<p class="rtejustify"><strong>ಯಾಂಗೂನ್ (ಎಎಫ್ಪಿ)</strong>: ಹಿರಿಯ ಬೌದ್ಧ ಸನ್ಯಾಸಿ ಮತ್ತು ಏಳು ಮಂದಿ ದಾನಿಗಳನ್ನು ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕರೆದೊಯ್ಯುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನವು ಅಪಘಾತಕ್ಕೀಡಾಗಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಜುಂಟಾ ವಕ್ತಾರರು ಗುರುವಾರ ತಿಳಿಸಿದ್ದಾರೆ.</p>.<p class="rtejustify">ಆರು ಸಿಬ್ಬಂದಿ ಮತ್ತು ಎಂಟು ಪ್ರಯಾಣಿಕರಿದ್ದ ಈ ವಿಮಾನವು ಪೈನ್ ಓ ಎಲ್ವಿನ್ ನಗರದಲ್ಲಿ ಇಳಿಯಬೇಕಿದ್ದ ಸ್ವಲ್ಪ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ ಎಂದು ವಕ್ತಾರ ಜಾವ್ ಮಿನ್ ತುನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p class="rtejustify">ದೇಶದ ರಾಜಧಾನಿ ನಾಯ್ಪಿಡಾವ್ ಬಳಿಯ ಜಾಯ್ ಕೋನ್ ಮಠದ ಪ್ರಮುಖ ಬೌದ್ಧ ಸನ್ಯಾಸಿ ಕವಿಸಾರ ಮತ್ತು ಏಳು ದಾನಿಗಳು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.</p>.<p class="rtejustify">ತಕ್ಷಣ ಸ್ಥಳಕ್ಕೆ ಧಾವಿಸಿದತುರ್ತು ರಕ್ಷಣಾಕಾರರಿಗೆ ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಒಬ್ಬ ಬಾಲಕ ಮತ್ತು ಸಾರ್ಜೆಂಟ್ ಒಬ್ಬರನ್ನು ರಕ್ಷಿಸಲು ಸಾಧ್ಯವಾಗಿದೆ. ಆ ಇಬ್ಬರನ್ನು ಚಿಕಿತ್ಸೆಗಾಗಿ ಹತ್ತಿರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtejustify"><strong>ಯಾಂಗೂನ್ (ಎಎಫ್ಪಿ)</strong>: ಹಿರಿಯ ಬೌದ್ಧ ಸನ್ಯಾಸಿ ಮತ್ತು ಏಳು ಮಂದಿ ದಾನಿಗಳನ್ನು ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕರೆದೊಯ್ಯುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನವು ಅಪಘಾತಕ್ಕೀಡಾಗಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಜುಂಟಾ ವಕ್ತಾರರು ಗುರುವಾರ ತಿಳಿಸಿದ್ದಾರೆ.</p>.<p class="rtejustify">ಆರು ಸಿಬ್ಬಂದಿ ಮತ್ತು ಎಂಟು ಪ್ರಯಾಣಿಕರಿದ್ದ ಈ ವಿಮಾನವು ಪೈನ್ ಓ ಎಲ್ವಿನ್ ನಗರದಲ್ಲಿ ಇಳಿಯಬೇಕಿದ್ದ ಸ್ವಲ್ಪ ಸಮಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ ಎಂದು ವಕ್ತಾರ ಜಾವ್ ಮಿನ್ ತುನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p class="rtejustify">ದೇಶದ ರಾಜಧಾನಿ ನಾಯ್ಪಿಡಾವ್ ಬಳಿಯ ಜಾಯ್ ಕೋನ್ ಮಠದ ಪ್ರಮುಖ ಬೌದ್ಧ ಸನ್ಯಾಸಿ ಕವಿಸಾರ ಮತ್ತು ಏಳು ದಾನಿಗಳು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.</p>.<p class="rtejustify">ತಕ್ಷಣ ಸ್ಥಳಕ್ಕೆ ಧಾವಿಸಿದತುರ್ತು ರಕ್ಷಣಾಕಾರರಿಗೆ ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಒಬ್ಬ ಬಾಲಕ ಮತ್ತು ಸಾರ್ಜೆಂಟ್ ಒಬ್ಬರನ್ನು ರಕ್ಷಿಸಲು ಸಾಧ್ಯವಾಗಿದೆ. ಆ ಇಬ್ಬರನ್ನು ಚಿಕಿತ್ಸೆಗಾಗಿ ಹತ್ತಿರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>