<p><strong>ಇಸ್ಲಾಮಾಬಾದ್ (ಪಿಟಿಐ): </strong>ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ತಪ್ಪಿತಸ್ಥರೆಂದು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶುಕ್ರವಾರ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿ, ಧೈರ್ಯವಿದ್ದರೆ ತಮ್ಮ ವಿರುದ್ಧ ಅವಿಶ್ವಾಸ ಮಂಡಿಸುವಂತೆ ಸವಾಲೆಸೆದಿದ್ದಾರೆ.<br /> <br /> ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, `ಸಭಾಧ್ಯಕ್ಷರನ್ನು ಹೊರತುಪಡಿಸಿ ಬೇರಾರಿಗೂ ತಮ್ಮನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ~ ಎಂದು ತಮ್ಮ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. <br /> <br /> `ಸಂವಿಧಾನದಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯವು ಸಭಾಧ್ಯಕ್ಷರನ್ನು ಬಿಟ್ಟು ಇತರರಿಗೆ ಸಂಸದರೊಬ್ಬರನ್ನು ಅನರ್ಹಗೊಳಿಸುವ ಅಧಿಕಾರ ನೀಡಿಲ್ಲ. ಸಭಾಧ್ಯಕ್ಷರಿಗೆ ಮಾತ್ರ ತಮ್ಮನ್ನು ಅನರ್ಹಗೊಳಿಸುವ ಅಧಿಕಾರವಿದ್ದು, ಅವರು ಹೇಳಿದರೆ ಈಗಲೇ ಹೊರಹೋಗಲು ಸಿದ್ಧ. ಅದು ಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದರು.<br /> <br /> ಮುಖ್ಯವಾಗಿ ತಮ್ಮ ರಾಜೀನಾಮೆ ಕೇಳಿದ ಪ್ರಮುಖ ವಿರೋಧಪಕ್ಷ ಪಿಎಂಎಲ್-ಎನ್ಗೆ ಅವಿಶ್ವಾಸ ಮಂಡಿಸುವಂತೆ ಸವಾಲು ಹಾಕಿದ ಗಿಲಾನಿ, `ಎಲ್ಲ ಸಾಂವಿಧಾನಿಕ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಅಂತಿಮ ನಿರ್ಣಾಯಕ ಸ್ಥಾನದಲ್ಲಿರುವ ಸಂಸತ್ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ~ ಎಂದು ಪ್ರತಿಕ್ರಿಯಿಸಿದರು. <br /> <br /> `ತಮ್ಮನ್ನು ಹಣಕಾಸು ಭ್ರಷ್ಟಾಚಾರ ಅಥವಾ ನೈತಿಕ ಅಧಃಪತನದ ಆಧಾರದಲ್ಲಿ ಶಿಕ್ಷೆಗೆ ಗುರಿಪಡಿಸಿಲ್ಲ. ದೇಶದ ಅಧ್ಯಕ್ಷರಿಗೆ ಕ್ಷಮಾದಾನ ನೀಡಿ, ಸಂವಿಧಾನವನ್ನು ರಕ್ಷಿಸಿದ ಕಾರಣಕ್ಕಾಗಿ ತಮಗೆ ಶಿಕ್ಷೆ ವಿಧಿಸಲಾಗಿದೆ~ ಎಂದು ಸಮರ್ಥಿಸಿಕೊಂಡರು.<br /> <br /> `ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದರಿಂದ ತಮ್ಮ ಮೇಲೆ ಈಗ ವಿಧಿಸಿರುವ ಶಿಕ್ಷೆಯೇ ಅಂತಿಮವಲ್ಲ~ ಎಂದೂ ಅವರು ಹೇಳಿದರು.`ತಮ್ಮನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಕ್ರಮಗಳಿದ್ದು, ಇದನ್ನು ಸಭಾಧ್ಯಕ್ಷರು ಮತ್ತು ಚುನಾವಣಾ ಆಯೋಗ ಮಾತ್ರ ಕೈಗೊಳ್ಳಬೇಕಿದೆ~ ಎಂದು ಅವರು ನುಡಿದರು.<br /> <br /> `ತಾವೊಬ್ಬ 18 ಕೋಟಿ ಮತದಾರರಿಂದ ಚುನಾಯಿತರಾದ ಪ್ರಧಾನಿಯಾಗಿದ್ದು, ಯಾರೋ ಬಯಸಿದ ಮಾತ್ರಕ್ಕೆ ತಮ್ಮನ್ನು ಹೊರಗೆಸೆಯಲಾಗದು~ ಎಂದು ಪ್ರತಿಪಕ್ಷಗಳಿಗೆ ಖಾರವಾಗಿ ತಿಳಿಸಿದರು. `ಮಾಜಿ ಪ್ರಧಾನಿಯೂ ಆಗಿರುವ ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಅವರೂ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ದೇಶದಿಂದ ಗಡೀಪಾರು ಸಹ ಆಗಿದ್ದರು.<br /> <br /> ಆದರೂ ತಮ್ಮ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ಯಾವಾಗಲೂ ಅವರ ರಾಜೀನಾಮೆಗೆ ಅಥವಾ ಅನರ್ಹತೆಗೆ ಒತ್ತಾಯಿಸಿಲ್ಲ~ ಎಂದೂ ಹೇಳಿದರು.<br /> <br /> <strong>`ರಾಜಕೀಯ ಗಲಭೆಗೆ ದಿಕ್ಸೂಚಿ~<br /> </strong><br /> <strong>ಇಸ್ಲಾಮಾಬಾದ್ (ಪಿಟಿಐ): </strong>ನ್ಯಾಯಾಂಗ ನಿಂದನೆಗಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ ಶಿಕ್ಷೆಗೊಳಗಾದ ಪ್ರಧಾನಿ ಯೂಸೂಫ್ ರಜಾ ಗಿಲಾನಿ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪಾಕ್ ಮಾಧ್ಯಮಗಳು, ಇದು ಮುಂದಿನ ರಾಜಕೀಯ ಗಲಭೆಯ ಮುನ್ಸೂಚನೆಯಾಗಿದ್ದು, ಚುನಾವಣೆಗಳು ಸನ್ನಿಹಿತವಾಗುವ ಆತಂಕ ವ್ಯಕ್ತಪಡಿಸಿವೆ. <br /> <br /> ಏಳು ಮಂದಿ ನ್ಯಾಯಮೂರ್ತಿಗಳ ಪೀಠ ಶಿಕ್ಷೆ ವಿಧಿಸಿರುವ ಸುದ್ದಿಯನ್ನು ಪಾಕ್ನ ಪ್ರಮುಖ ಇಂಗ್ಲಿಷ್, ಉರ್ದು ದೈನಿಕಗಳು ಮುಖಪುಟದಲ್ಲಿ ಪ್ರಕಟಿಸಿವೆ. ಈ ಪ್ರಕರಣ ದೇಶದ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. <br /> <br /> ಆಡಳಿತದಲ್ಲಿ ಗಿಲಾನಿ ಹಿಡಿತ ಸಾಧಿಸಿದ್ದರೂ, ಕೋರ್ಟ್ನಿಂದ ಪ್ರಧಾನಿಯೇ ಶಿಕ್ಷೆಗೊಳಗಾದ ಈ ಪ್ರಕರಣ ಮತ್ತೆ ರಾಜಕೀಯ ಅಸ್ಥಿರತೆಗೆ ದೂಡುವ ಲಕ್ಷಣಗಳಿವೆ ಎಂಬರ್ಥದಲ್ಲಿ ಪಾಕ್ನ ಇಂಗ್ಲಿಷ್ ಹಾಗೂ ದೈನಿಕಗಳು ವರದಿ ಮಾಡಿವೆ. <br /> <br /> ಪಾಕಿಸ್ತಾನದ ಈಗಿನ ರಾಜಕೀಯಕ್ಕೆ ಮಂಕು ಕವಿದಿದ್ದು ಸಾಕಷ್ಟು ಗೊಂದಲವಿದೆ. ಇಂತಹ ಸಂದರ್ಭದಲ್ಲಿ ಈ ಪ್ರಕರಣ ರಾಜಕೀಯ ಗಲಭೆಗೆ ಪುಷ್ಟಿ ನೀಡುವಂತಾಗಿದ್ದು, ತೀರ್ಪಿನಲ್ಲಿ ಸ್ಪಷ್ಟತೆಯೂ ಇಲ್ಲ ಎಂದು `ಡಾನ್~ ಪತ್ರಿಕೆ ವರದಿಯಲ್ಲಿ ತಿಳಿಸಿದೆ. ರಾಜಕೀಯ ಇತಿಹಾಸದಲ್ಲಿ ಇದೊಂದು ಕಪ್ಪು ಅಧ್ಯಾಯ ಎಂದು `ದಿ ನ್ಯೂಸ್~ ವರದಿ ಮಾಡಿದೆ. ಮತ್ತೊಂದು ಪ್ರಮುಖ ಇಂಗ್ಲಿಷ್ ದೈನಿಕ `ದಿ ಡೇಲಿ ಟೈಮ್ಸ~ನ ಅಗ್ರಸುದ್ದಿಯ ತಲೆಬರಹ ಹೀಗಿದೆ: ~ಶಿಕ್ಷೆ, ಜೈಲಿಗೆ, ಬಿಡುಗಡೆ- ಈ ಎಲ್ಲವೂ ಮುಗಿದದ್ದು 32 ಸೆಕೆಂಡ್ಗಳಲ್ಲಿ~</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ): </strong>ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಿಂದ ತಪ್ಪಿತಸ್ಥರೆಂದು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶುಕ್ರವಾರ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿ, ಧೈರ್ಯವಿದ್ದರೆ ತಮ್ಮ ವಿರುದ್ಧ ಅವಿಶ್ವಾಸ ಮಂಡಿಸುವಂತೆ ಸವಾಲೆಸೆದಿದ್ದಾರೆ.<br /> <br /> ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, `ಸಭಾಧ್ಯಕ್ಷರನ್ನು ಹೊರತುಪಡಿಸಿ ಬೇರಾರಿಗೂ ತಮ್ಮನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ~ ಎಂದು ತಮ್ಮ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. <br /> <br /> `ಸಂವಿಧಾನದಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯವು ಸಭಾಧ್ಯಕ್ಷರನ್ನು ಬಿಟ್ಟು ಇತರರಿಗೆ ಸಂಸದರೊಬ್ಬರನ್ನು ಅನರ್ಹಗೊಳಿಸುವ ಅಧಿಕಾರ ನೀಡಿಲ್ಲ. ಸಭಾಧ್ಯಕ್ಷರಿಗೆ ಮಾತ್ರ ತಮ್ಮನ್ನು ಅನರ್ಹಗೊಳಿಸುವ ಅಧಿಕಾರವಿದ್ದು, ಅವರು ಹೇಳಿದರೆ ಈಗಲೇ ಹೊರಹೋಗಲು ಸಿದ್ಧ. ಅದು ಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದರು.<br /> <br /> ಮುಖ್ಯವಾಗಿ ತಮ್ಮ ರಾಜೀನಾಮೆ ಕೇಳಿದ ಪ್ರಮುಖ ವಿರೋಧಪಕ್ಷ ಪಿಎಂಎಲ್-ಎನ್ಗೆ ಅವಿಶ್ವಾಸ ಮಂಡಿಸುವಂತೆ ಸವಾಲು ಹಾಕಿದ ಗಿಲಾನಿ, `ಎಲ್ಲ ಸಾಂವಿಧಾನಿಕ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಅಂತಿಮ ನಿರ್ಣಾಯಕ ಸ್ಥಾನದಲ್ಲಿರುವ ಸಂಸತ್ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ~ ಎಂದು ಪ್ರತಿಕ್ರಿಯಿಸಿದರು. <br /> <br /> `ತಮ್ಮನ್ನು ಹಣಕಾಸು ಭ್ರಷ್ಟಾಚಾರ ಅಥವಾ ನೈತಿಕ ಅಧಃಪತನದ ಆಧಾರದಲ್ಲಿ ಶಿಕ್ಷೆಗೆ ಗುರಿಪಡಿಸಿಲ್ಲ. ದೇಶದ ಅಧ್ಯಕ್ಷರಿಗೆ ಕ್ಷಮಾದಾನ ನೀಡಿ, ಸಂವಿಧಾನವನ್ನು ರಕ್ಷಿಸಿದ ಕಾರಣಕ್ಕಾಗಿ ತಮಗೆ ಶಿಕ್ಷೆ ವಿಧಿಸಲಾಗಿದೆ~ ಎಂದು ಸಮರ್ಥಿಸಿಕೊಂಡರು.<br /> <br /> `ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದರಿಂದ ತಮ್ಮ ಮೇಲೆ ಈಗ ವಿಧಿಸಿರುವ ಶಿಕ್ಷೆಯೇ ಅಂತಿಮವಲ್ಲ~ ಎಂದೂ ಅವರು ಹೇಳಿದರು.`ತಮ್ಮನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಕ್ರಮಗಳಿದ್ದು, ಇದನ್ನು ಸಭಾಧ್ಯಕ್ಷರು ಮತ್ತು ಚುನಾವಣಾ ಆಯೋಗ ಮಾತ್ರ ಕೈಗೊಳ್ಳಬೇಕಿದೆ~ ಎಂದು ಅವರು ನುಡಿದರು.<br /> <br /> `ತಾವೊಬ್ಬ 18 ಕೋಟಿ ಮತದಾರರಿಂದ ಚುನಾಯಿತರಾದ ಪ್ರಧಾನಿಯಾಗಿದ್ದು, ಯಾರೋ ಬಯಸಿದ ಮಾತ್ರಕ್ಕೆ ತಮ್ಮನ್ನು ಹೊರಗೆಸೆಯಲಾಗದು~ ಎಂದು ಪ್ರತಿಪಕ್ಷಗಳಿಗೆ ಖಾರವಾಗಿ ತಿಳಿಸಿದರು. `ಮಾಜಿ ಪ್ರಧಾನಿಯೂ ಆಗಿರುವ ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಅವರೂ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ದೇಶದಿಂದ ಗಡೀಪಾರು ಸಹ ಆಗಿದ್ದರು.<br /> <br /> ಆದರೂ ತಮ್ಮ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ಯಾವಾಗಲೂ ಅವರ ರಾಜೀನಾಮೆಗೆ ಅಥವಾ ಅನರ್ಹತೆಗೆ ಒತ್ತಾಯಿಸಿಲ್ಲ~ ಎಂದೂ ಹೇಳಿದರು.<br /> <br /> <strong>`ರಾಜಕೀಯ ಗಲಭೆಗೆ ದಿಕ್ಸೂಚಿ~<br /> </strong><br /> <strong>ಇಸ್ಲಾಮಾಬಾದ್ (ಪಿಟಿಐ): </strong>ನ್ಯಾಯಾಂಗ ನಿಂದನೆಗಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ ಶಿಕ್ಷೆಗೊಳಗಾದ ಪ್ರಧಾನಿ ಯೂಸೂಫ್ ರಜಾ ಗಿಲಾನಿ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪಾಕ್ ಮಾಧ್ಯಮಗಳು, ಇದು ಮುಂದಿನ ರಾಜಕೀಯ ಗಲಭೆಯ ಮುನ್ಸೂಚನೆಯಾಗಿದ್ದು, ಚುನಾವಣೆಗಳು ಸನ್ನಿಹಿತವಾಗುವ ಆತಂಕ ವ್ಯಕ್ತಪಡಿಸಿವೆ. <br /> <br /> ಏಳು ಮಂದಿ ನ್ಯಾಯಮೂರ್ತಿಗಳ ಪೀಠ ಶಿಕ್ಷೆ ವಿಧಿಸಿರುವ ಸುದ್ದಿಯನ್ನು ಪಾಕ್ನ ಪ್ರಮುಖ ಇಂಗ್ಲಿಷ್, ಉರ್ದು ದೈನಿಕಗಳು ಮುಖಪುಟದಲ್ಲಿ ಪ್ರಕಟಿಸಿವೆ. ಈ ಪ್ರಕರಣ ದೇಶದ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. <br /> <br /> ಆಡಳಿತದಲ್ಲಿ ಗಿಲಾನಿ ಹಿಡಿತ ಸಾಧಿಸಿದ್ದರೂ, ಕೋರ್ಟ್ನಿಂದ ಪ್ರಧಾನಿಯೇ ಶಿಕ್ಷೆಗೊಳಗಾದ ಈ ಪ್ರಕರಣ ಮತ್ತೆ ರಾಜಕೀಯ ಅಸ್ಥಿರತೆಗೆ ದೂಡುವ ಲಕ್ಷಣಗಳಿವೆ ಎಂಬರ್ಥದಲ್ಲಿ ಪಾಕ್ನ ಇಂಗ್ಲಿಷ್ ಹಾಗೂ ದೈನಿಕಗಳು ವರದಿ ಮಾಡಿವೆ. <br /> <br /> ಪಾಕಿಸ್ತಾನದ ಈಗಿನ ರಾಜಕೀಯಕ್ಕೆ ಮಂಕು ಕವಿದಿದ್ದು ಸಾಕಷ್ಟು ಗೊಂದಲವಿದೆ. ಇಂತಹ ಸಂದರ್ಭದಲ್ಲಿ ಈ ಪ್ರಕರಣ ರಾಜಕೀಯ ಗಲಭೆಗೆ ಪುಷ್ಟಿ ನೀಡುವಂತಾಗಿದ್ದು, ತೀರ್ಪಿನಲ್ಲಿ ಸ್ಪಷ್ಟತೆಯೂ ಇಲ್ಲ ಎಂದು `ಡಾನ್~ ಪತ್ರಿಕೆ ವರದಿಯಲ್ಲಿ ತಿಳಿಸಿದೆ. ರಾಜಕೀಯ ಇತಿಹಾಸದಲ್ಲಿ ಇದೊಂದು ಕಪ್ಪು ಅಧ್ಯಾಯ ಎಂದು `ದಿ ನ್ಯೂಸ್~ ವರದಿ ಮಾಡಿದೆ. ಮತ್ತೊಂದು ಪ್ರಮುಖ ಇಂಗ್ಲಿಷ್ ದೈನಿಕ `ದಿ ಡೇಲಿ ಟೈಮ್ಸ~ನ ಅಗ್ರಸುದ್ದಿಯ ತಲೆಬರಹ ಹೀಗಿದೆ: ~ಶಿಕ್ಷೆ, ಜೈಲಿಗೆ, ಬಿಡುಗಡೆ- ಈ ಎಲ್ಲವೂ ಮುಗಿದದ್ದು 32 ಸೆಕೆಂಡ್ಗಳಲ್ಲಿ~</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>