<p class="bodytext">ಬೀಜಿಂಗ್: ಚೀನಾದ ಶಾಂನ್ಡಾಂಗ್ ಪ್ರಾಂತ್ಯದ ಚೀನಾದ ಗಣಿಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ 11 ಗಣಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.</p>.<p class="bodytext">ಶಾನ್ಡೊಂಗ್ ಪ್ರಾಂತ್ಯದ ಕಿಕ್ಸಿಯಾ ನಗರದದಲ್ಲಿ ಭಾಗಶಃ ನಿರ್ಮಿಸಲಾದ ಚಿನ್ನದ ಗಣಿಯಲ್ಲಿ ಜ.10ರಂದು ಸ್ಫೋಟ ನಡೆದಿತ್ತು. ಈ ಸಂದರ್ಭದಲ್ಲಿ 22 ಗಣಿ ಕಾರ್ಮಿಕರು ಭೂಗರ್ಭದಲ್ಲಿ ಸಿಲುಕಿದ್ದರು. ರಕ್ಷಣಾಧಿಕಾರಿಗಳು ಎಲ್ಲಾ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಂಡಿದ್ದು, ಭಾನುವಾರ ಬೆಳಿಗ್ಗೆ ಇಬ್ಬರು ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಇದುವರೆಗೆ ಒಟ್ಟು 11 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.</p>.<p class="bodytext">ಒಟ್ಟು 633 ಜನರು 407 ರಕ್ಷಣಾ ಉಪಕರಣಗಳೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p class="bodytext">‘ಗಣಿಯೊಳಗೆ ಸಿಲುಕಿರುವವರು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾರೆ’ ಎಂದು ಭಾನುವಾರ ಮುಂಜಾನೆ ರಕ್ಷಿಸಲಾದ ಕಾರ್ಮಿಕನೊಬ್ಬ ಮಾಹಿತಿ ನೀಡಿದ್ದಾನೆ.</p>.<p class="bodytext">ಭಾನುವಾರಕ್ಕೂ ಮುನ್ನ ಭೂಗರ್ಭದಲ್ಲಿ ಸಿಲುಕಿರುವ 10 ಗಣಿ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಅವರೆಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿದೆ. ಕಾರ್ಮಿಕರಲ್ಲಿ ಒಬ್ಬಾತ ಮೃತಪಟ್ಟಿರುವ ಸಾಧ್ಯತೆ ಇದ್ದು, ಮತ್ತೊಬ್ಬ ಕೋಮಾ ಸ್ಥಿತಿಯಲ್ಲಿದ್ದಾನೆ ಎಂದೂ ಮೂಲಗಳು ತಿಳಿಸಿವೆ.</p>.<p class="bodytext">ಚೀನಾದ ಗಣಿಗಳಲ್ಲಿ ನಡೆಸಲಾಗುವ ಸ್ಫೋಟಗಳಲ್ಲಿ ಕಾರ್ಮಿಕರು ಸಾವನ್ನಪ್ಪುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ನೈರುತ್ಯ ಚೀನಾದ ಕಲ್ಪಿದ್ದಲ್ಲು ಗಣಿಯಲ್ಲಿ ಸೆಪ್ಟೆಂಬರ್ನಲ್ಲಿ 16 ಕಾರ್ಮಿಕರು ಕಾರ್ಬನ್ ಮಾನಾಕ್ಸೈಡ್ ಸೇವನೆಯಿಂದ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext">ಬೀಜಿಂಗ್: ಚೀನಾದ ಶಾಂನ್ಡಾಂಗ್ ಪ್ರಾಂತ್ಯದ ಚೀನಾದ ಗಣಿಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ 11 ಗಣಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.</p>.<p class="bodytext">ಶಾನ್ಡೊಂಗ್ ಪ್ರಾಂತ್ಯದ ಕಿಕ್ಸಿಯಾ ನಗರದದಲ್ಲಿ ಭಾಗಶಃ ನಿರ್ಮಿಸಲಾದ ಚಿನ್ನದ ಗಣಿಯಲ್ಲಿ ಜ.10ರಂದು ಸ್ಫೋಟ ನಡೆದಿತ್ತು. ಈ ಸಂದರ್ಭದಲ್ಲಿ 22 ಗಣಿ ಕಾರ್ಮಿಕರು ಭೂಗರ್ಭದಲ್ಲಿ ಸಿಲುಕಿದ್ದರು. ರಕ್ಷಣಾಧಿಕಾರಿಗಳು ಎಲ್ಲಾ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಂಡಿದ್ದು, ಭಾನುವಾರ ಬೆಳಿಗ್ಗೆ ಇಬ್ಬರು ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಇದುವರೆಗೆ ಒಟ್ಟು 11 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.</p>.<p class="bodytext">ಒಟ್ಟು 633 ಜನರು 407 ರಕ್ಷಣಾ ಉಪಕರಣಗಳೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p class="bodytext">‘ಗಣಿಯೊಳಗೆ ಸಿಲುಕಿರುವವರು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾರೆ’ ಎಂದು ಭಾನುವಾರ ಮುಂಜಾನೆ ರಕ್ಷಿಸಲಾದ ಕಾರ್ಮಿಕನೊಬ್ಬ ಮಾಹಿತಿ ನೀಡಿದ್ದಾನೆ.</p>.<p class="bodytext">ಭಾನುವಾರಕ್ಕೂ ಮುನ್ನ ಭೂಗರ್ಭದಲ್ಲಿ ಸಿಲುಕಿರುವ 10 ಗಣಿ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಅವರೆಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿದೆ. ಕಾರ್ಮಿಕರಲ್ಲಿ ಒಬ್ಬಾತ ಮೃತಪಟ್ಟಿರುವ ಸಾಧ್ಯತೆ ಇದ್ದು, ಮತ್ತೊಬ್ಬ ಕೋಮಾ ಸ್ಥಿತಿಯಲ್ಲಿದ್ದಾನೆ ಎಂದೂ ಮೂಲಗಳು ತಿಳಿಸಿವೆ.</p>.<p class="bodytext">ಚೀನಾದ ಗಣಿಗಳಲ್ಲಿ ನಡೆಸಲಾಗುವ ಸ್ಫೋಟಗಳಲ್ಲಿ ಕಾರ್ಮಿಕರು ಸಾವನ್ನಪ್ಪುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ನೈರುತ್ಯ ಚೀನಾದ ಕಲ್ಪಿದ್ದಲ್ಲು ಗಣಿಯಲ್ಲಿ ಸೆಪ್ಟೆಂಬರ್ನಲ್ಲಿ 16 ಕಾರ್ಮಿಕರು ಕಾರ್ಬನ್ ಮಾನಾಕ್ಸೈಡ್ ಸೇವನೆಯಿಂದ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>