ಬುಧವಾರ, 2 ಜುಲೈ 2025
×
ADVERTISEMENT

ನಾಲ್ಕನೇ ಆಯಾಮ

ADVERTISEMENT

ಬದಲಾವಣೆ ಎಂಬುದು ಬರಿ ಭ್ರಮೆಯೇ?

ಆ ಯುವಕನಿಗೆ ತಲೆತುಂಬ ಕನಸು. ವಯಸ್ಸು ಕೇವಲ 32. ಯಾವುದೋ ಹಳ್ಳಿಯಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಮೇಲೆ ಬಂದಿದ್ದ. ಮೊದಲ ಬಾರಿಗೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಆಗಿದ್ದ. ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂದು ಆತ ಅಂದುಕೊಂಡಿದ್ದ. ಸರ್ಕಾರದ ಆಸ್ತಿ ಕಬಳಿಸಿದವರನ್ನು ಬಲಿ ಹಾಕಬೇಕು ಎಂದು ಅಂದುಕೊಂಡಿದ್ದ. ತಬರನಂತೆ ಸರ್ಕಾರಿ ಕಚೇರಿಗಳ ಕಂಬ ಕಂಬ ಸುತ್ತುವ ಬಡವರಿಗೆ ಸಹಾಯ ಮಾಡಬೇಕು ಎಂದುಕೊಂಡಿದ್ದ...
Last Updated 16 ಜೂನ್ 2018, 9:10 IST
fallback

ತೃತೀಯ ರಂಗ ಎಂಬ ಮಾಯಾಮೃಗದ ಬೆನ್ನು ಹತ್ತಿ...

ಅದು ಒಂದು ಹಳವಂಡ. ಸುಂದರ ಕನಸಿನಂಥ ಒಂದು ಘಟನೆ. 1996ನೇ ಇಸವಿ, ಲೋಕಸಭೆ ಚುನಾವಣೆ ಕಾಲ. ರಾಜ್ಯದಲ್ಲಿ ದಾಖಲೆ ಎನ್ನುವಂತೆ ಜನತಾದಳದ ಹದಿನಾರು ಮಂದಿ ಸಂಸದರು ಆಯ್ಕೆಯಾಗಿಬಿಟ್ಟರು. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿಬಿಟ್ಟರು. ಇವೆಲ್ಲ ನ ಭೂತೋ ನ ಭವಿಷ್ಯತಿ ಎನ್ನುವಂಥ ವಿದ್ಯಮಾನಗಳು. ಆದರೆ, ಅಂಥ ವಿದ್ಯಮಾನಗಳೇ ಮತ್ತೆ ಮತ್ತೆ ಘಟಿಸಬೇಕು ಎಂದು ಬಯಸುವುದು ಮನುಷ್ಯ ಸಹಜ ಸ್ವಭಾವ.
Last Updated 16 ಜೂನ್ 2018, 9:10 IST
ತೃತೀಯ ರಂಗ ಎಂಬ ಮಾಯಾಮೃಗದ ಬೆನ್ನು ಹತ್ತಿ...

ಅಪಭ್ರಂಶವೇ ಗುಣಧರ್ಮ ಎಂದೆನಿಸಬಾರದು

ಇತಿಹಾಸ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ‘ಇತಿಹಾಸ’ ಎನ್ನಬೇಕೋ ಬೇಡವೋ ತಿಳಿಯದು. ಆದರೆ, ಇತಿಹಾಸದಲ್ಲಿ ಎಲ್ಲವೂ ಒಳ್ಳೆಯದೇ ಇರಬೇಕು ಎಂದೇನಿಲ್ಲವಲ್ಲ? ಕೆಟ್ಟದ್ದೂ ಇರುತ್ತದೆ.
Last Updated 16 ಜೂನ್ 2018, 9:10 IST
fallback

ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದಿಲ್ಲ ಎಂಬುದು ಎಷ್ಟು ನಿಜ ಅಲ್ಲವೇ?

ಸರ್ಕಾರಕ್ಕೆ, ಅದು ಯಾವುದೇ ಇರಲಿ, ಅದಕ್ಕೆ ಭಾಷೆ ಎಂಬುದು ಒಂದು ಆದ್ಯತೆಯ ವಿಚಾರವೇ? ಕಾಳಜಿಯ ಸಂಗತಿಯೇ? ಈ ಪ್ರಶ್ನೆ ನನಗೆ ಅನೇಕ ವರ್ಷಗಳಿಂದ ಕಾಡಿದೆ. ಉತ್ತರ ‘ಅಲ್ಲ’ ಎಂದೇ ಸಿಕ್ಕಿದೆ. ರಾಜ್ಯ ರಚನೆಯಾಗಿ 58 ವರ್ಷಗಳೇ ಕಳೆದು ಹೋಗಿವೆ. ಯಾರಾದರೂ ಮುಖ್ಯಮಂತ್ರಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಅಥವಾ ಶಿಕ್ಷಣ ಖಾತೆ ತನ್ನ ಬಳಿ ಇರಲಿ ಎಂದು ಬಯಸಿ ಇಟ್ಟುಕೊಂಡಿದ್ದಾರೆಯೇ? ಹಣಕಾಸು, ಗೃಹ, ಅಬಕಾರಿ ಖಾತೆಗಳನ್ನು ಯಾರಾದರೂ ಮುಖ್ಯಮಂತ್ರಿ ಬಿಟ್ಟುಕೊಡಲು ಬಯಸುತ್ತಾರೆಯೇ? ಏಕೆ ಹೀಗೆ?
Last Updated 16 ಜೂನ್ 2018, 9:10 IST
fallback

ಪಕ್ಕದ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಮುಖ್ಯಮಂತ್ರಿ ಇಟ್ಟುಕೊಂಡು...

ಇನ್ಫೊಸಿಸ್‌ನ ಒಂದು ಘಟಕ ಕೂಡ ಆಂಧ್ರಕ್ಕೆ ಹೋಗಬಹುದು ಎಂಬ ಸುದ್ದಿ ಬರೀ ಹುಯಿಲು ಆಗಿರುವುದು ನಿಜಕ್ಕೂ ಒಳ್ಳೆಯದು. ನಾವು ಈಗ ಕೃಷಿಯ ಪರವಾಗಿಯೂ ಇರಬೇಕು. ಕೈಗಾರಿಕೆಗಳ ಪರವಾಗಿಯೂ ಇರಬೇಕು. ನಮ್ಮ ಪಕ್ಕದಲ್ಲಿಯೇ ಇರುವ ಒಂದು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಒಬ್ಬ ಮುಖ್ಯಮಂತ್ರಿ ಇದ್ದರೆ ನಾವು ಮೈಯೆಲ್ಲ ಕಣ್ಣಾಗಿ ಇರಬೇಕು. ಏಕೆಂದರೆ ಅವರು ನಮಗಿಂತ ದೂರ ನಡೆಯಲು ಸಿದ್ಧರಿದ್ದಾರೆ. ಕಾರಣ, ಅವರಿಗೆ ಈಗ ಉತ್ತಮವಾಗಿ ಆಡಳಿತ ಮಾಡಬೇಕು ಎಂಬ ಉದ್ದೇಶದ ಜತೆಗೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸೂ ಇದೆ. ನಮಗೆ ಅದೇ ಇರುವಂತೆ ಕಾಣುವುದಿಲ್ಲ.
Last Updated 16 ಜೂನ್ 2018, 9:10 IST
fallback

ಅರಾಜಕನ ಅಧಿಕಾರದ ಕನಸೂ... ಸಾಮಾನ್ಯರ ಬದುಕಿನ ಕನಸೂ...

ಒಬ್ಬ ಅದ್ಭುತ ಹೋರಾಟಗಾರ ಒಬ್ಬ ಒಳ್ಳೆಯ ಆಡಳಿತಗಾರ ಆಗಲಾರನೇ? ಆಡಳಿತಗಾರನಾಗಲು ಹೋರಾಟದ ಹಿನ್ನೆಲೆ ಇರಬೇಕೇ, ಇರಬಾರದೇ? ಆಡಳಿತ ಮಾಡಲು ವ್ಯವಸ್ಥೆಯ ಜತೆಗೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆಯೇ? ಈ ಪ್ರಶ್ನೆಗಳು ಮತ್ತೆ ಈಗ ಎದ್ದು ನಿಂತಿವೆ. ದೆಹಲಿ ರಾಜ್ಯಕ್ಕೆ ಮುಂದಿನ ತಿಂಗಳು ಮೊದಲ ವಾರ ಚುನಾವಣೆ ನಡೆಯಲಿದೆ. ತಾನು ‘ಅರಾಜಕ’ ಎಂದು ಹೇಳಿಕೊಂಡ ಅರವಿಂದ್ ಕೇಜ್ರಿವಾಲ್‌ ಮತ್ತೆ ಈಗ ಆ ಗದ್ದುಗೆ ಮೇಲೆ ಕಣ್ಣು ಹಾಕಿದ್ದಾರೆ.
Last Updated 16 ಜೂನ್ 2018, 9:10 IST
fallback

ಮುಖ್ಯಮಂತ್ರಿ ಗಾದಿ ಮತ್ತು ದಲಿತ ದ್ವಂದ್ವ

ಅಧಿಕಾರವೇ ಹಾಗೆ. ಒಂದು ಸಾರಿ ಅದರ ಬೆನ್ನು ಹತ್ತಿದರೆ ಅದು ಸಿಗುವವರೆಗೆ ನಮಗೆ ಸಮಾಧಾನ ಇರುವುದಿಲ್ಲ. ಸಮಾಧಾನದಿಂದ ಇರಲು ಅದು ನಮ್ಮನ್ನು ಬಿಡುವುದೂ ಇಲ್ಲ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗಬೇಕಿದೆ. ಕನಿಷ್ಠ ಉಪಮುಖ್ಯಮಂತ್ರಿ ಆಗಬೇಕಿದೆ. ಅವರಿಗೆ ಆ ಅರ್ಹತೆ ಇಲ್ಲ ಎಂದು ಅಲ್ಲ. ಆದರೆ, ಅವರಿಗೆ ಅದೃಷ್ಟ ಇಲ್ಲ. ಅದೃಷ್ಟ ಇದ್ದಿದ್ದರೆ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದೇ ಬಿಡುತ್ತಿದ್ದರು. ಗೆದ್ದಿದ್ದರೆ ಮೂಲ ಕಾಂಗ್ರೆಸ್ಸಿಗ ಪರಮೇಶ್ವರ್‌ ಮತ್ತು ವಲಸೆ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಗದ್ದುಗೆಗೆ ಪೈಪೋಟಿಯೇ ನಡೆಯುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು.
Last Updated 16 ಜೂನ್ 2018, 9:10 IST
ಮುಖ್ಯಮಂತ್ರಿ ಗಾದಿ  ಮತ್ತು ದಲಿತ ದ್ವಂದ್ವ
ADVERTISEMENT

ಪತ್ರಿಕೋದ್ಯಮಕ್ಕೆ ಇದು ಕೊನೆಯ ಅವಕಾಶವೇ?

ಪತ್ರಿಕೋದ್ಯಮ ಕಷ್ಟದಲ್ಲಿ ಇದೆಯೇ? ಅದು ಎಷ್ಟು ಕಷ್ಟದಲ್ಲಿ ಇದೆ ಎಂದರೆ ಅದನ್ನು ಸುಧಾರಿಸಲು ಇದು ಕೊನೆಯ ಅವಕಾಶವೇ? ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರ ಬಗ್ಗೆ ಜನರಿಗೆ ಅನುಮಾನಗಳು ಶುರುವಾಗಿವೆಯೇ? ಅವರನ್ನೂ ಭ್ರಷ್ಟರ ಪಟ್ಟಿಯಲ್ಲಿ ಜನರು ಸೇರಿಸಿ ಬಿಟ್ಟಿದ್ದಾರೆಯೇ? ಪತ್ರಿಕೋದ್ಯಮ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ?...
Last Updated 16 ಜೂನ್ 2018, 9:10 IST
fallback

ಅತಿದೊಡ್ಡ ಪ್ರಜಾತಂತ್ರವನ್ನು ಅತಿ ಶ್ರೇಷ್ಠ ಪ್ರಜಾತಂತ್ರ ಮಾಡುವ ದಾರಿಯಲ್ಲಿ...

ಪುಸ್ತಕಗಳೇ ಹಾಗೆ. ಕೆಲವು ವಿವಾದ ಹುಟ್ಟು ಹಾಕುವುದಕ್ಕೇ ಬರೆದಂತೆ ಇರುತ್ತವೆ. ಅವು ತಮ್ಮ ಸೀಮಿತ ಉದ್ದೇಶದಲ್ಲಿ ಸಫಲವೂ ಆಗುತ್ತವೆ. ಪುಸ್ತಕ ಇನ್ನೂ ಮಾರುಕಟ್ಟೆಗೆ ಬರುವುದಕ್ಕಿಂತ ಮುಂಚೆಯೇ ಅವು ಸುದ್ದಿ ಮಾಡುತ್ತವೆ, ಕಿಡಿ ಹೊತ್ತಿಸುತ್ತವೆ, ಇರಿಸು ಮುರಿಸು ಮಾಡುತ್ತವೆ. ಸಹಜವಾಗಿ ಜನರ ಕುತೂಹಲವನ್ನೂ ಕೆರಳಿಸುತ್ತವೆ. ಇದು ‘ಮಾರಾಟ’ದ ಕಾಲ.
Last Updated 16 ಜೂನ್ 2018, 9:10 IST
fallback

ಭಟ್ಟಂಗಿಗಳೂ, ಬಂದಳಿಕೆಗಳೂ ಮತ್ತು ಕಾಂಗ್ರೆಸ್‌ ಪಕ್ಷವೂ...

ಸೋಲು ಗೆಲುವಿನ ನಡುವಿನ ಅಂತರ ಬಹಳ ದೊಡ್ಡದು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭ ಈ ಅಂತರಕ್ಕೆ ದೊಡ್ಡ ನಿದರ್ಶನ ಇದ್ದಂತೆ ಇತ್ತು. ಟೀವಿ ಪರದೆ ಮೇಲೆ ಆಗಾಗ ಕಾಣಿಸುತ್ತಿದ್ದ ಸೋನಿಯಾ ಗಾಂಧಿಯವರ ಮುಖ ಮತ್ತಷ್ಟು ಸುಕ್ಕಾದಂತೆ ಇತ್ತು. ಆಕೆ ನತದೃಷ್ಟ ಹೆಣ್ಣುಮಗಳು. ಎರಡು ಸಾರಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ಒಂದು ಸಾರಿಯೂ ಪ್ರಧಾನಿ ಆಗಲಿಲ್ಲ...
Last Updated 16 ಜೂನ್ 2018, 9:10 IST
ಭಟ್ಟಂಗಿಗಳೂ, ಬಂದಳಿಕೆಗಳೂ  ಮತ್ತು ಕಾಂಗ್ರೆಸ್‌ ಪಕ್ಷವೂ...
ADVERTISEMENT
ADVERTISEMENT
ADVERTISEMENT