ಸೋಮವಾರ ಬೆಳಿಗ್ಗೆ ಇವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಘಟನೆಯಲ್ಲಿ ಅನಿಲ್ ಕಾಳೆ ಮೃತಪಟ್ಟು, ಜೋರ್ಡನ್ ಮೂಲದ ಮತ್ತೊಬ್ಬ ಮಹಿಳಾ ಅಧಿಕಾರಿ ಗಾಯಗೊಂಡಿದ್ದರು. ಯುದ್ಧ ಪೀಡಿತ ರಫಾದಲ್ಲಿರುವ ಯೂರೋಪಿಯನ್ ಆಸ್ಪತ್ರೆಗೆ ಅವರು ಪ್ರಯಾಣಿಸುತ್ತಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.
‘ಭಾರತದ ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ನಾವು ನಮ್ಮ ಕ್ಷಮೆ ಹಾಗೂ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಭಾರತದ ಕೊಡುಗೆಯನ್ನು ನಾವು ಪ್ರಶಂಸಿಸುತ್ತೇವೆ’ ಎಂದು ವಿಶ್ವಸಂಸ್ಥೆಯ ಉಪವಕ್ತಾರ ಫರ್ಹಾನ್ ಹಕ್ ಹಾಗೂ ಪ್ರಧಾನ ಕಾರ್ಯದರ್ಶಿ ಅಂಟನಿಯೊ ಗುಟೆರಸ್ ದೈನಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.