<p><strong>ದುಬೈ:</strong> ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್ನ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಷಿಯಲ್ ಲೀಡರ್ಶಿಪ್ ಮಂಡಳಿ’ಯು ಬುಧವಾರ ತಿಳಿಸಿದೆ.</p>.<p>ಮಾತುಕತೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಲು ನಿರಾಕರಿಸಿದ ಬಳಿಕ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಹುಥಿ ವಿರೋಧಿ ಪಡೆಗಳ ನಿಯಂತ್ರಣದಲ್ಲಿರುವ ಎಸ್ಎಬಿಎ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಸೌದಿ ಬೆಂಬಲಿತ ಪಡೆಗಳು ಮತ್ತು ಯುಎಇ ಬೆಂಬಲಿತ ದಕ್ಷಿಣ ಪ್ರತ್ಯೇಕತಾವಾದಿ ಮಂಡಳಿ (ಎಸ್ಟಿಸಿ) ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಎಸ್ಟಿಸಿ ನಾಯಕ ಐದಾರಸ್ ಅಲ್–ಜುಬೈದಿ ಉಚ್ಚಾಟನೆಯು ಹೊಸ ಬೆಳವಣಿಗೆಯಾಗಿದೆ. ಹುಥಿ ವಿರೋಧಿ ಗುಂಪಿನ ನಿರ್ಣಯದ ಬಗ್ಗೆ ಎಸ್ಟಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<p class="title">ಅಲ್–ಜುಬೈದಿ ಅವರು ಸದ್ಯ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ.</p>.<p>ಇದಕ್ಕೂ ಮುನ್ನ, ಯೆಮೆನ್ನಲ್ಲಿ ಸೌದಿ ನೇತೃತ್ವದ ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್–ಮಾಲ್ಕಿ ಅವರು, ‘ಐದಾರಸ್ ಅಲ್–ಜುಬೈದಿ ಸೌದಿ ಅರೇಬಿಯಾಕ್ಕೆ ತೆರಳಬೇಕಿತ್ತು. ಆದರೆ ಮಂಡಳಿಯ ಇತರ ಸದಸ್ಯರೊಂದಿಗೆ ಅವರು ಸೌದಿಗೆ ತೆರಳಿಲ್ಲ’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್ನ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಷಿಯಲ್ ಲೀಡರ್ಶಿಪ್ ಮಂಡಳಿ’ಯು ಬುಧವಾರ ತಿಳಿಸಿದೆ.</p>.<p>ಮಾತುಕತೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಲು ನಿರಾಕರಿಸಿದ ಬಳಿಕ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಹುಥಿ ವಿರೋಧಿ ಪಡೆಗಳ ನಿಯಂತ್ರಣದಲ್ಲಿರುವ ಎಸ್ಎಬಿಎ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಸೌದಿ ಬೆಂಬಲಿತ ಪಡೆಗಳು ಮತ್ತು ಯುಎಇ ಬೆಂಬಲಿತ ದಕ್ಷಿಣ ಪ್ರತ್ಯೇಕತಾವಾದಿ ಮಂಡಳಿ (ಎಸ್ಟಿಸಿ) ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಎಸ್ಟಿಸಿ ನಾಯಕ ಐದಾರಸ್ ಅಲ್–ಜುಬೈದಿ ಉಚ್ಚಾಟನೆಯು ಹೊಸ ಬೆಳವಣಿಗೆಯಾಗಿದೆ. ಹುಥಿ ವಿರೋಧಿ ಗುಂಪಿನ ನಿರ್ಣಯದ ಬಗ್ಗೆ ಎಸ್ಟಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p>.<p class="title">ಅಲ್–ಜುಬೈದಿ ಅವರು ಸದ್ಯ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ.</p>.<p>ಇದಕ್ಕೂ ಮುನ್ನ, ಯೆಮೆನ್ನಲ್ಲಿ ಸೌದಿ ನೇತೃತ್ವದ ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್–ಮಾಲ್ಕಿ ಅವರು, ‘ಐದಾರಸ್ ಅಲ್–ಜುಬೈದಿ ಸೌದಿ ಅರೇಬಿಯಾಕ್ಕೆ ತೆರಳಬೇಕಿತ್ತು. ಆದರೆ ಮಂಡಳಿಯ ಇತರ ಸದಸ್ಯರೊಂದಿಗೆ ಅವರು ಸೌದಿಗೆ ತೆರಳಿಲ್ಲ’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>