ್ನು ಭಾಷೆ, ಜಾತಿ, ಸಿದ್ಧಾಂತದ ಹೆಸರಿನಲ್ಲಿ ಇಬ್ಭಾಗಿಸುವ ಹುನ್ನಾರಗಳು ಹಿಂದೆಂದಿಗಿಂತ ಇಂದು ತೀವ್ರಗತಿಯಲ್ಲಿ ನಡೆಯುತ್ತಿವೆ. ಈ ಒಡೆದು ಆಳುವ ನೀತಿಯನ್ನು ಎಲ್ಲಾ ಬರಹಗಾರರು ಅರ್ಥೈಸಿಕೊಳ್ಳುವ ತುರ್ತು ಅಗತ್ಯವಿದೆ’ ಎಂದು ಲೇಖಕಿ ಶಶಿ ದೇಶಪಾಂಡೆ ಒತ್ತಿ ಹೇಳಿದರು.<br /> <br /> ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಶನಿವಾರ ಆರಂಭಗೊಂಡ ‘ಬೆಂಗಳೂರು ಸಾಹಿತ್ಯ ಉತ್ಸವ’ದ ನಾಲ್ಕನೇಯ ಆವೃತ್ತಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.<br /> <br /> ‘ಅಸಹಿಷ್ಣುತೆ ಖಂಡಿಸಿ ಬರಹಗಾರರು ತಮಗೆ ಸಂದ ಪ್ರಶಸ್ತಿಗಳನ್ನು ವಾಪಸ್ ಮಾಡುವ ವಿಚಾರದಲ್ಲಿ ದೇಶದ ಸಾರಸ್ವತ ಲೋಕದೊಳಗೆ ಎರಡು ಪಂಗಡಗಳು ಸೃಷ್ಟಿಯಾದವು. ಆ ಕಾರಣ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯಗಳು ಮೂಡಲು ಆರಂಭಿಸಿದವು. ಅಸಹಿಷ್ಣುತೆ ವಿಚಾರವಾಗಿ ನಡೆಯುತ್ತಿರುವ ಸಂವಾದ, ಚರ್ಚೆಗಳು ಅಸಂಬದ್ಧವಾದ ರೀತಿಯಲ್ಲಿ ಹಳಿ ತಪ್ಪಿ ಸಾಗುತ್ತಿವೆ. ಕೆಲ ಬುದ್ಧಿವಂತರ ಕುತಂತ್ರದಿಂದ ಈ ಗೊಂದಲ ಉಂಟಾಯಿತೆ? ನನಗೆ ಗೊತ್ತಿಲ್ಲ’ ಎಂದರು.<br /> <br /> ‘ತುಂಬ ಶಾಂತಿ ಮತ್ತು ಸಜ್ಜನರಿರುವ ಧಾರವಾಡದಂತಹ ಪ್ರದೇಶದಲ್ಲಿ ನಡೆದ ಕಲಬುರ್ಗಿ ಅವರ ಹತ್ಯೆ ತುಂಬಾ ಘಾತಕಾರಿಯಾದದ್ದು. ಆದರೆ, ಈ ಬಗ್ಗೆ ಸಾಹಿತ್ಯ ಅಕಾಡೆಮಿ ಮೌನ ವಹಿಸಿರುವುದು ಬೇಸರ ತಂದಿದೆ. ಲೇಖಕರ ಹಿತ ಕಾಪಾಡುವಲ್ಲಿ ಸಾಹಿತ್ಯ ಅಕಾಡೆಮಿ ವಿಫಲವಾಗಿದೆ’ ಎಂದು ಆರೋಪಿಸಿದರು.<br /> <br /> ‘ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಭಿನ್ನ ಅಭಿಪ್ರಾಯವುಳ್ಳವರನ್ನು ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಟೀಕೆಗಳನ್ನು ಬರಹಗಾರರು ನಿರ್ಲಕ್ಷಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>