<p><strong>ನವದೆಹಲಿ:</strong> ಭಾರತದ ಡಾರ್ನಿಯರ್ ವಿಮಾನದ ಬಳಕೆಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವಕಾಶ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ, ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮಾಲ್ಡೀವ್ಸ್ನ 14 ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.</p>.<p>ಭಾರತದ ಡಾರ್ನಿಯರ್ ವಿಮಾನವನ್ನು ಬಳಸಿಕೊಂಡು, ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಲ್ಲಿ ಆ ಮಗು ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ. </p>.<p>ಪಾರ್ಶ್ವವಾಯು ಮತ್ತು ಬ್ರೇನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ದ್ಪೀಪ ಪ್ರದೇಶ ಗಾಫ್ ಅಲಿಫ್ ವಿಲ್ಲಿಂಗಿಲ್ಲಿಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಲು ವಿಮಾನ ನೀಡುವಂತೆ ಬಾಲಕನ ಕುಟುಂಬಸ್ಥರು ಬುಧವಾರ ರಾತ್ರಿ ಕೋರಿದ್ದರು. </p>.<p>ಆದರೆ, ಗುರುವಾರ ಬೆಳಿಗ್ಗೆವರೆಗೆ ದೇಶದ ವಿಮಾನಯಾನ ಅಧಿಕಾರಿಗಳು ಉತ್ತರಿಸಲೇ ಇಲ್ಲ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಈ ಘಟನೆ ಬಳಿಕ ಮಗು ಮೃತಪಟ್ಟಿರುವ ಆಸ್ಪತ್ರೆ ಹೊರಗೆ ಭಾರಿ ಪ್ರತಿಭಟನೆ ನಡೆದಿದೆ. </p>.<p>‘ಭಾರತದ ಕುರಿತಾದ ಅಧ್ಯಕ್ಷರ ದ್ವೇಷವನ್ನು ತಣಿಸಲು ದೇಶದ ಜನರು ತಮ್ಮ ಪ್ರಾಣ ಕೊಡಬೇಕಾಗಿಲ್ಲ’ ಎಂದು ಮಾಲ್ಡೀವ್ಸ್ ಸಂಸದ ಮೀಕೆಲ್ ನಸೀಂ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. </p>.<p>ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) ನಿರ್ಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಡಾರ್ನಿಯರ್ ವಿಮಾನದ ಬಳಕೆಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವಕಾಶ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ, ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮಾಲ್ಡೀವ್ಸ್ನ 14 ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.</p>.<p>ಭಾರತದ ಡಾರ್ನಿಯರ್ ವಿಮಾನವನ್ನು ಬಳಸಿಕೊಂಡು, ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಲ್ಲಿ ಆ ಮಗು ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ. </p>.<p>ಪಾರ್ಶ್ವವಾಯು ಮತ್ತು ಬ್ರೇನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ದ್ಪೀಪ ಪ್ರದೇಶ ಗಾಫ್ ಅಲಿಫ್ ವಿಲ್ಲಿಂಗಿಲ್ಲಿಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಲು ವಿಮಾನ ನೀಡುವಂತೆ ಬಾಲಕನ ಕುಟುಂಬಸ್ಥರು ಬುಧವಾರ ರಾತ್ರಿ ಕೋರಿದ್ದರು. </p>.<p>ಆದರೆ, ಗುರುವಾರ ಬೆಳಿಗ್ಗೆವರೆಗೆ ದೇಶದ ವಿಮಾನಯಾನ ಅಧಿಕಾರಿಗಳು ಉತ್ತರಿಸಲೇ ಇಲ್ಲ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಈ ಘಟನೆ ಬಳಿಕ ಮಗು ಮೃತಪಟ್ಟಿರುವ ಆಸ್ಪತ್ರೆ ಹೊರಗೆ ಭಾರಿ ಪ್ರತಿಭಟನೆ ನಡೆದಿದೆ. </p>.<p>‘ಭಾರತದ ಕುರಿತಾದ ಅಧ್ಯಕ್ಷರ ದ್ವೇಷವನ್ನು ತಣಿಸಲು ದೇಶದ ಜನರು ತಮ್ಮ ಪ್ರಾಣ ಕೊಡಬೇಕಾಗಿಲ್ಲ’ ಎಂದು ಮಾಲ್ಡೀವ್ಸ್ ಸಂಸದ ಮೀಕೆಲ್ ನಸೀಂ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. </p>.<p>ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) ನಿರ್ಮಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>