<p><strong>ನವದೆಹಲಿ:</strong> ‘ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರ ಗೆಲುವು, ಅಮೆರಿಕದ ಬಲಪಂಥೀಯ ಚಳವಳಿಗಳಿಗೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ನ್ಯೂಯಾರ್ಕ್ ನಗರದ ಉತ್ತರವಾಗಿದೆ’ ಎಂದು ಮಾಜಿ ಭಾರತೀಯ ರಾಯಭಾರಿ ವೇಣು ರಾಜಮಣಿ ಹೇಳಿದ್ದಾರೆ.</p>.<p>ಅಲ್ಲದೆ, ಇದನ್ನು ‘ಐತಿಹಾಸಿಕ ಗೆಲುವು’ ಎಂದು ಅಂತರರಾಷ್ಟ್ರೀಯ ವ್ಯವಹಾರಗಳ ತಜ್ಞರು ಬಣ್ಣಿಸಿದ್ದಾರೆ.</p>.<p>‘ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿಷಯವನ್ನೇ ಎತ್ತಿಕೊಂಡು ಚುನಾವಣೆಯನ್ನು ಎದುರಿಸಿದರು. ಇದು ಸಹ ಗೆಲುವಿಗೆ ಪ್ರಮುಖ ಕಾರಣವಾಯಿತು’ ಎಂದು ಮಾಜಿ ರಾಯಭಾರಿ ಅಶೋಕ್ ಕಾಂತಾ ಹೇಳಿದ್ದಾರೆ.</p>.<p>‘ಟ್ರಂಪ್ ಅವರು ಆ್ಯಂಡ್ರ್ಯೂ ಕೌಮೊ ಅವರನ್ನು ಬಹಿರಂಗವಾಗಿ ಬೆಂಬಲಿಸಿದರು. ಆದರೆ ಜನರು ಮಮ್ದಾನಿ ಅವರಿಗೆ ಮತ ಹಾಕಿದರು. ಉಚಿತ ಸಾರಿಗೆ ಮತ್ತು ಬಡವರಿಗೆ ವಸತಿ ಸೇರಿದಂತೆ ಮಮ್ದಾನಿ ಮಂಡಿಸಿರುವ ಸಮಾಜವಾದಿ ಕಾರ್ಯಸೂಚಿಯೂ ಅಷ್ಟೇ ಮುಖ್ಯವಾಗಿದೆ’ ಎಂದು ವೇಣು ರಾಜಮಣಿ ತಿಳಿಸಿದ್ದಾರೆ.</p>.<p>‘ಪ್ರಚಾರದ ಸಮಯದಲ್ಲಿ ಮಮ್ದಾನಿ ನೀಡಿದ ಮಹತ್ವಾಕಾಂಕ್ಷೆಯ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ’ ಎಂದೂ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತ ಸಂಜಾತ ಜೊಹ್ರಾನ್ ಮಮ್ದಾನಿ ಅವರ ಗೆಲುವು, ಅಮೆರಿಕದ ಬಲಪಂಥೀಯ ಚಳವಳಿಗಳಿಗೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ನ್ಯೂಯಾರ್ಕ್ ನಗರದ ಉತ್ತರವಾಗಿದೆ’ ಎಂದು ಮಾಜಿ ಭಾರತೀಯ ರಾಯಭಾರಿ ವೇಣು ರಾಜಮಣಿ ಹೇಳಿದ್ದಾರೆ.</p>.<p>ಅಲ್ಲದೆ, ಇದನ್ನು ‘ಐತಿಹಾಸಿಕ ಗೆಲುವು’ ಎಂದು ಅಂತರರಾಷ್ಟ್ರೀಯ ವ್ಯವಹಾರಗಳ ತಜ್ಞರು ಬಣ್ಣಿಸಿದ್ದಾರೆ.</p>.<p>‘ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿಷಯವನ್ನೇ ಎತ್ತಿಕೊಂಡು ಚುನಾವಣೆಯನ್ನು ಎದುರಿಸಿದರು. ಇದು ಸಹ ಗೆಲುವಿಗೆ ಪ್ರಮುಖ ಕಾರಣವಾಯಿತು’ ಎಂದು ಮಾಜಿ ರಾಯಭಾರಿ ಅಶೋಕ್ ಕಾಂತಾ ಹೇಳಿದ್ದಾರೆ.</p>.<p>‘ಟ್ರಂಪ್ ಅವರು ಆ್ಯಂಡ್ರ್ಯೂ ಕೌಮೊ ಅವರನ್ನು ಬಹಿರಂಗವಾಗಿ ಬೆಂಬಲಿಸಿದರು. ಆದರೆ ಜನರು ಮಮ್ದಾನಿ ಅವರಿಗೆ ಮತ ಹಾಕಿದರು. ಉಚಿತ ಸಾರಿಗೆ ಮತ್ತು ಬಡವರಿಗೆ ವಸತಿ ಸೇರಿದಂತೆ ಮಮ್ದಾನಿ ಮಂಡಿಸಿರುವ ಸಮಾಜವಾದಿ ಕಾರ್ಯಸೂಚಿಯೂ ಅಷ್ಟೇ ಮುಖ್ಯವಾಗಿದೆ’ ಎಂದು ವೇಣು ರಾಜಮಣಿ ತಿಳಿಸಿದ್ದಾರೆ.</p>.<p>‘ಪ್ರಚಾರದ ಸಮಯದಲ್ಲಿ ಮಮ್ದಾನಿ ನೀಡಿದ ಮಹತ್ವಾಕಾಂಕ್ಷೆಯ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ’ ಎಂದೂ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>