<p><strong>ನಮ್ಮ ಹಿಂದಿನ ತಲೆಮಾರಿನ ಲೇಖಕರ ಚಿಂತನೆಗಳು, ವಿದ್ವತ್ ವಿಶ್ಲೇಷಣೆಗಳು ವಿಸ್ಮೃತಿಗೆ ಜಾರದಂತೆ ಮಾಡುವ ಸಣ್ಣ ಪ್ರಯತ್ನ ಈ ಅಂಕಣ. ಎಸ್. ಅನಂತನಾರಾಯಣ ಅವರು 1962ರಲ್ಲಿ ಪ್ರಕಟಿಸಿದ `ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ~ ಪುಸ್ತಕದಿಂದ ಆಯ್ದ ಕೆಲ ಭಾಗಗಳು ಇಲ್ಲಿವೆ. <br /> </strong><br /> <br /> ಪ್ರಗಾಥವು ಭಾವಗೀತೆಯ ಮುಖ್ಯ ರೂಪಗಳಲ್ಲೊಂದು. ನಾವು `ಪ್ರಗಾಥ~ ಎಂಬ ಪದವನ್ನು The Ode ಎಂಬುದರ ಸಮಾನಾರ್ಥದಲ್ಲಿ ಉಪಯೋಗಿಸುತ್ತೇವೆ, `ಲಿರಿಕ್~ಗೆ `ಭಾವಗೀತೆ~ ಎಂಬ ಪದವನ್ನು ಪಯೋಗಿಸುತ್ತಿರುವಂತೆಯೇ ಇಂಗ್ಲಿಷಿನಲ್ಲಿ ಓಡ್ ಎಂಬುದು ಬೇರೆಯ ಒಂದು ಸ್ವತಂತ್ರ ಕಾವ್ಯ ರೂಪವಾಗಿತ್ತು. ಅದು ಕೂಟಗಾನ ಮತ್ತು ನರ್ತನ (Choric Song and Dance) ಗಳಿಗಾಗಿ ರಚಿತವಾಗುತ್ತಿದ್ದ ಹಾಡು.<br /> <br /> ಇಂಗ್ಲಿಷಿನಲ್ಲಿ ಲಿರಿಕ್ ಎಂಬ ಪದವು ಮಹಾಕಾವ್ಯ ಮತ್ತು ನಾಟಕ ಇವುಗಳನ್ನು ಬಿಟ್ಟು ಉಳಿದೆಲ್ಲ ಕಾವ್ಯಪ್ರಕಾರಕ್ಕೂ ಬಳಕೆಯಾಗುತ್ತಿರುವು ದರಿಂದ ಓಡ್ ಕೂಡ ಲಿರಿಕ್ನ ಒಂದು ರೂಪವೆಂದೇ ನಿಯತವಾಗಿದೆ. `ಸಣ್ಣ ಕವಿತೆಯೆಲ್ಲಕ್ಕೂ ಈ ಲಿರಿಕ್ ಎಂಬ ಪದವು ಬಳಕೆಯಾಗುತ್ತದೆ, ಆದ್ದರಿಂದ ಈ ಪದಕ್ಕೆ ತಾನು ನಿರ್ದೇಶಿಸುತ್ತಿರುವ ಕಾವ್ಯ ಕೃತಿಯ ವಸ್ತು ಅಥವಾ ಛಂದೋರೂಪ ಇವುಗಳ ಸಂಬಂಧ ಸ್ವಲ್ಪವೂ ಇಲ್ಲ. ವೈಯಕ್ತಿಕ ಕಾವ್ಯ ಮತ್ತು ಹಾಡುವ ಗುಣವುಳ್ಳ ಕಾವ್ಯಕ್ಕೆಲ್ಲ ಲಿರಿಕ್ ಪದವೇ ಉಪಯೋಗವಾಗುತ್ತಿದೆ~. <br /> <br /> ಅಂತೆಯೇ ಓಡ್ ಎನ್ನುವುದು ಲಿರಿಕ್ನ ಒಂದು ರೂಪವಾಗಿ ಎಣಿಸಲ್ಪಟ್ಟಿದೆ.<br /> ಇಂಗ್ಲಿಷಿನ ಲಿರಿಕ್ ಕನ್ನಡದ ಭಾವಗೀತೆಯಾದಂತೆಯೇ `ಓಡ್~ ಪ್ರಗಾಥವಾಯಿತು. ಪ್ರಗಾಥವು ಭಾವಗೀತೆಯ ಒಂದು ರೂಪ ಎಂದಾಯಿತು. `ಪ್ರಗಾಥ~ ಎಂಬ ಪದ ಬಹಳ ಹಿತವಾದ ಮತ್ತು ಹದವಾದ ಪದ. `ಗಾಥ~ ಎಂಬುದು ಹಾಡನ್ನು ಸೂಚಿಸುತ್ತದೆ. ಈ `ಹಾಡು~ತನವೇ ಓಡ್ನ ಮುಖ್ಯ ಲಕ್ಷಣ. ಓಡ್ ಎನ್ನುವುದು ಸಾಮಾನ್ಯವಾಗಿ ಪ್ರಾಸವುಳ್ಳ ಗೀತೆ. ಗಂಭೀರವಾದ ಮತ್ತು ಘನವಾದ ಶೈಲಿಯಲ್ಲಿರುತ್ತದೆ; ಬದಲಾಯಿಸುವ ಮತ್ತು ಅನಿಯತ ಛಂದಸ್ಸಿನಲ್ಲಿರುತ್ತದೆ. ಸಾಮಾನ್ಯವಾಗಿ 50 ರಿಂದ 200 ಸಾಲುಗಳಷ್ಟಿರುತ್ತದೆ.<br /> <br /> ಇದು ಸಂಬೋಧನೆಯ ರೂಪದಲ್ಲಿರುತ್ತದೆ. ವಸ್ತು, ಭಾವಗಳಲ್ಲಿಯೂ ಶೈಲಿಯಂತೆಯೇ ಗಂಭೀರವಾಗಿರುತ್ತದೆ. ಎಡ್ಮಂಡ್ ಗಾಸ್ ಅದನ್ನು `ಉತ್ಸಾಹಪೂರ್ಣ ಮತ್ತು ಗಂಭೀರವಾದ ಭಾವಗೀತೆ, ಒಂದೇ ಗುರಿಯನ್ನುಳ್ಳದ್ದು, ಪ್ರೌಢವಾದ ವಸ್ತುವಿನ ಬಗ್ಗೆ ಗಂಭೀರವಾದ ನಡೆಯುಳ್ಳದ್ದು~ ಎಂದು ನಿರ್ದೇಶಿಸಿದ್ದಾನೆ. ಇದರ ಲಕ್ಷಣಗಳ ಬಗ್ಗೆ ವಿಮರ್ಶಕರಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿದ್ದರೂ ಇದಲ್ಲಿ ಗಂಭೀರಶೈಲಿ ಮತ್ತು ಪ್ರೌಢವಾದ ವಸ್ತು ಇರಬೇಕೆಂದು ಎಲ್ಲ ವಿಮರ್ಶಕರೂ ಒಪ್ಪುತ್ತಾರೆ. <br /> <br /> ಸಾಧಾರಣವಾಗಿ ಪ್ರಾಸವುಳ್ಳದ್ದು, ಗಂಭೀರವಾದ ಕಾವ್ಯ (Majestic Poem) ಮತ್ತು ನಿರ್ದಿಷ್ಟ ಛಂದಸ್ಸಿಲ್ಲದುದು. ಈ ವಿಮರ್ಶಕರೇ ಹೇಳಿರುವಂತೆ ಗ್ರೀಕಿನ ಓಡ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇಂಗ್ಲೀಷಿಗೆ ತಂದುದೇ ಈ ರೀತಿಯ ಅವ್ಯವಸ್ಥೆಗೆ ಕಾರಣ.<br /> <br /> `ಓಡ್ ಎಂಬುದು ವಾದ್ಯದ ಜೊತೆಗೆ ಹಾಡಲು ಬರೆದ ಘೋಷ (Chant) ರೂಪವಾದ ಕವಿತೆ~ ಎಂದು ಗ್ರೀಕರಲ್ಲಿ ಪ್ರಚುರವಾಗಿದ್ದ ಅರ್ಥ. ಹಾಡುಗಬ್ಬವು ಕೂಟಗಾನವಾಗಿ ಓಡ್ ಆಯಿತು; ವೈಯಕ್ತಿಕ ಗಾನವಾಗಿ ಲಿರಿಕ್ ರೂಪವನ್ನು ಪಡೆಯಿತು. ಓಡ್ಗಳನ್ನು ಬರೆಯುವ ಕವಿಯ ಕೆಲಸ ಸುಲಭವಾಗಿರಲಿಲ್ಲ. ಛಂದಸ್ಸು ಮತ್ತು ಸಂಗೀತ ಅವುಗಳ ಆಳವಾದ ಅಭ್ಯಾಸವೂ ಮತ್ತು ಕೂಟನರ್ತನಗಳ ತೊಡಕು ನಡೆಗಳ ತಾಳಲಯಗಳೂ ಚೆನ್ನಾಗಿ ತಿಳಿದಿದ್ದು, ಒಂದಕ್ಕೊಂದನ್ನು ಹೊಂದಿಸಿಕೊಳ್ಳುವ ಶಕ್ತಿಯಿರಬೇಕಾಗಿತ್ತು.<br /> <br /> ಜಟಿಲ ಛಂದೋರೂಪಗಳು, ಸಂಗೀತ ಶಾಸ್ತ್ರ, ಮತ್ತು ನರ್ತನದ ಸಂಶ್ಲಿಷ್ಟ, ಜಟಿಲ ನಡೆಗಳು (Complex and intricate movements), ಇವುಗಳೆಲ್ಲವನ್ನೂ ಸಾಮರಸ್ಯದಿಂದ ಬೆಸೆದು ಓಡ್ಗಳನ್ನು ರಚಿಸಬೇಕಾಗಿತ್ತು. ಪಿಂಡಾರನ ಓಡ್ಗಳನ್ನು ನೋಡಿದರೆ ಎಷ್ಟು ಕಲಾತ್ಮಕವಾಗಿ ಈ ರೂಪವು ಬೆಳೆಯಿತೆಂಬುದು ತಿಳಿದು ಆಶ್ಚರ್ಯವಾಗುತ್ತದೆ. ಆದರೆ ವಿಮರ್ಶಕರೂ, ಕವಿಗಳೂ ಬಹಳ ಕಾಲದ ತನಕ ಪಿಂಡಾರನ ಓಡುಗಳಲ್ಲಿರುವ ನಿಯತ ಛಂದಸ್ಸನ್ನೇ ಆಗಲಿ, ನಿರೂಪಣೆಯ ವೈಖರಿಯನ್ನೇ ಆಗಲಿ ಗುರುತಿಸಿರಲಿಲ್ಲ. ಅವನದೆಲ್ಲ ನಿಯಮವಿಲ್ಲದ ರಚನೆಯೆಂದೇ ಎಲ್ಲರೂ ತಿಳಿದಿದ್ದರು. <br /> <br /> ಪಿಂಡಾರನ ಓಡಿನಂತಹ ರಚನೆಯನ್ನು ಇಂಗ್ಲಿಷಿಗೆ ತರಲು ಮೊತ್ತಮೊದಲ ಬಾರಿ ಪ್ರಯತ್ನಿಸಿದವನು ಅಬಹಾಂ ಕೌಲಿ . ಪಿಂಡಾರನ ಓಡುಗಳ ಕಟ್ಟಡ ಬಹಳ ಜಾಣ್ಮೆಯಿಂದ ಕಟ್ಟಿದುದೆಂಬ ಅರಿವು ಕೌಲಿಗಿತ್ತು. ಆದರೆ ಆ ಓಡುಗಳ ನಿಯಮವೇನೆಂಬುದರ ಗೊತ್ತು ಅವನಿಗಿರಲಿಲ್ಲ. ತನ್ನ ಓಡುಗಳನ್ನು ಕೌಲಿ ಪಿಂಡಾರನ ರೀತಿಯ ಓಡುಗಳು ಎಂದು ಕರೆದುದರಿಂದ ಜನರ ಮನಸ್ಸಿನಲ್ಲಿ ಒಂದು ತಪ್ಪು ಕಲ್ಪನೆ ಮೂಡಲು ಅವಕಾಶವಾಯಿತು. <br /> <br /> `ಓಡ್~ ಎನ್ನುವುದು ಗಂಭೀರವಾದ ಮತ್ತು ತೀವ್ರೋದ್ರೇಕವುಳ್ಳ ನಿಯತರೂಪವಿಲ್ಲದ ಕಾವ್ಯ. ಕವಿಯ ಉತ್ಸಾಹ ಹರಿದೆಡೆಗೆ ಹಾಯಿಯಾಗಲಿ ಹುಟ್ಟಾಗಲಿ ಇಲ್ಲದೆ ತೇಲಿ ಹೋಗುತ್ತದೆ~ ಎಂದು ಜನರಲ್ಲಿ ಕೌಲಿಯು ತಪ್ಪಭಿಪ್ರಾಯವನ್ನು ಮೂಡಿಸಿದನೆಂದು ಎಡ್ಮಂಡ್ ಗಾಸ್ ಹೇಳಿದಾನೆ.<br /> <br /> ಮತ್ತೊಂದು ಕಡೆಯಲ್ಲಿ ಲ್ಯಾಟಿನ್ ಕವಿಗಳ ಪ್ರಭಾವದಿಂದ ಭಾವಗೀತೆಯಂತಹ ಬೇರೆ ಬೇರೆ ನುಡಿಗಳುಳ್ಳ ಕವಿತೆಯ ರೂಪವಾಗಿಯೂ ಓಡ್ ಬೆಳೆಯಿತು. ಗ್ರೇ, ಷೆಲ್ಲಿ, ವರ್ಡ್ಸ್ವರ್ತ್, ಕೋಲ್ರಿಜ್ ಮುಂತಾದವರು ಈ ರೀತಿಯ ಓಡುಗಳನ್ನು ಬರೆದರು. <br /> `ಶ್ರೀ~ಯವರೇ ಪ್ರಗಾಥವನ್ನು ಕನ್ನಡಕ್ಕೆ ತಂದರು. <br /> <br /> ಇದಕ್ಕೆ ಹೆಸರನ್ನು ಸಂಸ್ಕೃತದಿಂದ ತಂದರೂ, ಈ ಭಾವಗೀತೆಯ ರೂಪವು ಇಂಗ್ಲಿಷ್ ಕಾವ್ಯದಿಂದಲೇ ಕನ್ನಡಕ್ಕೆ ಬಂದಿತೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕನ್ನಡದ ಪ್ರಗಾಥಗಳು ಇಂಗ್ಲಿಷಿನ ಓಡ್ಗಳಿಂದ ಸ್ಫೂರ್ತಿಗೊಂಡು ಬಂದುವು ಎಂಬುದನ್ನು ನೆನಪಿನಲ್ಲಿಡಬೇಕು....<br /> <br /> ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ~ ಎಂಬ ಹೆಸರಿನಲ್ಲೂ `ಶ್ರೀ~ ಯವರು `ಬಾನಾಡಿ~ ಎಂದೂ ಷೆಲ್ಲಿಯ `‘Ode to a skylark~ ಎಂಬುದನ್ನು ಅನುವಾದಿಸಿದರು. `ಶ್ರೀ~ಯವರ ಸ್ವತಂತ್ರ ಪ್ರಗಾಥಗಳು - `ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ~ (1927) `ಕನ್ನಡ ತಾಯ ನೋಟ~ ಮತ್ತು `ಶುಕ್ರಗೀತೆ~. <br /> <br /> `ರಜತ ಮಹೋತ್ಸವ ಪ್ರಗಾಥ~ ಬರೆದ ಸಂದರ್ಭ, ನಾಲ್ವಡಿ ಕೃಷ್ಣರಾಜ ಒಡೆಯರ 25 ವರ್ಷಗಳ ಆಳ್ವಿಕೆಯ ಸವಿಹಬ್ಬದಲ್ಲಿ .`ಕನ್ನಡ ತಾಯ್ ನೋಟ~ವನ್ನು ಬರೆದುದು ವಿಜಯನಗರ ಸಾಮ್ರಾಜ್ಯದ ಆರು ನೂರು ವರ್ಷದ ಹಬ್ಬದಲ್ಲಿ (1936) ಮತ್ತು `ಶುಕ್ರಗೀತೆ~ಯನ್ನು ರಚಿಸಿದುದು ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದಲ್ಲಿ (1941). ಈ ಮೂರು ಪ್ರಗಾಥಗಳಿಗೂ ಗಂಭೀರವಾದ ಹಿನ್ನೆಲೆಯಿದೆ. ಬರವಣಿಗೆಯ ಸಂದರ್ಭವೂ ಉತ್ಸಾಹ ತುಂಬಿದ ಹಬ್ಬ, ಗಂಭೀರ ಸನ್ನಿವೇಶ.<br /> <br /> `ಶ್ರೀ~ಯವರೇ ಅಲ್ಲದೆ ಕನ್ನಡದಲ್ಲಿ ಬೇರೆಯ ಕವಿಗಳೂ ಪ್ರಗಾಥಗಳನ್ನು ಬರೆದಿದಾರೆ. `ಶ್ರೀ~ ಯವರಿಗಿಂತಲೂ ಮೊದಲು `ಪ್ರಗಾಥ~ ಎಂಬ ಹೆಸರನ್ನುಪಯೋಗಿಸದಿದ್ದರೂ ಆ ರೂಪದ ಕವಿತೆಗಳನ್ನು ಕೆಲವರು ಬರೆದಿದ್ದರು. ಅವುಗಳಲ್ಲಿ ನಮಗೆ ತಿಳಿದ ಮಟ್ಟಿಗೆ, ಮೊತ್ತಮೊದಲು ಬಂದುದು 1912ರಲ್ಲಿ `ಶ್ರೀ ಕೃಷ್ಣ ಸೂಕ್ತಿ~ಯ ಸಂಪಾದಕರಾದ ಎನ್. ರಾಜಗೋಪಾಲ ಕೃಷ್ಣರಾಯರು ಬರೆದ `ಪಟ್ಟಾಭಿಷೇಕಾಷ್ಟಕಂ~ (Ode on the Coronation). ವೃತ್ತ. ಕಂದಗಳೇ ಈ ಕವಿತೆಯ ಛಂದಸ್ಸು. ಏಳುವೃತ್ತಗಳ, ಎರಡು ಕಂದ ಪದ್ಯಗಳಿರುವ ಈ ಕವಿತೆಯೂ ಮಂಗಳವನ್ನು ಕೋರುವ ಪದ್ಯವಾಗಿದೆ. ..... ಈ ಕವಿತೆಯ ಮೂಲವು ಕಾಳಿದಾಸನಲ್ಲಿದೆ. <br /> <br /> ಡಿ. ವಿ. ಗುಂಡಪ್ಪನವರು ಬರೆದಿರುವ `ಬೇಲೂರಿನ ಶಿಲಾಬಾಲಿಕೆಯರು~ ಮೊತ್ತ ಮೊದಲ ಪ್ರಗಾಥವೆಂದು ಹೇಳಬಹುದು. ಇದು `ಸೀಸಪದ್ಯದ ರೂಪದಲ್ಲಿದೆ. ಆರಂಭದಲ್ಲಿ ಮಾತ್ರ ಒಂದು ಕಂದ ಪದ್ಯ ಹೆಚ್ಚಾಗಿದ್ದರೂ ಇದನ್ನು ನಿಯತ ಪ್ರಗಾಥ (Regular Ode) ಎಂದು ಕರೆಯಬಹುದು. ಈ ಪ್ರಗಾಥಕ್ಕೆ ಎರಡು ಸ್ಫೂರ್ತಿಗಳಿವೆ. ಒಂದು ಸ್ಪೂರ್ತಿ ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾಬಾಲಿಕೆಯರ ಚೆಲುವು. ಆ ವಿಗ್ರಹಗಳ ಸೊಗಸು `ಸಂವೇದನೆ~ (sensatio)ಯ ರೂಪದಲ್ಲಿ ಕವಿ ಹೃದಯಕ್ಕೆ ಸ್ಫೂರ್ತಿಯನ್ನು ಕೊಟ್ಟಿತು. ಈ ಎರಡು ಸ್ಫೂರ್ತಿಗಳ ಸಮನ್ವಯವನ್ನು `ಬೇಲೂರಿನ ಶಿಲಾಬಾಲಕಿಯರ~ಲ್ಲಿ ಕಾಣುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಮ್ಮ ಹಿಂದಿನ ತಲೆಮಾರಿನ ಲೇಖಕರ ಚಿಂತನೆಗಳು, ವಿದ್ವತ್ ವಿಶ್ಲೇಷಣೆಗಳು ವಿಸ್ಮೃತಿಗೆ ಜಾರದಂತೆ ಮಾಡುವ ಸಣ್ಣ ಪ್ರಯತ್ನ ಈ ಅಂಕಣ. ಎಸ್. ಅನಂತನಾರಾಯಣ ಅವರು 1962ರಲ್ಲಿ ಪ್ರಕಟಿಸಿದ `ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ~ ಪುಸ್ತಕದಿಂದ ಆಯ್ದ ಕೆಲ ಭಾಗಗಳು ಇಲ್ಲಿವೆ. <br /> </strong><br /> <br /> ಪ್ರಗಾಥವು ಭಾವಗೀತೆಯ ಮುಖ್ಯ ರೂಪಗಳಲ್ಲೊಂದು. ನಾವು `ಪ್ರಗಾಥ~ ಎಂಬ ಪದವನ್ನು The Ode ಎಂಬುದರ ಸಮಾನಾರ್ಥದಲ್ಲಿ ಉಪಯೋಗಿಸುತ್ತೇವೆ, `ಲಿರಿಕ್~ಗೆ `ಭಾವಗೀತೆ~ ಎಂಬ ಪದವನ್ನು ಪಯೋಗಿಸುತ್ತಿರುವಂತೆಯೇ ಇಂಗ್ಲಿಷಿನಲ್ಲಿ ಓಡ್ ಎಂಬುದು ಬೇರೆಯ ಒಂದು ಸ್ವತಂತ್ರ ಕಾವ್ಯ ರೂಪವಾಗಿತ್ತು. ಅದು ಕೂಟಗಾನ ಮತ್ತು ನರ್ತನ (Choric Song and Dance) ಗಳಿಗಾಗಿ ರಚಿತವಾಗುತ್ತಿದ್ದ ಹಾಡು.<br /> <br /> ಇಂಗ್ಲಿಷಿನಲ್ಲಿ ಲಿರಿಕ್ ಎಂಬ ಪದವು ಮಹಾಕಾವ್ಯ ಮತ್ತು ನಾಟಕ ಇವುಗಳನ್ನು ಬಿಟ್ಟು ಉಳಿದೆಲ್ಲ ಕಾವ್ಯಪ್ರಕಾರಕ್ಕೂ ಬಳಕೆಯಾಗುತ್ತಿರುವು ದರಿಂದ ಓಡ್ ಕೂಡ ಲಿರಿಕ್ನ ಒಂದು ರೂಪವೆಂದೇ ನಿಯತವಾಗಿದೆ. `ಸಣ್ಣ ಕವಿತೆಯೆಲ್ಲಕ್ಕೂ ಈ ಲಿರಿಕ್ ಎಂಬ ಪದವು ಬಳಕೆಯಾಗುತ್ತದೆ, ಆದ್ದರಿಂದ ಈ ಪದಕ್ಕೆ ತಾನು ನಿರ್ದೇಶಿಸುತ್ತಿರುವ ಕಾವ್ಯ ಕೃತಿಯ ವಸ್ತು ಅಥವಾ ಛಂದೋರೂಪ ಇವುಗಳ ಸಂಬಂಧ ಸ್ವಲ್ಪವೂ ಇಲ್ಲ. ವೈಯಕ್ತಿಕ ಕಾವ್ಯ ಮತ್ತು ಹಾಡುವ ಗುಣವುಳ್ಳ ಕಾವ್ಯಕ್ಕೆಲ್ಲ ಲಿರಿಕ್ ಪದವೇ ಉಪಯೋಗವಾಗುತ್ತಿದೆ~. <br /> <br /> ಅಂತೆಯೇ ಓಡ್ ಎನ್ನುವುದು ಲಿರಿಕ್ನ ಒಂದು ರೂಪವಾಗಿ ಎಣಿಸಲ್ಪಟ್ಟಿದೆ.<br /> ಇಂಗ್ಲಿಷಿನ ಲಿರಿಕ್ ಕನ್ನಡದ ಭಾವಗೀತೆಯಾದಂತೆಯೇ `ಓಡ್~ ಪ್ರಗಾಥವಾಯಿತು. ಪ್ರಗಾಥವು ಭಾವಗೀತೆಯ ಒಂದು ರೂಪ ಎಂದಾಯಿತು. `ಪ್ರಗಾಥ~ ಎಂಬ ಪದ ಬಹಳ ಹಿತವಾದ ಮತ್ತು ಹದವಾದ ಪದ. `ಗಾಥ~ ಎಂಬುದು ಹಾಡನ್ನು ಸೂಚಿಸುತ್ತದೆ. ಈ `ಹಾಡು~ತನವೇ ಓಡ್ನ ಮುಖ್ಯ ಲಕ್ಷಣ. ಓಡ್ ಎನ್ನುವುದು ಸಾಮಾನ್ಯವಾಗಿ ಪ್ರಾಸವುಳ್ಳ ಗೀತೆ. ಗಂಭೀರವಾದ ಮತ್ತು ಘನವಾದ ಶೈಲಿಯಲ್ಲಿರುತ್ತದೆ; ಬದಲಾಯಿಸುವ ಮತ್ತು ಅನಿಯತ ಛಂದಸ್ಸಿನಲ್ಲಿರುತ್ತದೆ. ಸಾಮಾನ್ಯವಾಗಿ 50 ರಿಂದ 200 ಸಾಲುಗಳಷ್ಟಿರುತ್ತದೆ.<br /> <br /> ಇದು ಸಂಬೋಧನೆಯ ರೂಪದಲ್ಲಿರುತ್ತದೆ. ವಸ್ತು, ಭಾವಗಳಲ್ಲಿಯೂ ಶೈಲಿಯಂತೆಯೇ ಗಂಭೀರವಾಗಿರುತ್ತದೆ. ಎಡ್ಮಂಡ್ ಗಾಸ್ ಅದನ್ನು `ಉತ್ಸಾಹಪೂರ್ಣ ಮತ್ತು ಗಂಭೀರವಾದ ಭಾವಗೀತೆ, ಒಂದೇ ಗುರಿಯನ್ನುಳ್ಳದ್ದು, ಪ್ರೌಢವಾದ ವಸ್ತುವಿನ ಬಗ್ಗೆ ಗಂಭೀರವಾದ ನಡೆಯುಳ್ಳದ್ದು~ ಎಂದು ನಿರ್ದೇಶಿಸಿದ್ದಾನೆ. ಇದರ ಲಕ್ಷಣಗಳ ಬಗ್ಗೆ ವಿಮರ್ಶಕರಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿದ್ದರೂ ಇದಲ್ಲಿ ಗಂಭೀರಶೈಲಿ ಮತ್ತು ಪ್ರೌಢವಾದ ವಸ್ತು ಇರಬೇಕೆಂದು ಎಲ್ಲ ವಿಮರ್ಶಕರೂ ಒಪ್ಪುತ್ತಾರೆ. <br /> <br /> ಸಾಧಾರಣವಾಗಿ ಪ್ರಾಸವುಳ್ಳದ್ದು, ಗಂಭೀರವಾದ ಕಾವ್ಯ (Majestic Poem) ಮತ್ತು ನಿರ್ದಿಷ್ಟ ಛಂದಸ್ಸಿಲ್ಲದುದು. ಈ ವಿಮರ್ಶಕರೇ ಹೇಳಿರುವಂತೆ ಗ್ರೀಕಿನ ಓಡ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇಂಗ್ಲೀಷಿಗೆ ತಂದುದೇ ಈ ರೀತಿಯ ಅವ್ಯವಸ್ಥೆಗೆ ಕಾರಣ.<br /> <br /> `ಓಡ್ ಎಂಬುದು ವಾದ್ಯದ ಜೊತೆಗೆ ಹಾಡಲು ಬರೆದ ಘೋಷ (Chant) ರೂಪವಾದ ಕವಿತೆ~ ಎಂದು ಗ್ರೀಕರಲ್ಲಿ ಪ್ರಚುರವಾಗಿದ್ದ ಅರ್ಥ. ಹಾಡುಗಬ್ಬವು ಕೂಟಗಾನವಾಗಿ ಓಡ್ ಆಯಿತು; ವೈಯಕ್ತಿಕ ಗಾನವಾಗಿ ಲಿರಿಕ್ ರೂಪವನ್ನು ಪಡೆಯಿತು. ಓಡ್ಗಳನ್ನು ಬರೆಯುವ ಕವಿಯ ಕೆಲಸ ಸುಲಭವಾಗಿರಲಿಲ್ಲ. ಛಂದಸ್ಸು ಮತ್ತು ಸಂಗೀತ ಅವುಗಳ ಆಳವಾದ ಅಭ್ಯಾಸವೂ ಮತ್ತು ಕೂಟನರ್ತನಗಳ ತೊಡಕು ನಡೆಗಳ ತಾಳಲಯಗಳೂ ಚೆನ್ನಾಗಿ ತಿಳಿದಿದ್ದು, ಒಂದಕ್ಕೊಂದನ್ನು ಹೊಂದಿಸಿಕೊಳ್ಳುವ ಶಕ್ತಿಯಿರಬೇಕಾಗಿತ್ತು.<br /> <br /> ಜಟಿಲ ಛಂದೋರೂಪಗಳು, ಸಂಗೀತ ಶಾಸ್ತ್ರ, ಮತ್ತು ನರ್ತನದ ಸಂಶ್ಲಿಷ್ಟ, ಜಟಿಲ ನಡೆಗಳು (Complex and intricate movements), ಇವುಗಳೆಲ್ಲವನ್ನೂ ಸಾಮರಸ್ಯದಿಂದ ಬೆಸೆದು ಓಡ್ಗಳನ್ನು ರಚಿಸಬೇಕಾಗಿತ್ತು. ಪಿಂಡಾರನ ಓಡ್ಗಳನ್ನು ನೋಡಿದರೆ ಎಷ್ಟು ಕಲಾತ್ಮಕವಾಗಿ ಈ ರೂಪವು ಬೆಳೆಯಿತೆಂಬುದು ತಿಳಿದು ಆಶ್ಚರ್ಯವಾಗುತ್ತದೆ. ಆದರೆ ವಿಮರ್ಶಕರೂ, ಕವಿಗಳೂ ಬಹಳ ಕಾಲದ ತನಕ ಪಿಂಡಾರನ ಓಡುಗಳಲ್ಲಿರುವ ನಿಯತ ಛಂದಸ್ಸನ್ನೇ ಆಗಲಿ, ನಿರೂಪಣೆಯ ವೈಖರಿಯನ್ನೇ ಆಗಲಿ ಗುರುತಿಸಿರಲಿಲ್ಲ. ಅವನದೆಲ್ಲ ನಿಯಮವಿಲ್ಲದ ರಚನೆಯೆಂದೇ ಎಲ್ಲರೂ ತಿಳಿದಿದ್ದರು. <br /> <br /> ಪಿಂಡಾರನ ಓಡಿನಂತಹ ರಚನೆಯನ್ನು ಇಂಗ್ಲಿಷಿಗೆ ತರಲು ಮೊತ್ತಮೊದಲ ಬಾರಿ ಪ್ರಯತ್ನಿಸಿದವನು ಅಬಹಾಂ ಕೌಲಿ . ಪಿಂಡಾರನ ಓಡುಗಳ ಕಟ್ಟಡ ಬಹಳ ಜಾಣ್ಮೆಯಿಂದ ಕಟ್ಟಿದುದೆಂಬ ಅರಿವು ಕೌಲಿಗಿತ್ತು. ಆದರೆ ಆ ಓಡುಗಳ ನಿಯಮವೇನೆಂಬುದರ ಗೊತ್ತು ಅವನಿಗಿರಲಿಲ್ಲ. ತನ್ನ ಓಡುಗಳನ್ನು ಕೌಲಿ ಪಿಂಡಾರನ ರೀತಿಯ ಓಡುಗಳು ಎಂದು ಕರೆದುದರಿಂದ ಜನರ ಮನಸ್ಸಿನಲ್ಲಿ ಒಂದು ತಪ್ಪು ಕಲ್ಪನೆ ಮೂಡಲು ಅವಕಾಶವಾಯಿತು. <br /> <br /> `ಓಡ್~ ಎನ್ನುವುದು ಗಂಭೀರವಾದ ಮತ್ತು ತೀವ್ರೋದ್ರೇಕವುಳ್ಳ ನಿಯತರೂಪವಿಲ್ಲದ ಕಾವ್ಯ. ಕವಿಯ ಉತ್ಸಾಹ ಹರಿದೆಡೆಗೆ ಹಾಯಿಯಾಗಲಿ ಹುಟ್ಟಾಗಲಿ ಇಲ್ಲದೆ ತೇಲಿ ಹೋಗುತ್ತದೆ~ ಎಂದು ಜನರಲ್ಲಿ ಕೌಲಿಯು ತಪ್ಪಭಿಪ್ರಾಯವನ್ನು ಮೂಡಿಸಿದನೆಂದು ಎಡ್ಮಂಡ್ ಗಾಸ್ ಹೇಳಿದಾನೆ.<br /> <br /> ಮತ್ತೊಂದು ಕಡೆಯಲ್ಲಿ ಲ್ಯಾಟಿನ್ ಕವಿಗಳ ಪ್ರಭಾವದಿಂದ ಭಾವಗೀತೆಯಂತಹ ಬೇರೆ ಬೇರೆ ನುಡಿಗಳುಳ್ಳ ಕವಿತೆಯ ರೂಪವಾಗಿಯೂ ಓಡ್ ಬೆಳೆಯಿತು. ಗ್ರೇ, ಷೆಲ್ಲಿ, ವರ್ಡ್ಸ್ವರ್ತ್, ಕೋಲ್ರಿಜ್ ಮುಂತಾದವರು ಈ ರೀತಿಯ ಓಡುಗಳನ್ನು ಬರೆದರು. <br /> `ಶ್ರೀ~ಯವರೇ ಪ್ರಗಾಥವನ್ನು ಕನ್ನಡಕ್ಕೆ ತಂದರು. <br /> <br /> ಇದಕ್ಕೆ ಹೆಸರನ್ನು ಸಂಸ್ಕೃತದಿಂದ ತಂದರೂ, ಈ ಭಾವಗೀತೆಯ ರೂಪವು ಇಂಗ್ಲಿಷ್ ಕಾವ್ಯದಿಂದಲೇ ಕನ್ನಡಕ್ಕೆ ಬಂದಿತೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕನ್ನಡದ ಪ್ರಗಾಥಗಳು ಇಂಗ್ಲಿಷಿನ ಓಡ್ಗಳಿಂದ ಸ್ಫೂರ್ತಿಗೊಂಡು ಬಂದುವು ಎಂಬುದನ್ನು ನೆನಪಿನಲ್ಲಿಡಬೇಕು....<br /> <br /> ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ~ ಎಂಬ ಹೆಸರಿನಲ್ಲೂ `ಶ್ರೀ~ ಯವರು `ಬಾನಾಡಿ~ ಎಂದೂ ಷೆಲ್ಲಿಯ `‘Ode to a skylark~ ಎಂಬುದನ್ನು ಅನುವಾದಿಸಿದರು. `ಶ್ರೀ~ಯವರ ಸ್ವತಂತ್ರ ಪ್ರಗಾಥಗಳು - `ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ~ (1927) `ಕನ್ನಡ ತಾಯ ನೋಟ~ ಮತ್ತು `ಶುಕ್ರಗೀತೆ~. <br /> <br /> `ರಜತ ಮಹೋತ್ಸವ ಪ್ರಗಾಥ~ ಬರೆದ ಸಂದರ್ಭ, ನಾಲ್ವಡಿ ಕೃಷ್ಣರಾಜ ಒಡೆಯರ 25 ವರ್ಷಗಳ ಆಳ್ವಿಕೆಯ ಸವಿಹಬ್ಬದಲ್ಲಿ .`ಕನ್ನಡ ತಾಯ್ ನೋಟ~ವನ್ನು ಬರೆದುದು ವಿಜಯನಗರ ಸಾಮ್ರಾಜ್ಯದ ಆರು ನೂರು ವರ್ಷದ ಹಬ್ಬದಲ್ಲಿ (1936) ಮತ್ತು `ಶುಕ್ರಗೀತೆ~ಯನ್ನು ರಚಿಸಿದುದು ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದಲ್ಲಿ (1941). ಈ ಮೂರು ಪ್ರಗಾಥಗಳಿಗೂ ಗಂಭೀರವಾದ ಹಿನ್ನೆಲೆಯಿದೆ. ಬರವಣಿಗೆಯ ಸಂದರ್ಭವೂ ಉತ್ಸಾಹ ತುಂಬಿದ ಹಬ್ಬ, ಗಂಭೀರ ಸನ್ನಿವೇಶ.<br /> <br /> `ಶ್ರೀ~ಯವರೇ ಅಲ್ಲದೆ ಕನ್ನಡದಲ್ಲಿ ಬೇರೆಯ ಕವಿಗಳೂ ಪ್ರಗಾಥಗಳನ್ನು ಬರೆದಿದಾರೆ. `ಶ್ರೀ~ ಯವರಿಗಿಂತಲೂ ಮೊದಲು `ಪ್ರಗಾಥ~ ಎಂಬ ಹೆಸರನ್ನುಪಯೋಗಿಸದಿದ್ದರೂ ಆ ರೂಪದ ಕವಿತೆಗಳನ್ನು ಕೆಲವರು ಬರೆದಿದ್ದರು. ಅವುಗಳಲ್ಲಿ ನಮಗೆ ತಿಳಿದ ಮಟ್ಟಿಗೆ, ಮೊತ್ತಮೊದಲು ಬಂದುದು 1912ರಲ್ಲಿ `ಶ್ರೀ ಕೃಷ್ಣ ಸೂಕ್ತಿ~ಯ ಸಂಪಾದಕರಾದ ಎನ್. ರಾಜಗೋಪಾಲ ಕೃಷ್ಣರಾಯರು ಬರೆದ `ಪಟ್ಟಾಭಿಷೇಕಾಷ್ಟಕಂ~ (Ode on the Coronation). ವೃತ್ತ. ಕಂದಗಳೇ ಈ ಕವಿತೆಯ ಛಂದಸ್ಸು. ಏಳುವೃತ್ತಗಳ, ಎರಡು ಕಂದ ಪದ್ಯಗಳಿರುವ ಈ ಕವಿತೆಯೂ ಮಂಗಳವನ್ನು ಕೋರುವ ಪದ್ಯವಾಗಿದೆ. ..... ಈ ಕವಿತೆಯ ಮೂಲವು ಕಾಳಿದಾಸನಲ್ಲಿದೆ. <br /> <br /> ಡಿ. ವಿ. ಗುಂಡಪ್ಪನವರು ಬರೆದಿರುವ `ಬೇಲೂರಿನ ಶಿಲಾಬಾಲಿಕೆಯರು~ ಮೊತ್ತ ಮೊದಲ ಪ್ರಗಾಥವೆಂದು ಹೇಳಬಹುದು. ಇದು `ಸೀಸಪದ್ಯದ ರೂಪದಲ್ಲಿದೆ. ಆರಂಭದಲ್ಲಿ ಮಾತ್ರ ಒಂದು ಕಂದ ಪದ್ಯ ಹೆಚ್ಚಾಗಿದ್ದರೂ ಇದನ್ನು ನಿಯತ ಪ್ರಗಾಥ (Regular Ode) ಎಂದು ಕರೆಯಬಹುದು. ಈ ಪ್ರಗಾಥಕ್ಕೆ ಎರಡು ಸ್ಫೂರ್ತಿಗಳಿವೆ. ಒಂದು ಸ್ಪೂರ್ತಿ ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾಬಾಲಿಕೆಯರ ಚೆಲುವು. ಆ ವಿಗ್ರಹಗಳ ಸೊಗಸು `ಸಂವೇದನೆ~ (sensatio)ಯ ರೂಪದಲ್ಲಿ ಕವಿ ಹೃದಯಕ್ಕೆ ಸ್ಫೂರ್ತಿಯನ್ನು ಕೊಟ್ಟಿತು. ಈ ಎರಡು ಸ್ಫೂರ್ತಿಗಳ ಸಮನ್ವಯವನ್ನು `ಬೇಲೂರಿನ ಶಿಲಾಬಾಲಕಿಯರ~ಲ್ಲಿ ಕಾಣುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>