<p><strong>ಕೊಲಂಬೊ:</strong> ದೇಶದಲ್ಲಿ ಅಕ್ರಮ ಸರ್ಕಾರ ಅಸ್ತಿತ್ವದಲ್ಲಿದ್ದು, ಪಕ್ಷದ ಬೆಂಬಲಿಗರ ಫೇಸ್ಬುಕ್ ಮಾಹಿತಿಗಳನ್ನು ರಕ್ಷಿಸುವಂತೆ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್<em> </em>ಅವರಿಗೆ ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆಪತ್ರ ಬರೆದಿದ್ದಾರೆ.</p>.<p>ಕಳೆದ ತಿಂಗಳು ಲಂಕಾ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಿಂದ ದ್ವೀಪರಾಷ್ಟ್ರ ಗೊಂದಲದ ಗೂಡಾಗಿದೆ. ಅವಿಶ್ವಾಸ ಗೊತ್ತುವಳಿ ನಿಲುವಳಿ ಮಂಡನೆ ಚರ್ಚೆ ವೇಳೆ ಕಲಾಪದ ವೇಳೆಸಂಸತ್ ಸದಸ್ಯರುಪರಸ್ಪರ ಹೊಡೆದಾಡಿಕೊಂಡಿದ್ದರು.</p>.<p>ಈ ಬೆಳವಣಿಗೆ ಬೆನ್ನಲ್ಲೇ, ರಾಜಪಕ್ಸೆ ಆಡಳಿತಕ್ಕೆ ಯಾವುದೇ ಸಹಕಾರ ನೀಡಬಾರದು ಎಂದು ಫೇಸ್ಬುಕ್ ಮುಖ್ಯಸ್ಥ ಜುಕರ್ಬರ್ಗ್ಗೆ ಬರೆದಪತ್ರದಲ್ಲಿ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಪಕ್ಷವು ಒತ್ತಾಯಿಸಿದೆ.</p>.<p>‘ಬಳಕೆದಾರರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅಕ್ರಮವಾಗಿ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ನೀಡಬಾರದು, ಇದನ್ನು ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ಯುಎನ್ಪಿ ಎಚ್ಚರಿಸಿದೆ. ಗುರುವಾರ ನಡೆಯಲಿರುವ ಬೃಹತ್ ರ್ಯಾಲಿಗೂ ಮುನ್ನವೇ ಪಕ್ಷದ ಅಧಿಕೃತ ಪೇಜ್ ಸ್ಥಗಿತಗೊಳಿಸಲಾಗಿದೆ ಎಂದು ಇದೇ ವೇಳೆ ದೂರಿದೆ.</p>.<p><strong>ಫೇಸ್ಬುಕ್ ಮೇಲೆ ನಿಷೇಧ:</strong> ದ್ವೇಷಪೂರಿತ ಭಾಷಣ ಹಾಗೂ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪದ ಮೇಲೆ ಕಳೆದ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಫೇಸ್ಬುಕ್ ಜಾಲತಾಣದ ಮೇಲೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷೇಧ ಹೇರಿದ್ದರು.</p>.<p>ಈ ಬೆಳವಣಿಗೆ ಬಳಿಕ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ಮಾಡುವ ದೃಶ್ಯಾವಗಳಿಗಳನ್ನು ಜಾಲತಾಣದಿಂದ ತೆಗೆದುಹಾಕಲು ಹೆಚ್ಚಿನ ಸಿಬ್ಬಂದಿ ನೇಮಕಗೊಳಿಸುವುದಾಗಿ ಫೇಸ್ಬುಕ್ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ:</strong> ದೇಶದಲ್ಲಿ ಅಕ್ರಮ ಸರ್ಕಾರ ಅಸ್ತಿತ್ವದಲ್ಲಿದ್ದು, ಪಕ್ಷದ ಬೆಂಬಲಿಗರ ಫೇಸ್ಬುಕ್ ಮಾಹಿತಿಗಳನ್ನು ರಕ್ಷಿಸುವಂತೆ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್<em> </em>ಅವರಿಗೆ ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆಪತ್ರ ಬರೆದಿದ್ದಾರೆ.</p>.<p>ಕಳೆದ ತಿಂಗಳು ಲಂಕಾ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಿಂದ ದ್ವೀಪರಾಷ್ಟ್ರ ಗೊಂದಲದ ಗೂಡಾಗಿದೆ. ಅವಿಶ್ವಾಸ ಗೊತ್ತುವಳಿ ನಿಲುವಳಿ ಮಂಡನೆ ಚರ್ಚೆ ವೇಳೆ ಕಲಾಪದ ವೇಳೆಸಂಸತ್ ಸದಸ್ಯರುಪರಸ್ಪರ ಹೊಡೆದಾಡಿಕೊಂಡಿದ್ದರು.</p>.<p>ಈ ಬೆಳವಣಿಗೆ ಬೆನ್ನಲ್ಲೇ, ರಾಜಪಕ್ಸೆ ಆಡಳಿತಕ್ಕೆ ಯಾವುದೇ ಸಹಕಾರ ನೀಡಬಾರದು ಎಂದು ಫೇಸ್ಬುಕ್ ಮುಖ್ಯಸ್ಥ ಜುಕರ್ಬರ್ಗ್ಗೆ ಬರೆದಪತ್ರದಲ್ಲಿ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಪಕ್ಷವು ಒತ್ತಾಯಿಸಿದೆ.</p>.<p>‘ಬಳಕೆದಾರರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅಕ್ರಮವಾಗಿ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ನೀಡಬಾರದು, ಇದನ್ನು ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ಯುಎನ್ಪಿ ಎಚ್ಚರಿಸಿದೆ. ಗುರುವಾರ ನಡೆಯಲಿರುವ ಬೃಹತ್ ರ್ಯಾಲಿಗೂ ಮುನ್ನವೇ ಪಕ್ಷದ ಅಧಿಕೃತ ಪೇಜ್ ಸ್ಥಗಿತಗೊಳಿಸಲಾಗಿದೆ ಎಂದು ಇದೇ ವೇಳೆ ದೂರಿದೆ.</p>.<p><strong>ಫೇಸ್ಬುಕ್ ಮೇಲೆ ನಿಷೇಧ:</strong> ದ್ವೇಷಪೂರಿತ ಭಾಷಣ ಹಾಗೂ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪದ ಮೇಲೆ ಕಳೆದ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಫೇಸ್ಬುಕ್ ಜಾಲತಾಣದ ಮೇಲೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷೇಧ ಹೇರಿದ್ದರು.</p>.<p>ಈ ಬೆಳವಣಿಗೆ ಬಳಿಕ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ಮಾಡುವ ದೃಶ್ಯಾವಗಳಿಗಳನ್ನು ಜಾಲತಾಣದಿಂದ ತೆಗೆದುಹಾಕಲು ಹೆಚ್ಚಿನ ಸಿಬ್ಬಂದಿ ನೇಮಕಗೊಳಿಸುವುದಾಗಿ ಫೇಸ್ಬುಕ್ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>