<p><strong>ಲಾಹೋರ್</strong>: ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಭಾರತೀಯ ಸಿಖ್ ಮಹಿಳೆಯನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಕೋರಿ ಸಿಖ್ ಸಮುದಾಯದವರೇ ಆದ ಮಾಜಿ ಶಾಸಕರೊಬ್ಬರು ಬುಧವಾರ ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.</p><p>ಪಂಜಾಬ್ ವಿಧಾನಸಭೆಯ ಮಾಜಿ ಸದಸ್ಯೆ ಮಹಿಂದರ್ ಪಾಲ್ ಸಿಂಗ್ ಅವರು ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಸರಬ್ಜೀತ್ ಕೌರ್ (48) ಪಾಕಿಸ್ತಾನಕ್ಕೆ ಬಂದ ನಂತರ ಕಣ್ಮರೆಯಾಗಿದ್ದರು. ಅವರು ಗೂಢಚಾರಿಣಿ ಆಗಿರಬಹುದು ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.</p><p>ಅಪರಾಧ ಹಿನ್ನೆಲೆ ಹೊಂದಿದ್ದರೂ ಭಾರತ ಸರ್ಕಾರ ಕೌರ್ಗೆ ಪಾಕ್ಗೆ ತೆರಳಲು ಅನುಮತಿ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.</p><p>‘ಆಕೆಯ ವೀಸಾ ಅವಧಿ ಮುಗಿದ ನಂತರ ಪಾಕಿಸ್ತಾನದಲ್ಲಿ ಉಳಿಯುವುದು ಕಾನೂನುಬಾಹಿರ ಕೃತ್ಯವಾಗಿದೆ. ಏಕೆಂದರೆ, ಈ ವಿಷಯವು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ’ಎಂದು ಅವರು ಹೇಳಿದ್ದಾರೆ.</p><p>ಕೌರ್ ಅವರನ್ನು ಬಂಧಿಸಿ ಗಡೀಪಾರು ಮಾಡಲು ಕಾನೂನು ಜಾರಿ ಸಂಸ್ಥೆಗಳಿಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.</p><p>ಗುರುನಾನಕ್ ಜನುಮಸ್ಥಾನ, ನಂಕಾನಾ ಸಾಹಿಬ್ನಲ್ಲಿ ಗುರುನಾನಕ್ ಅವರ ಜನ್ಮ ದಿನಾಚರಣೆಗೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಈ ತಿಂಗಳ ಆರಂಭದಲ್ಲಿ ಭಾರತದಿಂದ ವಾಘಾ ಗಡಿಯ ಮೂಲಕ ಲಾಹೋರ್ಗೆ ಪ್ರವೇಶಿಸಿದ್ದ 2,000 ಸಿಖ್ ಯಾತ್ರಿಕರಲ್ಲಿ ಕೌರ್ ಕೂಡ ಒಬ್ಬರು.</p><p>ನವೆಂಬರ್ 13ರಂದು, ಪಾಕ್ಗೆ ಭೇಟಿ ನೀಡಿದ್ದ ಭಾರತೀಯ ಸಿಖ್ಖರು ಬಳಿಕ ಸ್ವದೇಶಕ್ಕೆ ಮರಳಿದ್ದರು. ಆದರೆ, ಕೌರ್ ಮಾತ್ರ ನಾಪತ್ತೆಯಾಗಿದ್ದರು. ನಂತರ, ನವೆಂಬರ್ 4ರಂದು ಲಾಹೋರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.</p><p>ಯಾತ್ರಿಕರು ನಂಕಾನಾ ಸಾಹಿಬ್ಗೆ ಹೋಗಿದ್ದಾಗ ಕೌರ್ ಆ ಗುಂಪಿನಿಂದ ಹೊರಬಂದು ಹುಸೇನ್ ಜೊತೆಗೆ ಶೇಖುಪುರ ತಲುಪಿದ್ದರು.</p><p>ಈ ನಡುವೆ, ಪೊಲೀಸರು ಶೇಖುಪುರದ ಫಾರೂಕಾಬಾದ್ನಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆಸಿ, ಮದುವೆಯನ್ನು ಕೊನೆಗೊಳಿಸುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿ ಕಳೆದ ವಾರ, ಕೌರ್ ಮತ್ತು ಹುಸೇನ್ ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p><p>ಈ ಸಂದರ್ಭ ನ್ಯಾಯಮೂರ್ತಿ ಫಾರೂಕ್ ಹೈದರ್ ಅರ್ಜಿದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.</p><p>ಪೊಲೀಸ್ ಅಧಿಕಾರಿಯೊಬ್ಬರು ದಂಪತಿಗೆ ಅನಗತ್ಯ ಕಿರುಕುಳ ನೀಡಿದ್ದಾರೆ. ಮದುವೆಯನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಕೌರ್ ಅರ್ಜಿಯಲ್ಲಿ ತಿಳಿಸಿದ್ದರು.</p><p>ತನ್ನ ಪತಿ ಪಾಕಿಸ್ತಾನದ ಪ್ರಜೆಯಾಗಿದ್ದು, ತನ್ನ ವೀಸಾವನ್ನು ವಿಸ್ತರಿಸಲು ಮತ್ತು ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಪಡೆಯಲು ಇಲ್ಲಿನ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇನೆ ಎಂದು ಅವರು ತಿಳಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್</strong>: ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಭಾರತೀಯ ಸಿಖ್ ಮಹಿಳೆಯನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಕೋರಿ ಸಿಖ್ ಸಮುದಾಯದವರೇ ಆದ ಮಾಜಿ ಶಾಸಕರೊಬ್ಬರು ಬುಧವಾರ ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.</p><p>ಪಂಜಾಬ್ ವಿಧಾನಸಭೆಯ ಮಾಜಿ ಸದಸ್ಯೆ ಮಹಿಂದರ್ ಪಾಲ್ ಸಿಂಗ್ ಅವರು ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಸರಬ್ಜೀತ್ ಕೌರ್ (48) ಪಾಕಿಸ್ತಾನಕ್ಕೆ ಬಂದ ನಂತರ ಕಣ್ಮರೆಯಾಗಿದ್ದರು. ಅವರು ಗೂಢಚಾರಿಣಿ ಆಗಿರಬಹುದು ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.</p><p>ಅಪರಾಧ ಹಿನ್ನೆಲೆ ಹೊಂದಿದ್ದರೂ ಭಾರತ ಸರ್ಕಾರ ಕೌರ್ಗೆ ಪಾಕ್ಗೆ ತೆರಳಲು ಅನುಮತಿ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.</p><p>‘ಆಕೆಯ ವೀಸಾ ಅವಧಿ ಮುಗಿದ ನಂತರ ಪಾಕಿಸ್ತಾನದಲ್ಲಿ ಉಳಿಯುವುದು ಕಾನೂನುಬಾಹಿರ ಕೃತ್ಯವಾಗಿದೆ. ಏಕೆಂದರೆ, ಈ ವಿಷಯವು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ’ಎಂದು ಅವರು ಹೇಳಿದ್ದಾರೆ.</p><p>ಕೌರ್ ಅವರನ್ನು ಬಂಧಿಸಿ ಗಡೀಪಾರು ಮಾಡಲು ಕಾನೂನು ಜಾರಿ ಸಂಸ್ಥೆಗಳಿಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.</p><p>ಗುರುನಾನಕ್ ಜನುಮಸ್ಥಾನ, ನಂಕಾನಾ ಸಾಹಿಬ್ನಲ್ಲಿ ಗುರುನಾನಕ್ ಅವರ ಜನ್ಮ ದಿನಾಚರಣೆಗೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಈ ತಿಂಗಳ ಆರಂಭದಲ್ಲಿ ಭಾರತದಿಂದ ವಾಘಾ ಗಡಿಯ ಮೂಲಕ ಲಾಹೋರ್ಗೆ ಪ್ರವೇಶಿಸಿದ್ದ 2,000 ಸಿಖ್ ಯಾತ್ರಿಕರಲ್ಲಿ ಕೌರ್ ಕೂಡ ಒಬ್ಬರು.</p><p>ನವೆಂಬರ್ 13ರಂದು, ಪಾಕ್ಗೆ ಭೇಟಿ ನೀಡಿದ್ದ ಭಾರತೀಯ ಸಿಖ್ಖರು ಬಳಿಕ ಸ್ವದೇಶಕ್ಕೆ ಮರಳಿದ್ದರು. ಆದರೆ, ಕೌರ್ ಮಾತ್ರ ನಾಪತ್ತೆಯಾಗಿದ್ದರು. ನಂತರ, ನವೆಂಬರ್ 4ರಂದು ಲಾಹೋರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.</p><p>ಯಾತ್ರಿಕರು ನಂಕಾನಾ ಸಾಹಿಬ್ಗೆ ಹೋಗಿದ್ದಾಗ ಕೌರ್ ಆ ಗುಂಪಿನಿಂದ ಹೊರಬಂದು ಹುಸೇನ್ ಜೊತೆಗೆ ಶೇಖುಪುರ ತಲುಪಿದ್ದರು.</p><p>ಈ ನಡುವೆ, ಪೊಲೀಸರು ಶೇಖುಪುರದ ಫಾರೂಕಾಬಾದ್ನಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆಸಿ, ಮದುವೆಯನ್ನು ಕೊನೆಗೊಳಿಸುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿ ಕಳೆದ ವಾರ, ಕೌರ್ ಮತ್ತು ಹುಸೇನ್ ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.</p><p>ಈ ಸಂದರ್ಭ ನ್ಯಾಯಮೂರ್ತಿ ಫಾರೂಕ್ ಹೈದರ್ ಅರ್ಜಿದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.</p><p>ಪೊಲೀಸ್ ಅಧಿಕಾರಿಯೊಬ್ಬರು ದಂಪತಿಗೆ ಅನಗತ್ಯ ಕಿರುಕುಳ ನೀಡಿದ್ದಾರೆ. ಮದುವೆಯನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಕೌರ್ ಅರ್ಜಿಯಲ್ಲಿ ತಿಳಿಸಿದ್ದರು.</p><p>ತನ್ನ ಪತಿ ಪಾಕಿಸ್ತಾನದ ಪ್ರಜೆಯಾಗಿದ್ದು, ತನ್ನ ವೀಸಾವನ್ನು ವಿಸ್ತರಿಸಲು ಮತ್ತು ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಪಡೆಯಲು ಇಲ್ಲಿನ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇನೆ ಎಂದು ಅವರು ತಿಳಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>